ದೋಳ್ಪಾಡಿ- ಕೊಜಂಬೇಡಿ: ಸೇತುವೆ ನಿರ್ಮಾಣವೆಂದು?
Team Udayavani, May 16, 2019, 5:50 AM IST
ದೋಳ್ಪಾಡಿ - ಕೊಜಂಬೇಡಿ- ಎಡಮಂಗಲ- ಕಡಬ ಸಂಪರ್ಕ ರಸ್ತೆಯ ಸದ್ಯದ ಸ್ಥಿತಿ.
ಕಾಣಿಯೂರು: ಗ್ರಾಮೀಣ ಭಾಗದಲ್ಲಿ ಹಲವೆಡೆ ರಸ್ತೆ ಇದ್ದರೆ ಸೇತುವೆ ಇಲ್ಲ, ಸೇತುವೆ ಇದ್ದರೆ ರಸ್ತೆ ಇಲ್ಲ ಎನ್ನುವ ಪರಿಸ್ಥಿತಿ ಸರ್ವೆ ಸಾಮಾನ್ಯ. ಊರನ್ನು ಸಂಪರ್ಕಿಸುವ ರಸ್ತೆ ಸುಧಾರಿಸಿದರೆ ಗ್ರಾಮವೇ ಅಭಿವೃದ್ಧಿಯಾದಂತೆ. ಆದರೆ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ದೋಳ್ಪಾಡಿ – ಕೊಜಂಬೇಡಿ- ಎಡಮಂಗಲ- ಕಡಬ ಸಂಪರ್ಕ ರಸ್ತೆಗೆ ಸಂಪರ್ಕ ಸೇತುವೆಯ ಭಾಗ್ಯಇನ್ನೂ ಕೂಡಿ ಬಂದಿಲ್ಲ.
ಊರವರಿಂದಲೇ ಅಡಿಕೆ ಪಾಲ
ಇಲ್ಲಿ ಸೇತುವೆ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಸೇತುವೆ ನಿರ್ಮಾಣದ ಕನಸು ಹಾಗೆಯೇ ಉಳಿದಿದೆ. ಇದರಿಂದ ಈ ಪ್ರದೇಶದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಹೊಳೆಗೆ ಅಡಿಕೆ ಮರದ ಪಾಲವನ್ನು ಊರ ನಾಗರಿಕರು ಕಟ್ಟಬೇಕು. ಈ ಸೇತುವೆ ಮೂಲಕ ನಿತ್ಯ ಸಾಗುವವರ ಸಂಖ್ಯೆ ಹಲವು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಅಡಿಕೆ ಮರದ ಸೇತುವೆಯಲ್ಲಿ ದಾಟಬೇಕು. ಮಳೆಗಾಲದಲ್ಲಿ ಅಪಾಯವನ್ನು ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನದು.
ಸುತ್ತು ಬಳಸಿ ವಾಹನ ಚಾಲಕರು ಪೇಟೆಗೆ ಬರಬೇಕಾದ ಪರಿಸ್ಥಿತಿ ಇಲ್ಲಿಯದ್ದು. ಒಂದು ವೇಳೆ ಈ ಪರಿಸರದಲ್ಲಿ ಯಾರದಾರೂ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದರೆ ದೇವರೇ ಗತಿ. ಸಂಪರ್ಕ ಸೇತುವೆಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಶಾಸಕರಿಗೆ ಮನವಿ ಮಾಡಲಾಗಿದೆ
ದೋಳ್ಪಾಡಿ-ಕೊಜಂಬೇಡಿ ಸಂಪರ್ಕಕ್ಕೆ ಸೇತುವೆ ನಿರ್ಮಾಣವಾಗಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಈ ಬಗ್ಗೆ ಸುಳ್ಯ ಶಾಸಕರಿಗೆ ಮನವಿ ಮಾಡಲಾಗಿದೆ. ಸೇತುವೆ ನಿರ್ಮಾಣದ ಭರವಸೆಯನ್ನು ಶಾಸಕರು ನೀಡಿದ್ದಾರೆ. ಅಲ್ಲದೆ ಸ್ಥಳಕ್ಕೆ ಜಿ.ಪಂ. ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ದೋಳ್ಪಾಡಿ – ಕೊಜಂಬೇಡಿಯಲ್ಲಿ ಸೇತುವೆ ನಿರ್ಮಾಣವಾದರೆ ಎಡಮಂಗಲದ ಮೂಲಕ ತಾಲೂಕು ಕೇಂದ್ರ ಕಡಬಕ್ಕೆ ಸಂಚರಿಸಲು ಹಾಗೂ ದೋಳ್ಪಾಡಿ ಶಾಲೆಗಳಿಗೆ ಬರಲು ಮಕ್ಕಳಿಗೆ ಸುಲಭ ದಾರಿಯಾಗಲಿದೆ.
– ಉಮೇಶ್ ಆಚಾರ್ಯ ದೋಳ್ಪಾಡಿ, ಸದಸ್ಯರು, ಕಾಣಿಯೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ