ಅಶಕ್ತ ಕುಟುಂಬಕ್ಕೆ ಒಂದೇ ದಿನದಲ್ಲಿ ಮನೆ ನಿರ್ಮಾಣ
ಯುವ ಬ್ರಿಗೇಡ್ ಶ್ರಮದಾನ, ಕಟ್ಟಡ ಸಾಮಗ್ರಿಗೆ ದಾನಿಗಳ ನೆರವು
Team Udayavani, Jun 25, 2019, 5:00 AM IST
ಮಂಡೆಕೋಲು: ಮಂಡೆಕೋಲು ಗ್ರಾಮದ ಮಡಿವಾಳ ಮೂಲೆ ಕಾಲನಿಯಲ್ಲಿ ಹಲವು ವರ್ಷಗಳಿಂದ ಡೇರೆಯಲ್ಲಿ ವಾಸವಾಗಿದ್ದ ಕುಟುಂಬಕ್ಕೆ ಸುಳ್ಯದ ಯುವ ಬ್ರಿಗೇಡ್ ತಂಡ ಮನೆ ನಿರ್ಮಿಸಿ ಕೊಟ್ಟು, ದಿಕ್ಕಿಲ್ಲದ ಕುಟುಂಬಕ್ಕೆ ಆಶಾಕಿರಣವಾಗಿದೆ.
ಡೇರೆ (ಟರ್ಪಾಲು) ಹಾಕಿಕೊಂಡು ಫಕೀರರ ಕುಟುಂಬ ವಾಸವಾಗಿತ್ತು. ಬಿಸಿಲು, ಮಳೆ, ಗಾಳಿಗೆ ಈ ಪುಟ್ಟ ಜಾಗವೇ ಅವರಿಗೆ ಆಸರೆಯಾಗಿತ್ತು. ಮಕ್ಕಳೂ ಶಾಲೆಗೆ ಹೋಗಲು ಸಾಧ್ಯವಿಲ್ಲದೆ ಈ ಗುಡಿಸಲಿನಲ್ಲೇ ಉಳಿಯುವ ಸ್ಥಿತಿ ಇತ್ತು. ಈ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸೌಲಭ್ಯ ಒದಗಿರಲಿಲ್ಲ.
ಬಸವ ವಸತಿ, ಅಂಬೇಡ್ಕರ್, ಇಂದಿರಾ ಆವಾಸ್ ಸಹಿತ ಯಾವುದೇ ವಸತಿ ಯೋಜನೆಗಳಲ್ಲಿ ಈ ಕುಟುಂಬಕ್ಕೆ ಮನೆ ಅಥವಾ ನಿವೇಶನ ಒದಗಲಿಲ್ಲ. ವಾಸವಿರುವ ಜಾಗದ ದಾಖಲೆಗಳಿಲ್ಲದೆ ಮನೆ ಮಂಜೂರಾತಿ ನೀಡಲು ಗ್ರಾ.ಪಂ.ಗೂ ಅಡ್ಡಿಯಾಗಿತ್ತು. ಯುವ ಬ್ರಿಗೇಡ್ ಇತ್ತೀಚೆಗೆ ಮಡಿವಾಳ ಮೂಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಡೇರೆಯಲ್ಲಿ ವಾಸವಿರುವ ಕುಟುಂಬದ ಕುರಿತು ಮಾಹಿತಿ ಪಡೆದಿತ್ತು. ತಂಡದ ಸದಸ್ಯರು ಚರ್ಚಿಸಿ, ಇವರ ವಾಸಕ್ಕೊಂದು ಸೂಕ್ತ ವ್ಯವಸ್ಥೆ ಮಾಡಲು ನಿರ್ಧರಿಸಿದ್ದರು.
ಒಂದು ದಿನದ ಶ್ರಮದಾನ
ಮನೆ ಕಟ್ಟಲು ಬೇಕಾದ ಸಾಧನ ಸಲಕರಣೆಗಳಿಗಾಗಿ ದಾನಿಗಳನ್ನು ಸಂಪರ್ಕಿಸಿದ ಯುವ ಬ್ರಿಗೇಡ್ ತಂಡ, ಕೆಂಪು ಕಲ್ಲು, ಮರಳು, ಸಿಮೆಂಟ್ ಶೀಟು, ಸಿಮೆಂಟ್ ಕಂಬಗಳನ್ನು ಸಂಗ್ರಹಿಸಿತು. 50ಕ್ಕೂ ಹೆಚ್ಚು ಕಾರ್ಯಕರ್ತರು ಜೂ. 23ರಂದು ಸ್ಥಳಕ್ಕೆ ತೆರಳಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಬೆಳಗಿನ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಹರಿಪ್ರಸಾದ್ ಕೆಟರರ್ಸ್ ನಿರ್ವಹಿಸಿದರು.
ಇನ್ನೂ ವ್ಯವಸ್ಥೆ ಆಗಬೇಕು
ಫಕೀರರ ಕುಟುಂಬಕ್ಕೆ ಮನೆ ಇಲ್ಲದಿರುವ ಕುರಿತು ತಂಡದ ಸದಸ್ಯರು ಚರ್ಚಿಸಿ, ದಾನಿಗಳನ್ನು ಸಂಪರ್ಕಿಸಿದೆವು. ಒಂದು ದಿನದ ಶ್ರಮದಾನದಲ್ಲಿ ಮನೆ ನಿರ್ಮಾಣವಾಗಿದೆ. ಮುಂದೆ ಪಡಿತರ ಚೀಟಿ, ಆಧಾರ್ ಕಾರ್ಡ್ ಸಹಿತ ಹಲವು ದಾಖಲೆಗಳು ಮತ್ತು ಸೌಲಭ್ಯಗಳು ಈ ಕುಟುಂಬಕ್ಕೆ ಸಿಗಬೇಕಿವೆ. ವಿದ್ಯುತ್ ವ್ಯವಸ್ಥೆ ಆದರೆ ಸೂಕ್ತ.
– ಲೋಕೇಶ್ ಕೆರೆಮೂಲೆ, ಯುವ ಬ್ರಿಗೇಡ್ ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ