ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆ

ಜಿಗಿದ ಸಿಂಗಲ್‌ ಚೋಲ್‌, ಹೊಸ ಅಡಿಕೆ; ಡಬಲ್‌ ಚೋಲ್‌ ಸ್ಥಿರ

Team Udayavani, Apr 26, 2019, 6:23 AM IST

ARACNUT

ಸುಳ್ಯ: ಆರ್ಥಿಕ ವರ್ಷಾಂತ್ಯದಲ್ಲಿ ಸ್ಥಿರವಾಗಿದ್ದ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆ ಈಗ ಏರಿಕೆ ಕಂಡಿದ್ದು, ಬೆಳೆಗಾರರಿಗೆ ಕೊಂಚ ನೆಮ್ಮದಿ ತಂದಿದೆ. ಡಬ್ಬಲ್‌ ಚೋಲ್‌ ಧಾರಣೆ ಸ್ಥಿರವಾಗಿದೆ.

ಹೊಸ ವರ್ಷದ ಆರಂಭದಲ್ಲಿ ಹೊಸ ಮತ್ತು ಹಳೆ ಅಡಿಕೆ ಧಾರಣೆ ಮುಮ್ಮುಖ ಮತ್ತು ಹಿಮ್ಮುಖವಾಗಿ ಚಲಿಸಿ ಸ್ಥಿರವಾಗಿ ನಿಲ್ಲದೆ ಬೆಳೆಗಾರರಿಗೆ ನಿರಾಶೆ ಮೂಡಿಸಿತ್ತು. ಆದರೆ ಎರಡು ದಿನಗಳ ಧಾರಣೆ ಬೆಳೆಗಾರರಿಗೆ ಆಶಾಕಿರಣ ಮೂಡಿಸಿದೆ.

ಧಾರಣೆ ಏರಿಕೆ
ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಬುಧವಾರ ಹೊಸ ಅಡಿಕೆ 230ರಿಂದ 235 ರೂ. ತನಕ ಖರೀದಿ ಯಾಗಿದೆ. ಸಿಂಗಲ್‌ ಚೋಲ್‌ 275ರಿಂದ 278 ರೂ. ತನಕ ಖರೀದಿಸಲಾಗಿದೆ. ಹೊಸ ಅಡಿಕೆ ಕೆ.ಜಿ.ಗೆ 5 ರೂ. ವೃದ್ಧಿಸಿಕೊಂಡರೆ ಸಿಂಗಲ್‌ ಚೋಲ್‌ ಕೂಡ 5 ರೂ.ಗಳಷ್ಟು ಏರಿದೆ. ಡಬ್ಬಲ್‌ ಚೋಲ್‌ 290ರಿಂದ 310 ರೂ.ಗಳಷ್ಟು ಧಾರಣೆ ಹೊಂದಿದ್ದು, ಸ್ಥಿರವಾಗಿದೆ. ಹೊಸ ಪಠೊರ 150 ರೂ.ಗಳಿಂದ 190 ರೂ., ಹಳೆ ಪಠೊರ 210 ರೂ., ಕರಿಗೋಟು 100 ರೂ.ಗಳಿಂದ 140 ರೂ. ಧಾರಣೆ ಹೊಂದಿದೆ.

ಬಾಹ್ಯ ಮಾರುಕಟ್ಟೆಯಲ್ಲಿ ಧಾರಣೆ ಮತ್ತಷ್ಟು ಹೆಚ್ಚಿದೆ. ಹೊಸತು 235ರಿಂದ 238 ರೂ. ತನಕ ಖರೀದಿಯಾಗಿದೆ. ಸಿಂಗಲ್‌ ಚೋಲ್‌ 275ರಿಂದ 280 ರೂ. ತನಕ ಬೇಡಿಕೆ ಇದೆ. ಆದರೆ ಡಬ್ಬಲ್‌ ಚೋಲ್‌ಗೆ ನಿರೀಕ್ಷಿತ ಬೇಡಿಕೆ ಸಿಕ್ಕಿಲ್ಲ ಅನ್ನುತ್ತಾರೆ ಬೆಳೆಗಾರರು.

ಮಾರುಕಟ್ಟೆ ತಂತ್ರದ ಭಾಗ
ಪ್ರತಿ ವರ್ಷದ ಧಾರಣೆ ಅಂಕಿ ಅಂಶದಂತೆ ಎಪ್ರಿಲ್‌ನಲ್ಲಿ ಅಡಿಕೆ ಧಾರಣೆ ಏರುತ್ತದೆ. ಇದು ಮಾರುಕಟ್ಟೆಯಲ್ಲಿ ನಡೆಯುವ ಒಂದು ತಂತ್ರಗಾರಿಕೆ. ಇದಕ್ಕೆ ವಿರುದ್ಧವಾಗಿ ಧಾರಣೆ ಇಳಿಸುವ ತಂತ್ರ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ನಡೆಯುತ್ತದೆ. ಮಾರ್ಚ್‌ನಲ್ಲಿ ಬ್ಯಾಂಕ್‌ ಸಾಲಗಳನ್ನು ಪಾವತಿಸಬೇಕಿರುವ ಹೆಚ್ಚಿನ ಬೆಳೆಗಾರರು ಸಿಕ್ಕಿದ ಧಾರಣೆಗೆ ಅಡಿಕೆ ಮಾರಾಟ ಮಾಡಲು ಮುಂದಾಗುತ್ತಾರೆ. ಈ ವೇಳೆ ಧಾರಣೆ ಇಳಿಸಿ, ಅಡಿಕೆ ಖರೀದಿಸಿ ಅನಂತರ ಹೆಚ್ಚು ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ತಂತ್ರ ಇದು. ಫೆಬ್ರವರಿ, ಮಾರ್ಚ್‌ನಲ್ಲಿಯೂ ಮಾರುಕಟ್ಟೆಗೆ ಬಾರದ ಅಡಿಕೆಯನ್ನು ಅನಂತರ ದರ ಏರಿಸಿ ಖರೀದಿಸಲಾಗುತ್ತದೆ. ಆಗ ಶಾಲಾ ಶುಲ್ಕ ಪಾವತಿ ಮೊದಲಾದ ಖರ್ಚುಗಳು ಬೆಳೆಗಾರರಿಗೆ ಇರುವುದರಿಂದ ಧಾರಣೆ ಏರಿಕೆಯಿಂದ ಸ್ವಲ್ಪ ನಷ್ಟ ಅನುಭವಿಸಿದರೂ ಅಡಿಕೆಯನ್ನು ಮಾರುಕಟ್ಟೆಯತ್ತ ಆಕರ್ಷಿಸುವ ತಂತ್ರವನ್ನು ವ್ಯಾಪಾರಸ್ಥರು ಹೂಡುತ್ತಾರೆ.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.