ನದಿಗೆ ಹಾರಿದ್ದ ವೃದ್ಧೆಯ ರಕ್ಷಿಸಿದ ಅಂಬಿಗ
Team Udayavani, Sep 12, 2019, 11:32 AM IST
ಸವಣೂರು: ಆತ್ಮಹತ್ಯೆ ಮಾಡಲೆಂದು ನದಿ ನೀರಿಗೆ ಹಾರಿದ ಮಹಿಳೆಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿದ ಘಟನೆ ಗುರುವಾರ ಬೆಳಿಗ್ಗೆ ಕಡೇಶಿವಾಲಯದಲ್ಲಿ ನಡೆದಿದೆ.
ಕಡಬ ತಾಲೂಕಿನ ರಾಮಕುಂಜ ನಿವಾಸಿ ಮಂಜಕ್ಕ ಎಂಬ ವೃದ್ದೆ ಆತ್ಮಹತ್ಯೆ ಮಾಡಲೆಂದು ಉಪ್ಪಿನಂಗಡಿ ಸಮೀಪ ನದಿಗೆ ಹಾರಿದವರು.
ಕಡೇಶಿವಾಲಯ ಸಮೀಪ ನದಿ ನೀರಿನ ಸೆಳೆತಕ್ಕೆ ಮಂಜಕ್ಕ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಅಲ್ಲಿನ ಅಂಬಿಗರೋರ್ವರು ನೋಡಿದ್ದಾರೆ. ತಕ್ಷಣವೇ ವೃದ್ದೆಯನ್ನು ರಕ್ಷಿಸಲೆಂದು ತೆರಳಿದಾಗ ತಾನು ಆತ್ಮಹತ್ಯೆ ಮಾಡಲೆಂದು ನದಿಗೆ ಹಾರಿದ್ದು, ನನ್ನನ್ನು ರಕ್ಷಿಸಬೇಡಿ ಎಂದು ವೃದ್ದೆ ಸೂಚಿಸಿದ್ದಾರೆ. ಆದರೂ ಅಂಬಿಗ ಅಬ್ಬಾಸ್ ವೃದ್ದೆಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿದ್ದಾರೆ. ವೃದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ