ಸರಳ ವಿಧಾನ ಅನುಸರಿಸಿ ಜಲ ಮರುಪೂರಣ ವ್ಯವಸ್ಥೆ ಅಳವಡಿಕೆ
"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Sep 17, 2019, 5:14 AM IST
ಕುಲಶೇಖರ: ಬೋರ್ವೆಲ್ಗೆ ಜಲ ಮರುಪೂರಣ ಕುಲಶೇಖರ ಜಯಶ್ರೀ ಗೇಟ್ನ ಸುನಿಲ್ ಕುಂದರ್ ಅವರ ಮನೆಯ ಬೋರ್ವೆಲ್ಗೆ ಜಲ ಮರುಪೂರಣ ವ್ಯವಸ್ಥೆ ಕೈಗೊಳ್ಳಲಾಗಿದೆ. ಸರಳ ವಿಧಾನದ ಮೂಲಕ ಈ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಯಥೇಚ್ಛ ನೀರು ಪಡೆಯುವ ವಿಶ್ವಾಸ ಅವರದು.
ಬೋರ್ವೆಲ್ ಪಕ್ಕ ಎಂಟು ಅಡಿ ಆಳದ ಗುಂಡಿ ತೋಡಲಾಗಿದ್ದು, ಜಲ್ಲಿ, ಮರಳು, ಇದ್ದಿಲನ್ನು ಕ್ರಮವಾಗಿ ಗುಂಡಿಯಲ್ಲಿ ಹಾಕಲಾಗಿದೆ. ಚಾವಣಿ ನೀರನ್ನು ಒಂದೆಡೆ ಹಿಡಿದಿಟ್ಟು ಪೈಪ್ ಮುಖಾಂತರ ಈ ಗುಂಡಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ನಡುವೆ ನೀರು ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. “ಪ್ರಸ್ತುತ ನೀರಿನ ಅಭಾವ ಎಲ್ಲ ಕಡೆಯೂ ಬಹಳವಾಗಿಯೇ ಇದೆ. ಭವಿಷ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುವ ಮುನ್ನ ನಾವೆಲ್ಲರು ಎಚ್ಚೆತ್ತುಕೊಂಡು ಮಳೆ ನೀರಿಂಗಿಸುವ ವಿಧಾನಕ್ಕೆ ಮುಂದಾಗಬೇಕು. ತತ್ಕ್ಷಣಕ್ಕೇ ಅಲ್ಲದಿದ್ದರೂ ಭವಿಷ್ಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲು ಇದು ಕಾರಣವಾಗುತ್ತದೆ’ ಎನ್ನುವುದು ಸುನಿಲ್ ಕುಂದರ್ ಅವರ ಮಾತು.
ಸರಕಾರವೂ ಮುತುವರ್ಜಿ ವಹಿಸಲಿ
“ಮನೆಮನೆಗೆ ಮಳೆಕೊಯ್ಲು’ ಅಭಿಯಾನದ ಮುಖಾಂತರ ಉದಯವಾಣಿಯು ಜನರಲ್ಲಿ ಜಲಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪತ್ರಿಕೆಯ ಈ ಅಭಿಯಾನಕ್ಕೆ ಸರಕಾರವೂ ಕೈ ಜೋಡಿಸಿ ಗ್ರಾಮ ಮಟ್ಟದಿಂದಲೇ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಮಳೆಕೊಯ್ಲು ಅಳವಡಿಸಲು ಉತ್ತೇಜನ ನೀಡಬೇಕು.
– ಆಲ್ವಿನ್ ಸೆರಾವೋ, ಪಾಲಡ್ಕ
ಸುತ್ಯರ್ಹ ಕೆಲಸ
ಮನೆ ಮನೆಗೆ ಮಳೆ ಕೊಯ್ಲು ಅಭಿಯಾನ ನೀರಿನ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸವನ್ನು ಕರಾವಳಿ ಓದುಗರ ನಾಡಿಮಿಡಿತ ಉದಯವಾಣಿ ಶತದಿನೋತ್ಸವದತ್ತ ಮಾಡಿಕೊಂಡು ಬರುತ್ತಿದೆ. ಇದು ಅಭಿನಂದನೀಯ ಕಾರ್ಯ. ಮಳೆ ಕೊಯ್ಲು ಪ್ರತಿಯೊಂದು ಮನೆಗಳಲ್ಲಿ ಸರಕಾರದ ಇಲಾಖೆಗಳಲ್ಲಿ ಸಾರ್ವಜನಿಕವಾಗಿ ಕಡ್ಡಾಯ ಎಲ್ಲರೂ ತೆರೆದ ಮನಸ್ಸಿನಿಂದ ಜಾಗೃತಿ ಮೂಡಿಸುವ ಕೆಲಸ ಮಾಡ ಬೇಕಾಗಿದೆ. ಮಳೆಕೊಯ್ಲು ಮಾಹಿತಿ ಜನರಿಗೆ ಮನಮುಟ್ಟು ವಂತೆ ಮಾಡಲು ಹೊರಟಿರುವ ಉದಯವಾಣಿ ಇನ್ನೂ ಒಂದಷ್ಟು ಕಾಲ ಮುಂದುವರಿಸಿಕೊಂಡು ಹೋಗಲಿ ಅನ್ನುವುದೇ ಜನಸಾಮಾನ್ಯರ ಆಶಯ.
- ಚಂದ್ರಹಾಸ , ಕೋಟೆಕಾರ್
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ
ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ ಪರಿಸರದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು