ಅಶಕ್ತರ ನೆರವಿಗೆ ಬಾಟಲ್ ನೀರು ಮಾರುವ ಯುವಕರ ತಂಡ
ನಾಲ್ಕು ಕಡೆ ಯಶಸ್ವಿಯಾದ ರಾಜಕೇಸರಿ | ಇಂದು ಬಿ.ಸಿ. ರೋಡ್ನಲ್ಲಿ ನೀರು ಮಾರಾಟ
Team Udayavani, Dec 15, 2019, 5:32 AM IST
ಬಂಟ್ವಾಳ: ಬೆಳ್ತಂಗಡಿ ತಾ|ನಲ್ಲಿ ಹುಟ್ಟಿಕೊಂಡಿರುವ ರಾಜಕೇಸರಿ ಸಂಘಟನೆ ಕುಡಿಯುವ ನೀರಿನ ಬಾಟಲ್(ಮಿನರಲ್ ವಾಟರ್) ಮಾರಾಟ ಮಾಡಿ, ಲಾಭಾಂಶವನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ 4 ಕಡೆಗಳಲ್ಲಿ ಮಿನರಲ್ ವಾಟರ್ ಮಾರಾಟ ಮಾಡಿ ಯಶಸ್ವಿಯಾ ಗಿದೆ. 5ನೇ ಕಾರ್ಯಕ್ರಮವಾಗಿ ಬಾಲಕಿಗೆ ನೆರವಾಗಲು ಡಿ. 15ರಂದು ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಮಿನರಲ್ ವಾಟರ್ ಮಾರಾಟ ಮಾಡಲಿದೆ. ಸಂಘಟನೆ ನೀರು ಮಾರಾಟ ಮಾಡಿ ಬಂದ ಆದಾಯವನ್ನು ರೋಗಿಗಳಿಗೆ ನೀಡಿ ಚಿಕಿತ್ಸೆಗೆ ನೆರವಾಗುತ್ತಿದೆ.
4 ಕಡೆ ಯಶಸ್ವಿ ಕಾರ್ಯ
ರಾಜಕೇಸರಿ ಸಂಘಟನೆ ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಈ ಕಾರ್ಯ ಮಾಡಿದ್ದು, ಮುಂಡಾಜೆಯ ಬಾಲಕಿ ಯೊಬ್ಬಳಿಗೆ 40 ಸಾವಿರ ರೂ. ನೆರವು ನೀಡಿದೆ. 2ನೇ ಹಂತದಲ್ಲಿ ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಈ ಕಾರ್ಯ ಮಾಡಿದ್ದು, ಕಣ್ಣು ಕಾಣದ ವ್ಯಕ್ತಿ, ಅಪಘಾತದ ಗಾಯಾಳು, ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ತಲಾ 20 ಸಾವಿರ ರೂ. (ಒಟ್ಟು 60 ಸಾ. ರೂ.) ನೆರವು ನೀಡಿದೆ. 3ನೇ ಹಂತದಲ್ಲಿ ಮೂಡುಬಿದಿರೆ ಪೇಟೆಯಲ್ಲಿ ಈ ಕಾರ್ಯ ಮಾಡಿದ್ದು, ಒಟ್ಟು 44,444 ರೂ.ಗಳನ್ನು ಪಣಪಿಲ ಗ್ರಾಮದ 3 ವರ್ಷ ಪ್ರಾಯದ ಮಗುವಿನ ಚರ್ಮ ರೋಗದ ಚಿಕಿತ್ಸೆಗೆ ನೆರವಾಗಿದೆ. ಬಳಿಕ 4ನೇ ಹಂತದಲ್ಲಿ ಬೆಳ್ತಂಗಡಿಯಲ್ಲಿ ಮತ್ತೆ ಈ ಕಾರ್ಯ ಮಾಡಿ, ಕಡಿರುದ್ಯಾವರ ಗ್ರಾಮದ ನಿವಾಸಿಯೊಬ್ಬರಿಗೆ 20 ಸಾವಿರ ರೂ.ಗಳನ್ನು ನೆರವಿನ ರೂಪದಲ್ಲಿ ನೀಡಿದೆ.
ಬಾಲಕಿಗೆ ನೆರವು
ಡಿ. 15ರಂದು ಬಿ.ಸಿ. ರೋಡ್ನಲ್ಲಿ ರಾಜಕೇಸರಿ ದ.ಕ. ಜಿಲ್ಲಾ ಘಟಕ, ಬಂಟ್ವಾಳ ತಾ|ನ ನೆಲ್ಲಿಗುಡ್ಡೆ ಬಸವನಬೈಲು ಘಟಕದ ಸಹಯೋಗದೊಂದಿಗೆ ರಾಜ ಕೇಸರಿಯ ಸಂಸ್ಥಾಪಕ ದೀಪಕ್ ಜಿ. ಮುಂದಾಳತ್ವದಲ್ಲಿ ಘಟಕದ ಅಧ್ಯಕ್ಷ ಪ್ರದೀಪ್ ಪೂಜಾರಿ, ಸಂಚಾಲಕ ಸಂದೇಶ್ ಶೆಟ್ಟಿ ನೇತೃತ್ವದಲ್ಲಿ ಬಾಟಲ್ ನೀರು ಮಾರಾಟ ಮಾಡಲಿದೆ.
ಬಂಟ್ವಾಳ ತಾ|ನ ರುಕ್ಮಯ್ಯ ನಾಯ್ಕ ಅವರ ಪುತ್ರಿ ಚೈತ್ರಾ ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ನೆರವಾಗಲು ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಈ ಕಾರ್ಯ ಮಾಡಲಿದೆ. ಸುಮಾರು 40 ಮಂದಿ ಯುವಕರು ಪಾಲ್ಗೊಳ್ಳಲಿದ್ದು, 30 ಸಾವಿರ ರೂ. ನೆರವಾಗುವ ಉದ್ದೇಶವಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಅರ್ಧ ಲೀಟರ್ ಬಾಟಲ್
ಸಂಘಟನೆ ಪ್ರತಿಯೊಂದು ಕಡೆಯೂ ಅರ್ಧ ಲೀ. ನೀರಿನ ಬಾಟಲ್ ಮಾರಾಟ ಮಾಡಿದ್ದು, ಬಾಟಲ್ಗಳನ್ನು ರಖಂ ದರದಲ್ಲಿ ಪಡೆದು ಬಳಿಕ ಅದನ್ನು 10 ರೂ.ಗಳಿಗೆ ಮಾರಾಟ ಮಾಡುತ್ತದೆ. ಖರ್ಚನ್ನು ಕಳೆದು ಉಳಿಕೆ ಹಣದಲ್ಲಿ ನೆರವಿನ ಕಾರ್ಯ ಮಾಡುತ್ತದೆ.
ಉತ್ತಮ ಬೆಂಬಲ
ಬಾಟಲ್ ನೀರು ಮಾರಿ ಅಶಕ್ತರಿಗೆ ನೆರವಾಗುವ ಕಾರ್ಯವನ್ನು ನಮ್ಮ ಸಂಘಟನೆ ಮಾಡುತ್ತಿದ್ದು, ಈಗಾಗಲೇ 4 ಕಡೆಗಳಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಉದ್ದೇಶವನ್ನು ತಿಳಿಸಿ ಜನರ ಬಳಿ ಹೋದಾಗ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ.
- ದೀಪಕ್ ಜಿ. ರಾಜಕೇಸರಿ ಸಂಘಟನೆ ಸಂಸ್ಥಾಪಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ