ಸುಳ್ಯ, ಪುತ್ತೂರು, ಬೆಳ್ತಂಗಡಿ ಬರಪೀಡಿತ: ಘೋಷಣೆಗೆ ಆಗ್ರಹ
Team Udayavani, Feb 9, 2017, 3:45 AM IST
ಮಂಗಳೂರು: ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಹೇಳಿದರು.
ಬುಧವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ, ಪುತ್ತೂರು, ಬೆಳ್ತಂಗಡಿಯನ್ನು ಕೂಡ ಬರಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ರೈತರ ಅಹವಾಲು ಇದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಬರಪೀಡಿತ ಪ್ರದೇಶಧಿವನ್ನಾಗಿ ಘೋಷಿಸಲಾಗಿದೆ. ಇದು ನಗರ ಪ್ರದೇಶವಾಗಿದ್ದು, ಇಲ್ಲಿ ರೈತರಿ ರುವ ಪ್ರಮಾಣ ಕಡಿಮೆ. ಹೆಚ್ಚು ರೈತರಿರುವ ಸುಳ್ಯ, ಪುತ್ತೂರು, ಬೆಳ್ತಂಗಡಿಧಿಯನ್ನು ಕೂಡ ಬರ ಪೀಡಿತ ಪ್ರದೇಶವನ್ನಾಗಿ ರಾಜ್ಯದ ಮುಖ್ಯ ಮಂತ್ರಿಗಳು ಘೋಷಿಸಬೇಕು ಎಂದರು.
ಸಾಲ ವಸೂಲಿ: ಬಲವಂತ ಬೇಡ ರಾಜ್ಯದಲ್ಲಿ ಬರದ ಛಾಯೆ ಹಾಗೂ ನೋಟು ಅಮಾನ್ಯಿಕರಣದ ಸಮಸ್ಯೆಯಿರುವುದರಿಂದ ಯಾವುದೇ ಬ್ಯಾಂಕ್ಗಳು ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬಾರದು. ಒಂದು ವೇಳೆ ಈ ರೀತಿ ಮಾಡಿದಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಕಾಂಗ್ರೆಸ್ ಕಿಸಾನ್ ಘಟಕ ಎಚ್ಚರಿಸುತ್ತದೆ ಎಂದರು.
ನ್ಯಾಯಾಂಗ ನಿಂದನೆ
ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಗೋರಖ್ ಸಿಂಗ್ ವರದಿಯನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಲಾಗಿದ್ದು, ಅದರ ತೀರ್ಪು ಫೆ. 20ರಂದು ಹೊರಬರಲಿದೆ. ತೀರ್ಪು ಘೋಷಣೆಯಾಗುವ ವರೆಗೂ ಯಾವುದೇ ಬ್ಯಾಂಕ್ ಅಡಿಕೆ ಬೆಳೆಗಾರರಿಂದ ಸಾಲದ ಹಣ ವಸೂಲಿಗೆ ಯತ್ನಿಸಿದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು. ಕೇಂದ್ರದ ಸರಕಾರ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಶೇ. 50ರಷ್ಟು ರೈತರ ಸಾಲ ಮನ್ನಾ ಮಾಡಿದಲ್ಲಿ ರಾಜ್ಯ ಸರಕಾರ ಸಹಕಾರಿ ಬ್ಯಾಂಕ್ಗಳಿಂದ ಶೇ. 50ರಷ್ಟು ರೈತರ ಸಾಲ ಮನ್ನಾ ಮಾಡುತ್ತದೆ ಎಂದು ತಿಳಿಸಿದ್ದರೂ ನಿರ್ಧಾರ ಕೈಗೊಂಡಿಲ್ಲ. ಕೇಂದ್ರ ರೈತ ಪರ ಬಜೆಟ್ ಮಂಡಿಸಧಿಲಾಗಿದೆ ಎಂದು ಹೇಳುತ್ತಿದ್ದು, ರೈತರ ಸಾಲ ಮನ್ನಾ ಮಾತ್ರ ಮಾಡುತ್ತಿಲ್ಲ. ಎನ್ಪಿಎ ಖಾತೆಯಲ್ಲಿ ರೈತರು 12 ತಿಂಗಳ ಪೈಕಿ 3 ತಿಂಗಳು ಸಾಲ ಬಾಕಿ ಮಾಡಿದಾಗ 12 ತಿಂಗಳ ಸಾಲವನ್ನು ಒಮ್ಮೆಲೆ ಕಟ್ಟಲು ಬ್ಯಾಂಕ್ಗಳು ನೋಟಿಸ್ ಕಳುಹಿಸಿವೆ. 3 ತಿಂಗಳ ಸಾಲ ಕಟ್ಟಲಾಗದ ರೈತರು 12 ತಿಂಗಳ ಸಾಲ ಒಮ್ಮೆಲೇ ಕಟ್ಟಲು ಹೇಗೆ ಸಾಧ್ಯ? ಇದು ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿಯವರ ನಡೆಯಿಂದ ರೈತರಿಗೆ, ಕಾರ್ಮಿಕರಿಗೆ, ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಗಳಾಗಿವೆ. ಲೋಕಸಭೆಯ ಚುನಾವಣೆಯ ವೇಳೆ ಗೌತಮ್ ಅದಾನಿ, ಅಂಬಾನಿ ಅವರಿಂದ ಹಣ ಪಡೆದು ಹೆಚ್ಚಿನ ಪ್ರಚಾರ ನೀಡಿದರು. ಈಗ ಉದ್ಯಮಿಗಳ ಹಣ ಹಿಂದಿರುಗಿಸುವಲ್ಲಿ ಇಕ್ಕಟ್ಟಿಗೆ ಸಿಲುಕಿ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರದ ಗಮನವನ್ನು ಬೇರೆಡೆ ಸೆಳೆದು ನಮ್ಮಲ್ಲಿಯೇ ಕಪ್ಪು ಹಣ ಇರುವುದಾಗಿ ತೋರಿಸಿ ಉದ್ಯಮಿಗಳ 1.14 ಲಕ್ಷ ಕೋಟಿ ರೂ. ಅನ್ನು ಮನ್ನಾ ಅಥವಾ ಬ್ಲ್ಯಾಕ್ಲಿಸ್ಟ್ ಹಾಕಿದ್ದಾರೆ. ಅಲ್ಲದೇ ಜಿಯೋ ಸಿಮ್ ಮೂಲಕ ಯುವಕರು 24 ಗಂಟೆಗಳಲ್ಲಿ 18 ಗಂಟೆಗಳ ಕಾಲ ಅಂತರ್ಜಾಲದಲ್ಲೇ ತೊಡಗಿಕೊಳ್ಳುವಂತೆ ಮಾಡಿದ್ದಾರೆ. 1.14 ಲಕ್ಷ ಕೋಟಿ ರೂ. ಮನ್ನಾ ಅಥವಾ ಬ್ಲ್ಯಾಕ್ ಲಿಸ್ಟ್ ಹಾಕಿರುವ ಬಗ್ಗೆ ದೇಶದ ಜನರಿಗೆ ತಿಳಿದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಪ್ರಧಾನಿ ಹಾಗೂ ಅಮಿತ್ ಶಾ ಅವರು ಪಕ್ಷದ ಮುಖಂಡರ ಕಪ್ಪು ಹಣವನ್ನು ವ್ಯವಸ್ಥಿತವಾಗಿ ರೂಪಾಂತರಗೊಳಿಸಿದ್ದಾರೆ ಎಂದು ಆರೋಪಿಸಿದರು.
ಉದ್ಯಮಿಗಳ ಪರವಾಗಿ ಪ್ರಧಾನಿಯವರು ನಿಂತಿದ್ದು, ಗೌತಮ್ ಅದಾನಿ ಅವರ ಮೇಲೆ ಪರಿಸರ ನಾಶದ ಹಿನ್ನೆಲೆಯಲ್ಲಿ ಯುಪಿಎ ಸರಕಾರ 200 ಕೋಟಿ ರೂ. ದಂಡ ಹೇರಿತ್ತು. ಆದರೆ, ಅದನ್ನು ಪ್ರಧಾನಿಯವರು ಹಿಂಪಡೆ ದಿದ್ದಾರೆ. ಆರ್ಬಿಐ ಗವರ್ನರ್ ರಘುರಾಮ್ ಅವರ ಬದಲಿಗೆ ಕಾರ್ಯತಂತ್ರ ರೂಪಿಸಿ ಊರ್ಜಿತ್ ಪಟೇಲ್ ನೇಮಿಸಿ ಅವ್ಯವಹಾರ ನಡೆಸಲು ಅವರನ್ನು ಕಪಿಮುಷ್ಟಿಯಲ್ಲಿರಿಸಿದೆ. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಕೈಗೊಂಡು 15,000 ಕೋಟಿ ರೂ. ಹಣ ಇದಕ್ಕೆ ಇರಿಸಲಾಗಿದ್ದು, ಇದರ ಬಗ್ಗೆ ಚರ್ಚೆಯಾಗು ತ್ತಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಉಮಾನಾಥ ಶೆಟ್ಟಿ, ನವೀನ್ ಕುಮಾರ್ ರೈ, ಭರತೇಶ್ ಅಮಿನ್, ನೀರಜ್ಪಾಲ್, ನಿತ್ಯಾನಂದ ಶೆಟ್ಟಿ, ಸಂತೋಷ್ ಶೆಟ್ಟಿ, ಅಶೋಕ್ ಚೂಂತಾರು, ಆನಂದ ರಾವ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
ಅವೈಜ್ಞಾನಿಕ ವಿಮಾ ಯೋಜನೆ
ಬೆಳೆ ನಷ್ಟದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆ ಸರಕಾರ ಫಸಲು ವಿಮಾ ಯೋಜನೆ ತಂದಿಟ್ಟು, ಉದ್ಯಮಿಗಳಿಗೆ ದುಡ್ಡು ಕೊಡಲು ವ್ಯವಸ್ಥೆ ಮಾಡಿದಂತಿದೆ. ಈ ಯೋಜನೆಯಡಿ ಒಂದು ಹೋಬಳಿಯಲ್ಲಿ ಹೋಬಳಿ ಮಟ್ಟದ ಪೂರ್ತಿ ಕೃಷಿ ನಾಶವಾದಲ್ಲಿ ಮಾತ್ರ ರೈತರಿಗೆ ವಿಮೆ ಸಿಗುತ್ತದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಹೋಬಳಿ ಮಟ್ಟದ ಬದಲಾಗಿ ವ್ಯಕ್ತಿಗತವಾಗಿ ಬೆಳೆ ನಷ್ಟವಾದಲ್ಲಿ ರೈತರಿಗೆ ಫಸಲು ವಿಮಾ ಯೋಜನೆಯಡಿ ಪರಿಹಾರ ದೊರಕಬೇಕು. 15,000 ಕೋಟಿ ರೂ. ಬಜೆಟ್ನಲ್ಲಿರಿಸಿರುವ ಪ್ರಧಾನಿ ಗೌತಮ್ ಅದಾನಿ ಅವರ ಸಂಸ್ಥೆಗೆ ಲಾಭ ಮಾಡಲು ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ