ಬಡ ಹೆಣ್ಣುಮಕ್ಕಳ ಮನೆಗೆ ಮೂಲ ಸೌಕರ್ಯ


Team Udayavani, Sep 24, 2019, 5:41 AM IST

bada-hennumakkalu

ಕಲ್ಲುಗುಡ್ಡೆ: ನೆಲ್ಯಾಡಿ ಹೊಸಮಜಲು ಅಶ್ವತ್ಥ ಗೆಳೆಯರ ಬಳಗ ಇಚ್ಲಂಪಾಡಿಯ ಬಡ ಹೆಣ್ಣುಮಕ್ಕಳ ಕುಟುಂಬವೊಂದಕ್ಕೆ ಮನೆಯ ಮೂಲಸೌಕರ್ಯ ಒದಗಿಸುವ ಮೂಲಕ ಮಾದರಿ ಕಾರ್ಯ ಮಾಡಿದೆ.

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕಾಳಗುಡ್ಡೆಯಲ್ಲಿ ವಾಸ್ತವ್ಯ ಇರುವ ಸಾರಿಕಾ ಹಾಗೂ ರೋಹಿಣಿ ಎಂಬ ಹೆಣ್ಣು ಮಕ್ಕಳು ತಂದೆ ಬಾಳಪ್ಪ ಪೂಜಾರಿ, ತಾಯಿ ಬೇಬಿ ಹಾಗೂ ಸಹೋದರ ನವೀನ್‌ ಅವರನ್ನು ಕಳೆದುಕೊಂಡಿದ್ದು. ಇದೀಗ ಈ ಹೆಣ್ಣು ಮಕ್ಕಳು ದಿನಗೂಲಿ ಮೂಲಕ ಮನೆ ಖರ್ಚು-ವೆಚ್ಚ ನೋಡಿ ಕೊಳ್ಳುತ್ತಿದ್ದಾರೆ. ತಂದೆ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿದ್ದರೂ ಗೃಹಪ್ರವೇಶ ನಡೆದಿಲ್ಲ.

ಮನೆಗೆ ಬೇಕಾದ ಮೂಲ ಸೌಕರ್ಯ ಪಡೆಯಲು ಸಾಧ್ಯವಾಗದೆ, ಇವರು ಹೊಸಮಜಲು ಅಶ್ವತ್ಥ ಗೆಳೆಯರ ಬಳಗಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸಂಘಟನೆ ಪದಾಧಿಕಾರಿಗಳು ಮನೆಗೆ, ವಿದ್ಯುದೀಕರಣ, ಶೌಚಾಲಯ ಹಾಗೂ ಸ್ನಾನಗೃಹದ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸಮಾಜಮುಖೀ ಕೆಲಸ
ಮೂಲಸೌಕರ್ಯ ಹಸ್ತಾಂತರ ಕಾರ್ಯಕ್ರಮದಲ್ಲಿ ಅಶ್ವತ್ಥ ಗೆಳೆಯರ ಬಳಗದ ಗೌರವಾಧ್ಯಕ್ಷ, ಎಪಿಎಂಸಿ ನಿಕಟಪೂರ್ವ ಉಪಾಧ್ಯಕ್ಷ ಬಾಲಕೃಷ್ಣ ಬಾನಜಾಲು ಮಾತನಾಡಿ, ನಮ್ಮ ಬಳಗದಿಂದ ಅನೇಕ ಸಮಾಜಮುಖೀ ಕೆಲಸ ಮಾಡಲಾಗುತ್ತಿದ್ದು, ಬಡ ಹೆಣ್ಣು ಮಕ್ಕಳ ಮನೆಗೆ ಸಂಘಟನೆಯ ಸದಸ್ಯರೇ ಸೇರಿಕೊಂಡು ವಿದ್ಯುತ್‌ ಸಂಪರ್ಕ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವ ಮೂಲಕ ಹೆಣ್ಣು ಮಕ್ಕಳ ಬಾಳನ್ನು ಬೆಳಗಿಸಿದ್ದಾರೆ ಎಂದರು.

ಗೃಹಪ್ರವೇಶಕ್ಕೆ ವ್ಯವಸ್ಥೆ
ಪುತ್ತೂರು ಪಿಎಲ್‌ಡಿ ಬ್ಯಾಂಕ್‌ ಕೋಶಾಧಿಕಾರಿ ಭಾಸ್ಕರ ಎಸ್‌. ಗೌಡ ಮಾತನಾಡಿ, ತಂದೆ, ತಾಯಿ ಹಾಗೂ ಏಕೈಕ ಸಹೋದರನನ್ನು ಕಳೆದುಕೊಂಡಿರುವ ಹೆಣ್ಣು ಮಕ್ಕಳ ಮನೆಗೆ ಅಶ್ವತ್ಥ ಗೆಳೆಯರ ಬಳಗದ ವತಿಯಿಂದ ಮೂಲಸೌಕರ್ಯವನ್ನು ಸ್ವಂತ ಹಣದಿಂದ ಒದಗಿಸಲಾಗಿದ್ದು, ಮುಂದೆ ಮನೆಗೆ ಸುಣ್ಣ-ಬಣ್ಣದ ವ್ಯವಸ್ಥೆ ಮಾಡಿ ಗೃಹ ಪ್ರವೇಶವನ್ನು ಇಚ್ಲಂಪಾಡಿ ಬಿಜೆಪಿ ಗ್ರಾಮ ಸಮಿತಿಯಿಂದ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಲೋಕೇಶ್‌ ಮಾತನಾಡಿ, ಗೆಳೆಯರ ಬಳಗಕ್ಕೆ ಹೆಣ್ಣು ಮಕ್ಕಳು ಮಾಡಿದ ಮನವಿಗೆ ಸ್ಪಂದಿಸಿ, ಮನೆಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಿ, ವಾಸಿಸಲು ಅನುಕೂಲ ಮಾಡಿಕೊಡಲಾಗಿದೆ. ನಮ್ಮ ಗೆಳೆಯರ ಬಳಗದ ವತಿಯಿಂದ ಮುಂದೆಯೂ ಸಮಾಜಮುಖೀ ಕೆಲಸ – ಕಾರ್ಯಗಳು ಮುಂದುವರಿಯಲಿವೆ ಎಂದರು.

ಕೌಕ್ರಾಡಿ ಗ್ರಾ.ಪಂ. ಸದಸ್ಯ ಶ್ರೀನಿವಾಸ್‌ ಪೂಜಾರಿ ನಿಡ್ಯಡ್ಕ ಮಾತನಾಡಿ, ಸರಕಾರದ ದೀನ್‌ ದಯಾಳ್‌ ಯೋಜನೆಯಲ್ಲಿ ಈ ಮನೆಗೆ ವಿದ್ಯುತ್‌ ಸಂಪರ್ಕಕ್ಕೆ ಆರೇಳು ಕಂಬ ಹಾಕಿ ವ್ಯವಸ್ಥೆ ಮಾಡಿದ್ದು, ಇದೀಗ ಅಶ್ವತ್ಥ ಗೆಳಯರ ಬಳಗದ ಸಹಕಾರದೊಂದಿಗೆ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಶೌಚಾಲಯದ ವ್ಯವಸ್ಥೆ ಮಾಡಿಲಾಗಿದೆ ಎಂದರು.

ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್‌, ಉಪಾಧ್ಯಕ್ಷ ಶ್ರವನ್‌ ಕುಮಾರ್‌, ಸದಸ್ಯರಾದ ಮಂಜುನಾಥ್‌, ಸೋನಿತ್‌, ಪದ್ಮೇಶ್‌, ವಂದನ್‌, ಯಶವಂತ್‌, ಚೇತನ್‌, ಶರತ್‌ ಕಳಾಯಿ, ಗಣೇಶ್‌, ಮಿಥುನ್‌, ಸಂಪತ್‌, ನವೀನ್‌, ವೆಂಕಪ್ಪ ಗೌಡ, ಸುಧೀರ್‌ ಉಪಸ್ಥಿತರಿದ್ದರು.

ಮುಂದೆಯೂ ಸಹಕಾರ
ಅನಾರೋಗ್ಯದಿಂದ ಹೆತ್ತವರು, ಸಹೋದ ರನ್ನು ಕಳೆದುಕೊಂಡ ಸಾರಿಕಾ ಹಾಗೂ ರೋಹಿಣಿ ಅವರು ದಿನಗೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಗ್ರಾ.ಪಂ.ನಿಂದ ಮಂಜೂರಾದ ಮನೆ ನಿರ್ಮಿಸಿದ್ದು, ಮೂಲ ಸೌಕರ್ಯಕ್ಕಾಗಿ ಮಾಡಿದ ಮನವಿಗೆ ಅಶ್ವತ್ಥ ಗೆಳೆಯರ ಬಳಗದಿಂದ ಮನೆಗೆ ವಿದ್ಯುತ್‌ ವೈರಿಂಗ್‌, ಸಂಪರ್ಕ, ಶೌಚಾಲಯ, ಸ್ನಾನ ಗೃಹ ನಿರ್ಮಿಸಿಕೊಟ್ಟಿದ್ದು, ಮುಂದೆಯೂ ಸಹಕಾರ ನೀಡ ಲಾಗುವುದು.
-ಬಾಲಕೃಷ್ಣ ಬಾನಜಾಲು, ಗೌರವಾಧ್ಯಕ್ಷ, ಅಶ್ವತ್ಥ ಗೆಳೆಯರ ಬಳಗ

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.