ಪಾಂಡವಪುರ ಅಪಘಾತ :ಮಂಗಳೂರು ಮೂಲದ ಬಸ್‌; 18 ವರ್ಷ ಹಳತು!


Team Udayavani, Nov 25, 2018, 9:00 AM IST

rajakuma-bus.jpg

ಮಂಗಳೂರು: ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಶನಿವಾರ 30ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ “ರಾಜ್‌ಕುಮಾರ್‌’ ಹೆಸರಿನ ನತದೃಷ್ಟ ಖಾಸಗಿ ಬಸ್‌ ಮಂಗಳೂರು ಮೂಲದ್ದಾಗಿದ್ದು, ಬರೋಬ್ಬರಿ 18 ವರ್ಷಗಳಷ್ಟು ಹಳೆಯದು! 

ಈ ಬಸ್ಸಿನ ಮೊದಲ ರಿಜಿಸ್ಟ್ರೇಶನ್‌ 2001ರಲ್ಲಿ ಶಂಕರ ವಿಠಲ ಕಂಪೆನಿಯ ಹೆಸರಿನಲ್ಲಿ ಆಗಿದ್ದು, ಆ ಬಳಿಕ ಮಂಗಳೂರಿನಲ್ಲಿ ಈ ಬಸ್‌ 8 ಮಂದಿ ಮಾಲಕರನ್ನು ಕಂಡಿತ್ತು. ಹದಿಮೂರು ವರ್ಷಗಳ ಹಿಂದೆ ಈ ಬಸ್‌ ಆರ್‌.ಕೆ. (ರಾಜ್‌ಕುಮಾರ್‌) ಟ್ರಾವೆಲ್ಸ್‌ ಮಾಲಕತ್ವದಲ್ಲಿ ಮಂಗಳೂರು- ಬಳ್ಕುಂಜೆ- ಕಟೀಲು ಮಾರ್ಗವಾಗಿ ಕಾರ್ಯಾಚರಿಸುತ್ತಿತ್ತು.

ಆರ್‌.ಕೆ. ಟ್ರಾವೆಲ್ಸ್‌ ಸಂಸ್ಥೆಯವರು 13 ವರ್ಷಗಳ ಹಿಂದೆ ಈ ಬಸ್‌ನ್ನು ಮಾರಾಟ ಮಾಡಿದ್ದರು. ಆ ಬಳಿಕ ಹಲವು ಮಂದಿ ಮಾಲಕರ ಕೈ ಬದಲಾವಣೆಗೊಂಡು 2015ರಲ್ಲಿ ಮಂಡ್ಯದ ಶ್ರೀನಿವಾಸ್‌ (ಅವರು ಈ ಬಸ್‌ನ 9ನೇ ಮಾಲಕರು) ಅವರಿಗೆ ಮಾರಾಟವಾಗಿತ್ತು. 

ಕೊನೆಯದಾಗಿ ಈ ಬಸ್‌ ಮಂಗಳೂರು ನಗರದಲ್ಲಿ ರೂಟ್‌ ನಂಬರ್‌ 16 (ಸ್ಟೇಟ್‌ ಬ್ಯಾಂಕ್‌- ಸುಲ್ತಾನ್‌ ಬತ್ತೇರಿ) ಮಾರ್ಗದಲ್ಲಿ ಓಡಾಡುತ್ತಿತ್ತು. ಬಸ್‌ಗೆ 15 ವರ್ಷ ಮೇಲ್ಪಟ್ಟ ಕಾರಣ ಹಾಗೂ ಜಿಲ್ಲೆಯಲ್ಲಿ ಸಂಚರಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರವಾನಿಗೆ ನೀಡದ ಕಾರಣ ಅದನ್ನು ಮಾರಾಟ ಮಾಡಲಾಗಿತ್ತು ಎಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್‌ ಮಿಸ್ಕಿತ್‌ ಮಾಹಿತಿ ನೀಡಿದ್ದಾರೆ.

“ರಾಜ್‌ಕುಮಾರ್‌’ ಎಂಬ ಹೆಸರು ಚೆನ್ನಾಗಿದೆ ಅಂದುಕೊಂಡ ಕಾರಣ ಈ ಬಸ್‌ನ ಹೆಸರನ್ನು ಬದಲಾಯಿಸದೆ ಇರಲು ಅದರ ಹಾಲಿ ಮಾಲಕರು ನಿರ್ಧರಿಸಿರಬಹುದು. ಹಾಗಾಗಿ ಇವತ್ತಿಗೂ ಅದು ಹಿಂದಿನ ಹೆಸರಿನಲ್ಲಿಯೇ ಓಡಾಡುತ್ತಿತ್ತು ಎಂದು 13 ವರ್ಷಗಳ ಹಿಂದೆ ಇದನ್ನು ಮಾರಾಟ ಮಾಡಿದ್ದ ಆರ್‌.ಕೆ. ಟ್ರಾವೆಲ್ಸ್‌ನ ಮಾಲಕರಾದ ಶಿವರಾಜ್‌ ಶೆಟ್ಟಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.