ಪುತ್ತೂರು: ಅಶ್ವತ್ಥ ಮರದಲ್ಲಿ ವಲಸೆ ಹಕ್ಕಿಗಳ ಕಲರವ
ಸಂತಾನೋತ್ಪತ್ತಿಗೆ ಪಶ್ಚಿಮ ಆಫ್ರಿಕಾ, ಕೆಂಪು ಸಮುದ್ರದಿಂದ ವಲಸೆ
Team Udayavani, Dec 13, 2019, 10:19 PM IST
ಪುತ್ತೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಹಕ್ಕಿಗಳ ವಲಸೆ ಆರಂಭವಾಗುತ್ತದೆ. ಪುತ್ತೂರಿನ ಹೃದಯಭಾಗದಲ್ಲಿರುವ ಗಾಂಧಿ ಕಟ್ಟೆ ಬಳಿ ಅಶ್ವತ್ಥ ಮರಕ್ಕೆ ಲಗ್ಗೆ ಇಟ್ಟಿರುವ ವಲಸೆ ಹಕ್ಕಿಗಳ ಕಲರವ ರಾತ್ರಿ ಸಮಯದಲ್ಲಿ ವಿಶೇಷ ಗಮನ ಸೆಳೆದಿದೆ.
ಸಂತಾನೋತ್ಪತ್ತಿಗಾಗಿ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದಿಂದ ಭಾರತದ ಕರಾವಳಿಗೆ ವಲಸೆ ಬರುವ ರೀಪ್ ಎಗ್ರೇಟ್ ಹಾಗೂ ಎಗ್ರೆಟಾ ಗುಲಾರಿಸ್ ಎಂಬ ಪ್ರಭೇದದ ಕೊಕ್ಕರೆ ಪುತ್ತೂರಿನ ಕೇಂದ್ರ ಸ್ಥಾನದಲ್ಲಿರುವ ಅಶ್ವತ್ಥ ಮರಕ್ಕೆ ವಲಸೆ ಬಂದಿದೆ.
ಈ ಬೃಹತ್ ಅಶ್ವತ್ಥ ಮರ ಹಲವು ದಶಕಗಳಿಂದ ದೇಶ ವಿದೇಶದ ಕೊಕ್ಕರೆಗಳಿಗೆ ಆಶ್ರಯತಾಣ. ಇಲ್ಲಿಗೆ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದಿಂದ ಸಂತಾನೋತ್ಪತ್ತಿಗಾಗಿ ಈ ಕೊಕ್ಕರೆಯ ಪ್ರಭೇದಗಳು ವಲಸೆ ಬರುತ್ತಿವೆ. ಡಿಸೆಂಬರ್, ಜನವರಿ ವೇಳೆ ವಲಸೆ ಬರುವ ಕೊಕ್ಕರೆಗಳು ಮರದಲ್ಲಿ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮಳೆ ಆರಂಭದ ವೇಳೆ ಮತ್ತೆ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದೆಡೆಗೆ ತೆರಳುವುದು ರೂಢಿ.
ಕೊಕ್ಕರೆಯ ಸಿಂಗಾರ
ಕಳೆದ ಕೆಲವು ದಿನಗಳಿಂದ ಗಾಂಧಿಕಟ್ಟೆ, ಅಶ್ವತ್ಥಕಟ್ಟೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದು, ಅಶ್ವತ್ಥ ಮರದ ಬಾಗಿದ ಗೆಲ್ಲುಗಳನ್ನು ಕಡಿಯಲಾಗಿದೆ. ಹಗಲಲ್ಲಿ ಆಹಾರ ಅರಸುತ್ತಾ ತೆರಳುವ ವಲಸೆ ಕೊಕ್ಕರೆಗಳು ರಾತ್ರಿ ಯಾಗುತ್ತಿದ್ದಂತೆ ಇಲ್ಲಿಗೆ ಆಗಮಿಸುತ್ತದೆ. ಜತೆಗೆ ನೀರು ಕಾಗೆ, ಸ್ಥಳೀಯ ಕೊಕ್ಕರೆಗಳೂ ಆಶ್ರಯ ಪಡೆಯುತ್ತಿದೆ. ಬಾವಲಿಗಳೂ ಇವೆ. ರಾತ್ರಿಯಾಗುತ್ತಿದ್ದಂತೆ ಉರಿಯುವ ದೀಪದಂತೆ ಕೊಕ್ಕರೆಗಳು ಮರದಲ್ಲಿ ಕಾಣಿಸುತ್ತವೆ. ಹಕ್ಕಿಗಳ ಕಲರವ ಕಿರಣ್ ಶಂಕರ್ ಮಲ್ಯ ಬೊಳುವಾರು ಕೆಮರಾ ಕಣ್ಣಲ್ಲಿ ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್