“ಚಲನಚಿತ್ರ ವೀಕ್ಷಣೆ ವಿಮರ್ಶಾತ್ಮಕವಾದಾಗ ರಸಗ್ರಹಣ ಸಾಧ್ಯ’
Team Udayavani, Apr 25, 2019, 6:30 AM IST
ಉಡುಪಿ: ಚಲನಚಿತ್ರಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪ್ರಭಾವದ ಹಿನ್ನೆಲೆ ಇದೆ. ನಿರ್ದೇಶಕ ದೃಶ್ಯ, ಶ್ರಾವ್ಯ ಹಾಗೂ ತಾಂತ್ರಿಕತೆಯನ್ನು ಬಳಸಿಕೊಂಡು ತನ್ನ ಉದ್ದೇಶಕ್ಕೆ ತಕ್ಕನಾಗಿ ಚಿತ್ರೀಕರಿಸುತ್ತಾನೆ. ಆದರೆ ಪ್ರೇಕ್ಷಕ ಚಲನಚಿತ್ರಗಳನ್ನು ವೀಕ್ಷಿಸುವಾಗ ಸತ್ಯಾಸತ್ಯತೆಯ ಅರಿವಿನ ಪ್ರಜ್ಞೆಯಿಂದ ವೀಕ್ಷಿಸಬೇಕೇ ಹೊರತು ಭಾವುಕರಾಗಿ ಅಲ್ಲ. ಪ್ರೇಕ್ಷಕ ಗ್ರಾಹಕ ಬಯಕೆಗಳನ್ನು ಮೀರಿ, ಚಲನಚಿತ್ರಗಳನ್ನು ನೋಡುವುದಕ್ಕಿಂತ ವಿಮಶಾìತ್ಮಕವಾಗಿ ಕಾಣುವುದರ ಮೂಲಕ ಅರ್ಥೈಸಿಕೊಂಡಾಗ ‘ರಸಗ್ರಹಣ’ ಸಾಧ್ಯ ಎಂದು ಚಲನಚಿತ್ರ ವಿಮರ್ಶಕ ಪ್ರೊ| ಕೆ. ಫಣಿರಾಜ್ ಹೇಳಿದರು.
ಡಾ| ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ತೃತೀಯ ಸೆಮಿಸ್ಟರ್ ವಿದ್ಯಾರ್ಥಿ ಶಿಕ್ಷಕರಿಗಾಗಿ ನಡೆದ “ಚಲನಚಿತ್ರ ರಸಗ್ರಹಣ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಚಲನಚಿತ್ರ ತಾಂತ್ರಿಕತೆ ಮತ್ತು ಅದು ಜನಸಾಮಾನ್ಯರ ಮೇಲೆ ಬೀರುವ ಪರಿಣಾಮ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಕಾಲೇಜಿನ ಸಮನ್ವಯಾಧಿಕಾರಿ ಡಾ| ಮಹಾಬಲೇಶ್ವರ ರಾವ್ ಕಾರ್ಯಾಗಾರದ ಉದ್ದೇಶ ನಿರೂಪಿಸಿದರು. ಖ್ಯಾತ ಕತೆಗಾರ್ತಿ ವೈದೇಹಿ ಅವರ “ದಾಳಿ’ ಕಥಾಧಾರಿತ ಮೇದಿನಿ ಕೆಳಮನೆ ನಿರ್ದೇಶನದ ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ