ನಿತ್ಯ ಜಾಗರಣೆ, ತಪ್ಪದ ಬವಣೆ
Team Udayavani, Aug 14, 2019, 5:00 AM IST
ಸುಬ್ರಹ್ಮಣ್ಯ: ಮಳೆಗಾಲದಲ್ಲಿ ಇಲ್ಲೊಂದು ಪರಿಹಾರ ಕೇಂದ್ರ ತೆರೆದು, ಒಂದಿಷ್ಟು ದಿನ ಅಲ್ಲಿಯೇ ಕೂಡಿಟ್ಟು ಊಟ ಹಾಕ್ತಾರೆ. ಮಳೆ ಕಡಿಮೆ ಆದ ಕೂಡಲೆ ಖಾಲಿ ಮಾಡಿಸುತ್ತಾರೆ. ಆಮೇಲೆ ನಾವು ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಎಂಬುದೇ ಅರ್ಥವಾಗುತ್ತಿಲ್ಲ.
ತನ್ನ ಮಡಿಲಲ್ಲಿ ಬೆಚ್ಚನೆ ಮಲಗಿದ್ದ ಹಸುಗೂಸನ್ನು ಅಪ್ಪಿಕೊಂಡು ಮಹಿಳೆಯೊಬ್ಬರು ಅಳಲು ತೋಡಿ ಕೊಂಡರು. ಇಂತಹ ಮನ ಕಲಕುವ ದೃಶ್ಯ ಕಂಡು ಬಂದಿದ್ದು ಪುಷ್ಪಗಿರಿ ತಪ್ಪಲಿ ನಲ್ಲಿ ಭೂಕುಸಿತ ಭೀತಿಯಿಂದ ಮನೆ ಮಠ ಬಿಟ್ಟು ಬಂದವರಿಗಾಗಿ ಆರಂಭಿಸಲಾದ ಕಲ್ಮಕಾರು ನೆರೆ ಪರಿಹಾರ ಕೇಂದ್ರದಲ್ಲಿ.
ಕೃಷಿ, ಕೂಲಿ ಕಾಯಕ
ಧಾರಾಕಾರ ಮಳೆಗೆ ಪುಷ್ಪಗಿರಿ ಭೂಕುಸಿತದ ಭೀತಿ ಎದುರಿಸುತ್ತಿದೆ. ಗುಡ್ಡದ ತಪ್ಪಲಿನ ಗುಳಿಕ್ಕಾನ ಎಂಬಲ್ಲಿನ ಎಂಟು ಕುಟುಂಬಗಳು ಈಗ ನೆರೆ ಪರಿಹಾರ ಕೇಂದ್ರದಲ್ಲೇ ಆಶ್ರಯ ಪಡೆದಿವೆ. ದ.ಕ. ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿರುವ ಕಲ್ಮಕಾರು ಭಾಗದ ಕುಳಿಕ್ಕಾನ ಪರಿಸರದಲ್ಲಿ ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಈ ಕುಟುಂಬಗಳಿಗೆ ಮನೆಯಿದ್ದರೂ ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ಇದೆ.
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ