ಬಂಟ್ವಾಳ ಪೇಟೆ ರಸ್ತೆಯಲ್ಲಿ ಪಾರ್ಕಿಂಗ್ ಅವಕಾಶವಿಲ್ಲ
ಸಂಚಾರ ದಟ್ಟಣೆ: ವರ್ತಕರು-ಪೊಲೀಸರ ಸಭೆಯಲ್ಲಿ ತೀರ್ಮಾನ
Team Udayavani, Feb 21, 2020, 9:45 PM IST
ಬಂಟ್ವಾಳ : ಬಂಟ್ವಾಳ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಸುಗಮ ಸಂಚಾರಕ್ಕೆ ಅವಕಾಶ ನಿಟ್ಟಿನಲ್ಲಿ ಬಂಟ್ವಾಳ ಬಡ್ಡಕಟ್ಟೆ ನಿತ್ಯಾನಂದ ಭಜನ ಮಂದಿರದ ಬಳಿಯಿಂದ ಸರಕಾರಿ ಆಸ್ಪತ್ರೆ ಬಳಿಯ ನೆರೆ ವಿಮೋಚನ ರಸ್ತೆವರೆಗೆ ಮುಖ್ಯ ರಸ್ತೆಯಲ್ಲಿ ಯಾವುದೇ ವಾಹನ ಪಾರ್ಕಿಂಗ್ಗೆ ಅವಕಾಶವಿಲ್ಲ ಎಂದು ಬಂಟ್ವಾಳ ಪೇಟೆಯ ವರ್ತಕರ ಅಭಿಪ್ರಾಯ ಪಡೆದು ಪೊಲೀಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಗುರುವಾರ ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಬಂಟ್ವಾಳ ಪೇಟೆಯ ಸಂಚಾರ ದಟ್ಟಣೆ ನಿಯಂತ್ರಣದ ಉದ್ದೇಶದಿಂದ ನಡೆದ ವರ್ತಕರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದರೆ ಪ್ರಸ್ತುತ ಒಂದು ವಾರದವರೆಗೆ ಯಾವುದೇ ದಂಡ ವಿಧಿಸದೆ ಎಚ್ಚರಿಕೆ ನೀಡಲಾಗುತ್ತದೆ. ಬಳಿಕ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಯಿತು.
ಸರಕು ವಾಹನಕ್ಕೆ ಸಮಯ ನಿಗದಿ
ಬಂಟ್ವಾಳ ಪೇಟೆಯ ಅಂಗಡಿಗಳಿಂದ ಸರಕು ಕೊಂಡುಹೋಗಲು, ಸರಕನ್ನು ತರುವ (ಲೋಡ್ – ಅನ್ಲೋಡಿಂಗ್) ಲಾರಿ/ಇತರ ವಾಹನಗಳಿಗೆ ಸಮಯ ನಿಗದಿ ಕುರಿತು ವರ್ತಕರಿಂದ ಅಭಿಪ್ರಾಯ ಪಡೆದು, ಬೆಳಗ್ಗೆ 8ರ ಮೊದಲು, ಅಪರಾಹ್ನ 1ರಿಂದ 3 ಹಾಗೂ ರಾತ್ರಿ 7ರ ಬಳಿಕ ಸರಕು ವಾಹನಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು.
ಕೆಲವು ವರ್ತಕರು ತಮ್ಮ ಅಂಗಡಿಯ ಹೊರಗೆ, ವಾಹನ ಸಂಚಾರಕ್ಕೆ ತೊಂದರೆ ಯಾಗುವ ರೀತಿಯಲ್ಲಿ ವ್ಯಾಪಾರ ಮಾಡು ತ್ತಿದ್ದಾರೆ. ಜತೆಗೆ ಅಂಗಡಿಗಳ ಮುಂಭಾಗ ಛಾವಣಿ ಶೀಟ್ಗಳು ರಸ್ತೆಗೆ ಬಂದಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಂಥವರ ವಿರುದ್ಧ ಕ್ರಮಕ್ಕೆ ಡಿವೈಎಸ್ಪಿ ಅವರು ಸಂಚಾರ ಠಾಣೆಯ ಪಿಎಸ್ಐ ರಾಮ ನಾಯ್ಕ ಅವರಿಗೆ ತಿಳಿಸಿದರು.
ಮೂಡುಬಿದಿರೆ ಭಾಗಕ್ಕೆ ತೆರಳುವ ಬಸ್ಗಳು ಕೊಟ್ರಮನಗಂಡಿಯ ಬಸ್ ನಿಲ್ದಾಣದಲ್ಲೇ ನಿಲ್ಲಬೇಕು, ಜತೆಗೆ ಕಾಲೇಜು ರಸ್ತೆ ಜಂಕ್ಷನ್, ಬಡ್ಡಕಟ್ಟೆ ಪರಿಸರದಲ್ಲಿ ನಿಗದಿತ ಆಟೋಗಳನ್ನು ಹೊರತುಪಡಿಸಿ ಯಾವುದೇ ವಾಹನಕ್ಕೂ ನಿಲ್ಲುವುದಕ್ಕೆ ಅವಕಾಶ ನೀಡಬಾರದು. ರಸ್ತೆಗಳನ್ನು ಹೊರತುಪಡಿಸಿ ಪೇಟೆಯ ಸುತ್ತಮುತ್ತಲೂ ಇರುವ ಸರಕಾರಿ ಜಾಗಗಳಲ್ಲಿ ಪಾರ್ಕಿಂಗ್ ಮಾಡಲು ತೀರ್ಮಾನಿಸಲಾಯಿತು.
ಸಭೆಯ ತೀರ್ಮಾನಗಳನ್ನು ಬಂಟ್ವಾಳ ಪುರಸಭೆಯ ಗಮನಕ್ಕೆ ತರುವಂತೆ ವರ್ತ ಕರು ಪೊಲೀಸರಿಗೆ ಮನವಿ ಮಾಡಿ ದರು. ಸಂಚಾರ ನಿಯಂತ್ರಣಕ್ಕೆ ಹೋಂ ಗಾರ್ಡ್ ಬದಲು ಪೊಲೀಸ್ ಸಿಬಂದಿ ಯನ್ನೇ ನಿಯೋಜಿಸುವಂತೆ ಆಗ್ರಹಿಸಿದರು.
ಪ್ರೊಬೆಷನರಿ ಐಪಿಎಸ್ ಅಧಿಕಾರಿ ರಂಜಿತ್, ನಗರ ಠಾಣಾ ಪಿಎಸ್ಐ ಅವಿನಾಶ್, ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಉಪಸ್ಥಿತರಿದ್ದರು.
ಹೆದ್ದಾರಿಯವರಿಗೆ ಸೂಚನೆ: ಡಿವೈಎಸ್ಪಿ ಭರವಸೆ
ಬಿ.ಸಿ. ರೋಡ್-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಿರ್ವಹಿಸು ತ್ತಿರುವವರು ಬೇಕಾಬಿಟ್ಟಿ ರಸ್ತೆಯನ್ನು ಅಗೆದು ಹಾಕುವುದರಿಂದ ಯಾವುದೇ ವಾಹನ ತೆರಳದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅವರಿಗೆ ಎಚ್ಚರಿಕೆ ನೀಡುವಂತೆ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಅವರು ಆಗ್ರಹಿಸಿದರು. ಈ ಕುರಿತು ಸಂಬಂಧಪಟ್ಟವರನ್ನು ಕರೆಸಿ ಸೂಚನೆ ನೀಡುವ ಕುರಿತು ಡಿವೈಎಸ್ಪಿ ಅವರು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ