ಆಧಾರ್‌ ಕಾರ್ಡ್‌: ಬಗೆಹರಿಯದ ಸಮಸ್ಯೆ

 ಸರ್ವರ್‌ ಸಮಸ್ಯೆ-ನಾಗರಿಕರ ಓಡಾಟ ನಿರಂತರ

Team Udayavani, Nov 17, 2019, 5:44 AM IST

adhar

ವಿಟ್ಲ: ಆಧಾರ್‌ ಕಾರ್ಡ್‌ ಸಮಸ್ಯೆ ಇನ್ನೂ ಬಗೆಹರಿಯಲಿಲ್ಲ. ಸರ್ವರ್‌ ಸಮಸ್ಯೆಯೂ ಇದೆ. ನಾಗರಿಕರ ಓಡಾಟ ನಿರಂತರವಾಗಿ ಮುಂದುವರಿದಿದೆ. ಉದಯವಾಣಿ ಸುದಿನದಲ್ಲಿ ಪ್ರಕಟವಾದ ವರದಿ ಗಮನಿಸಿದ ಓದುಗರು ಒಂದಿ ಲ್ಲೊಂದು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಆದರೆ ಅಂಚೆ ಇಲಾಖೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಗಳಲ್ಲಿ ಅದಾಲತ್‌ ನಡೆಸಿ, ಆಧಾರ್‌ ಕಾರ್ಡ್‌ ಪಡೆಯಲು ಮತ್ತು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳುತ್ತಿದೆ.

7 ಬಾರಿ ಓಡಾಡಿದರೂ ಇನ್ನೂ ಕಾರ್ಡ್‌ ಆಗಿಲ್ಲ
ವಿಟ್ಲ ಸಮೀಪದ ನಿವಾಸಿ ಪ್ರಶಾಂತಿ ಎಸ್‌. ಅವರು ಆಧಾರ್‌ ಕಾರ್ಡ್‌ಗಾಗಿ ಏಳು ಬಾರಿ ಓಡಾಡಿದ್ದಾರೆ. ಇನ್ನೂ ಕಾರ್ಡ್‌ ದಾಖಲೆ ಓಕೆಯಾಗಲಿಲ್ಲ. ಆರಂಭದಲ್ಲಿ ಅವರು ತನ್ನ ಮಾವನ ಜತೆಗೆ ಆಧಾರ್‌ ಕೇಂದ್ರಕ್ಕೆ (ವಿಟ್ಲ) ತೆರಳಿದ್ದರು. ಮಾವನ ದಾಖಲೆ ನೀಡಿದ ಬಳಿಕ ತನ್ನ ದಾಖಲೆ ಒದಗಿಸಿ, ಮನೆಗೆ ಹಿಂದಿರುಗಿದ್ದರು. ಆಮೇಲೆ ಮಾವನ ಕಾರ್ಡ್‌ ಮನೆಗೆ ತಲುಪಿದೆ. ಈಕೆಗೆ ಸಿಗಲಿಲ್ಲ. ಕಾರಣ ಕೇಳಿ ಆಧಾರ್‌ ಕೇಂದ್ರಕ್ಕೆ ಮತ್ತೆ ತೆರಳಿ ದಾಖಲೆ ನೀಡಿದರು. ಪ್ರಯೋಜನವಾಗಲಿಲ್ಲ. ಈ ಮಧ್ಯೆ ಮಾವನವರು ನಿಧನ ಹೊಂದಿ ದರು. ತಿಂಗಳ ಬಳಿಕ ಮತ್ತೆ ಮಂಗಳೂರಿನ ಕೇಂದ್ರಕ್ಕೆ ತೆರಳಿದರು. ಸಿಗಲಿಲ್ಲ. ಹತ್ತು ದಿನಗಳ ಹಿಂದೆ ಮಂಗಳೂರು ಕೇಂದ್ರಕ್ಕೆ ಮತ್ತೆ ತೆರಳಿದಾಗ ಸಿಬಂದಿ ಆರಂಭದಲ್ಲಿ ಮಾವನ ಹಸ್ತದ ದಾಖಲೆಯನ್ನು ಸೊಸೆಯ ದಾಖಲೆಯಾಗಿ ಪರಿಗಣಿಸಿದ್ದು ಬೆಳಕಿಗೆ ಬಂತು. ಇದೀಗ ಮಾವನವರ ಮರಣ ಪ್ರಮಾಣಪತ್ರ ಇತ್ಯಾದಿ ದಾಖಲೆಗಳನ್ನು ಕೊಂಡೊಯ್ಯಲು ಹೇಳಿದ್ದು, ಇನ್ನೇನು ಕಾದಿದೆಯೋ ಎಂದು ಕೊರಗುತ್ತಿದ್ದಾರೆ.

ಶಾಲೆಗೆ ಬೇಕು
ವಿಟ್ಲ ಅಂಚೆ ಕಚೇರಿಯಲ್ಲಿ ಸರದಿ ಸಾಲಲ್ಲಿ ನಿಲ್ಲಬೇಕಾದ ಸ್ಥಿತಿಯ ವರದಿ ಉದಯವಾಣಿ ಸುದಿನದಲ್ಲಿ ಪ್ರಕಟ ವಾದುದನ್ನು ಗಮನಿಸಿದ, ಎಲ್ಲ ಶಾಲೆ ಗಳ ಮುಖ್ಯಸ್ಥರು ಹೌಹಾರಿದ್ದಾರೆ. ಮಕ್ಕಳ ದಾಖಲೆಗೆ ಆಧಾರ್‌ ಪಡೆಯಲೇಬೇಕು. ಈಗಿನ ವ್ಯವಸ್ಥೆ ಗಮನಿಸಿದಾಗ ವಿದ್ಯಾ ರ್ಥಿಗಳ ಕಾರ್ಡ್‌ ತತ್‌ಕ್ಷಣ ಸಿಗುವುದು ಅಸಾಧ್ಯವೆಂದು ಅರಿವಾಗಿದೆ. ಇದೀಗ ಮುಖ್ಯೋಪಾಧ್ಯಾಯರು ಪುತ್ತೂರು ಅಂಚೆ ಕಚೇರಿಗೆ ತೆರಳಿ, ನಮ್ಮ ಶಾಲೆ ಯಲ್ಲಿ ಅದಾಲತ್‌ ಮಾಡಲು ಮನವಿ ಮಾಡಿದರು. ವಿಟ್ಲದ ಕೆಲವು ಶಾಲೆಗಳಲ್ಲಿ ಅದಾಲತ್‌ ನಡೆಯಿತು. ಆದರೆ ಹೆಚ್ಚು ನಾಗರಿಕರನ್ನು ಅದು ತಲುಪಲಿಲ್ಲ. ವಿಟ್ಲ ಮೇಗಿನ ಪೇಟೆ ಹಾರೈಝನ್‌ ಶಾಲೆಯ ಮುಖ್ಯಸ್ಥರೂ ಪುತ್ತೂರು ಅಂಚೆ ಇಲಾಖೆಗೆ ಮನವಿ ಮಾಡಿ ಬಂದಿದ್ದಾರೆ.

ನ.18-20: ವಿಟ್ಲ ಮಾದರಿ ಶಾಲೆಯಲ್ಲಿ ಅದಾಲತ್‌
ವಿಟ್ಲ ನಗರ ಬಿಜೆಪಿ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗದೊಂದಿಗೆ ನ. 18ರಿಂದ 20ರ ವರೆಗೆ ವಿಟ್ಲ ದ.ಕ. ಜಿ.ಪಂ. ಮಾ. ಹಿ.ಪ್ರಾ.ಶಾಲೆಯ ಶತಮಾನೋತ್ಸವ ಕಟ್ಟಡದಲ್ಲಿ ಆಧಾರ್‌ ಕಾರ್ಡ್‌ ಹೊಸ ಅರ್ಜಿ ಮತ್ತು ತಿದ್ದುಪಡಿಗಳ ಅದಾಲತ್‌ ನಡೆಯಲಿದೆ. ವಾಸ್ತವ್ಯದ ದಾಖಲೆ,
ಪಡಿತರ ಚೀಟಿ, ತಿದ್ದುಪಡಿಗೆ ಅವಶ್ಯ ದಾಖಲೆ ಹಾಜರುಪಡಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ವಿಟ್ಲ ನಗರ ಬಿಜೆಪಿ ಪ್ರಕಟನೆ ತಿಳಿಸಿದೆ.

ಅದಾಲತ್‌ಗಳಿಗೆ ಪ್ರಚಾರ ಕೊಡಿ
ಆಧಾರ್‌ ಕಾರ್ಡ್‌ ಎಲ್ಲದಕ್ಕೂ ಬೇಕು. ಅದನ್ನು ನಾಗರಿಕರಿಗೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ವರ್‌ ಸಮಸ್ಯೆಯನ್ನೇ ಹೇಳುತ್ತ ಎಷ್ಟು ಕಾಲ ಮುಂದೂಡಬಹುದು ? ಇದಕ್ಕೆ ಸೂಕ್ತ ಪರಿಹಾರವನ್ನೂ ಇನ್ನೂ ಕಂಡುಹಿಡಿಯಲಿಲ್ಲ ಯಾಕೆ ? ಇದೀಗ ಅಲ್ಲಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಅದಾಲತ್‌ಗಳು ನಡೆಯುತ್ತವೆ. ಅದನ್ನು ನಡೆಸುವ ಸ್ಥಳ ಮತ್ತು ಸಮಯದ ಮಾಹಿತಿಯ ಬಗ್ಗೆ ಪ್ರಚಾರವೂ ಸಾಲುತ್ತಿಲ್ಲ. ಸಂಘಟಕರು ಆ ಬಗ್ಗೆ ಕ್ರಮ ಕೈಗೊಳ್ಳಬೇಕು.
– ಶ್ರೀಧರ ಕುಕ್ಕೆಮನೆ, ನ್ಯಾಯವಾದಿ

 ಅದಾಲತ್‌ ಮಾಹಿತಿ ಇಲ್ಲ
ವಿಟ್ಲ ಶಾಲೆಯಲ್ಲಿ ಅದಾಲತ್‌ ನಡೆಯುವ ಮಾಹಿತಿ ನಮಗೆ ಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಮ ಕೈಗೊಂಡಿದ್ದಲ್ಲಿ ನಮಗೆ ಮಾಹಿತಿ ಬರುತ್ತಿತ್ತು. ಆದರೆ ನಾಗರಿಕರಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು.
– ರಶ್ಮಿ ಎಸ್‌.ಆರ್‌. ತಹಶೀಲ್ದಾರ್‌

 ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.