ಪಠ್ಯ ಅಧ್ಯಯನದೊಂದಿಗೆ ವಿದ್ಯಾರ್ಥಿಗಳಿಗೆ ಕೃಷಿ ಪಾಠ

ಗದ್ದೆಗಿಳಿದು ನೇಜಿ ನೆಟ್ಟು ಬೇಸಾಯ ಮಾಡಿದ ನೆಹರೂ ಪ್ರೌಢಶಾಲೆಯ ಮಕ್ಕಳು

Team Udayavani, Jul 31, 2019, 5:00 AM IST

19

ಅರಂತೋಡು: ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ನೆಟ್ಟು ಹಾಡು ಕೇಳುತ್ತಾ ಕೆಸರಿನಲ್ಲಿ ಕುಣಿಯುತ್ತಾ ಖುಷಿಪಟ್ಟರು.

ಹಲವು ವರ್ಷಗಳ ಹಿಂದೆ ಎಲ್ಲಿ ನೋಡಿದರೂ ಹಸುರು ಗದ್ದೆಗಳು ಕಾಣಸಿಗುತ್ತಿದ್ದವು. ಗದ್ದೆಯಲ್ಲಿ ಎತ್ತು ಕೋಣಗಳನ್ನು ಕಟ್ಟಿ ಭೂಮಿ ಉಳುವುದು ನೋಡುವುದೊಂದು ಚಂದವಾಗಿತ್ತು. ರೈತನು ಭೂಮಿ ಉಳುವಾಗ ಹೊರಡಿಸುವ ದನಿ, ನೇಜಿ ನೆಡುವಾಗ ಹೇಳುವ ಹಾಡು ಕೇಳುವುದೇ ಮನಸ್ಸಿಗೆ ತುಂಬಾ ಮುದ ನೀಡುತ್ತಿತ್ತು. ಇಂತಹ ಆಹ್ಲಾದಕರ ಕ್ಷಣ ಕಾಣ ಸಿಗುವುದು ಈಗ ಅಪರೂಪವಾಗುತ್ತಿದೆ. ಬೆರಳೆಣಿಕೆಯ ರೈತರು ಮಾತ್ರ ಒಂದೆರಡು ಗದ್ದೆಗಳನ್ನು ಇರಿಸಿಕೊಂಡು ಬೇಸಾಯ ಮಾಡುತ್ತಿದ್ದಾರೆ.

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ವೈ.ಎ. ಆನಂದ ಅವರ ತಂಡದವರು ಸ್ಕೌಟ್ ವಿದ್ಯಾರ್ಥಿಗಳಿಗೆ ಗದ್ದೆಯನ್ನು ತೋರಿಸಿ ನೇಜಿ ನೆಡುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಲೋಚಿಸಿದರು. ಇದಕ್ಕೆ ಅವರಿಗೆ ತತ್‌ಕ್ಷಣ ತೋಚಿದ್ದು ನೆರೆಯ ಹರಿಪ್ರಸಾದ್‌ ಕಲ್ಲುಗದ್ದೆ ಅವರ ಗದ್ದೆ. ಅವರೊಡನೆ ಮಾತನಾಡಿಕೊಂಡು ಹರಿಪ್ರಸಾದ್‌ ಅವರ ಗದ್ದೆಗೆ ಸ್ಕೌಟ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದರು.

ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹಾಗೂ ಯಾಂತ್ರೀಕೃತ ನಾಟಿ ಮಾಡುವ ಬಗ್ಗೆ ತರಬೇತಿ ನೀಡಲಾಯಿತು. ಸ್ಥಳೀಯ ಮಹಿಳೆ ನೇಜಿ ಹಾಡು ಹಾಡಿದರು. ಹರಿಪ್ರಸಾದ್‌ ಹಾಗೂ ಮನೆಯವರು ಹೊಲದಲ್ಲಿ ನೀರಿನ ಸಂಗ್ರಹ, ಪಕ್ಕದಲ್ಲಿ ನಿರ್ಮಿಸಿದ ಇಂಗುಗುಂಡಿ, ಅದರಿಂದ ಆಗುವ ಪ್ರಯೋಜನ, ನಾಟಿಯ ಅಂತರ, ಭತ್ತದ ತಳಿಗಳು ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವಿದ್ಯಾಥಿಗಳು ಗದ್ದೆಯಲ್ಲಿ ನಾಟಿಯ ಪ್ರಾಯೋಗಿಕ ಪಾಠ ಕಲಿತು ನೇಜಿ ನೆಟ್ಟು ಖುಷಿ ಪಟ್ಟರು. ಸಹ ಶಿಕ್ಷಕರಾದ ಮನೋಜ್‌ ಹಾಗೂ ಸಂದೇಶ್‌ ಸಹಕರಿಸಿದರು.

ಪ್ರೇರಣೆ ಸಿಕ್ಕಿದೆ

ನಾಟಿ ಕೆಲಸ ತುಂಬಾ ಖುಷಿ ನೀಡಿತ್ತು. ನೇಜಿ ನೆಡುವಾಗ ಹಾಡುವ ಹಾಡು ಕೇಳಿ ತುಂಬಾ ಖುಷಿ ಪಟ್ಟೆ. ಅಲ್ಲಿನ ಪ್ರೇರಣೆಯಿಂದಾಗಿ ಅವರು ನಿರ್ಮಿಸಿದ ಇಂಗುಗುಂಡಿ ನೋಡಿಕೊಂಡು ತನ್ನ ಮನೆಯ ಪಕ್ಕ ಇಂಗುಗುಂಡಿ ನಿರ್ಮಿಸಿದ್ದೇನೆ. ನಾನು ನೇಜಿ ನೆಟ್ಟು ಬೇಸಾಯ ಮಾಡಬಲ್ಲೆ. – ಅಭಿಜಿತ್‌ ನಾಟಿ ತರಬೇತಿ ಪಡಕೊಂಡ ವಿದ್ಯಾರ್ಥಿ

ಕುಚಲಕ್ಕಿ ಮಾಹಿತಿ

ವಿದ್ಯಾರ್ಥಿಗಳು ನಾಟಿಯ ಪ್ರಾಯೋಗಿಕ ತರಬೇತಿ ಪಡೆದುಕೊಂಡು ನೇಜಿ ನೆಟ್ಟರು. ಕೆಲವು ವಿದ್ಯಾರ್ಥಿಗಳು ಕುಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ಬೇರೆ ಬೇರೆ ತೆನೆಯಲ್ಲಿ ಬೆಳೆಯುತ್ತದೆ ಎಂದುಕೊಂಡಿದ್ದರು. ಈ ನಾಟಿಯ ಪ್ರಾತ್ಯಕ್ಷಿಕೆಯ ಅನಂತರ ಅವರು ಕುಚಲಕ್ಕಿ ಮಾಡುವ ಬಗ್ಗೆ ತಿಳಿದುಕೊಂಡಿದ್ದರು. – ವೈ. ಆನಂದ ಮುಖ್ಯ ಶಿಕ್ಷಕರು

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.