ಛಾವಣಿಯಿಂದ ಬೀಳುವ ಮಳೆ ನೀರು ಬಾವಿಗೆ!

ಬೇಸಗೆಯ ನೀರಿನ ತಾಪತ್ರಯ ನೀಗಿಸಲು ಮಳೆಗಾಲದಲ್ಲೇ ಉಪಾಯ

Team Udayavani, Jun 25, 2019, 5:00 AM IST

26

ಸುಬ್ರಹ್ಮಣ್ಯ: ಭೂಮಿಯಲ್ಲಿ ನೀರಿಂಗಿಸಿ, ಅಂತರ್ಜಲ ಹೆಚ್ಚಿಸಬೇಕು ಎನ್ನುವ ಕೂಗು ತೀವ್ರವಾಗುತ್ತಿರುವ ಹೊತ್ತಲ್ಲೆ ಇಲ್ಲಿನ ವಸತಿ ಗೃಹವೊಂದರ ಮಾಲಕರು ತನ್ನ ವ್ಯಾಪ್ತಿಯ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಕಾರ್ಯಗತಗೊಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಭಾಗದಲ್ಲೂ ಮಳೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಭವಿಷ್ಯದ ನೀರಿನ ಆತಂಕ ದೂರ ಮಾಡಲು ಯೋಜನೆ ಗಳು ಜಾರಿಯಾಗಬೇಕು ಎಂದರಿತ ಗಣೇಶ್‌ ಪ್ರಸಾದ್‌ ತಮ್ಮ “ಅನುಗ್ರಹ’ ವಸತಿಗೃಹದಲ್ಲಿ ಪ್ರಾಯೋಗಿಕವಾಗಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ನಗರದ ಮುಖ್ಯ ಪೇಟೆಯ ಬಳಿಯಿಂದ ದೇವರಗದ್ದೆಗೆ ಕಡೆಗೆ ತೆರಳುವಲ್ಲಿ ಸುಮಾರು 50 ಕೊಠಡಿಗಳ ಅನುಗ್ರಹ ವಸತಿಗೃಹವಿದೆ. ಮಳೆಗಾಲದಲ್ಲಿ ಛಾವಣಿಯಿಂದ ಬಿದ್ದ ನೀರನ್ನು ಬಾವಿಗೆ ಇಂಗಿಸಿಕೊಳ್ಳಲಾಗುತ್ತಿದೆ. ವಸತಿಗೃಹದಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತಂದಿದ್ದಾರೆ.

ಸುಸಜ್ಜಿತ ಛೇಂಬರ್‌
ಸಾಮಾನ್ಯವಾಗಿ ಕಟ್ಟಡಗಳ ಸುತ್ತಮುತ್ತ ಪೇವರ್ಸ್‌, ಹಾಸುಕಲ್ಲುಗಳು ಅಥವಾ ಕಾಂಕ್ರೀಟ್‌ ಅಳವಡಿಸುವುದರಿಂದ ಕಟ್ಟಡ ಗಳಿಂದ ಇಳಿದ ನೀರು ಭೂಮಿಗೆ ಬಿದ್ದು ಹರಿದು ಹೋಗುತ್ತದೆ. ಇಲ್ಲಿ ಆ ನೀರನ್ನು ಕೊಳವೆ ಮೂಲಕ ಇಳಿಸಲಾಗುತ್ತಿದೆ. ಅದಕ್ಕೆ ಅಲ್ಲಲ್ಲಿ ಸುಸಜ್ಜಿತ ಛೇಂಬರ್‌ಗಳನ್ನು ನಿರ್ಮಿಸಲಾಗಿದೆ. ಅವುಗಳ ಮೂಲಕ ಮಳೆ ನೀರು ಒಂದು ಕಡೆಗೆ ಬರುತ್ತದೆ. ಈ ನೀರಿನಿಂದ ಕಸ-ಕಡ್ಡಿಗಳನ್ನು ಬೇರ್ಪಡಿ ಸಲು ಜಾಳಿ ಇರುವ ಚೇಂಬರ್‌ ಅನ್ನು ಕಟ್ಟಡದ ಎದುರಿನ ಒಂದು ಭಾಗದಲ್ಲಿ ಮಾಡಲಾಗಿದೆ.

ವಿಸ್ತರಣೆಗೆ ಚಿಂತನೆ
ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ವಸತಿಗೃಹದ ಮಾಲಕರು ಅನುಷ್ಠಾನ ಗೊಳಿಸಿದ್ದಾರೆ. ಮುಂದೆ ಇವರ ಮಾಲಕತ್ವದಲ್ಲಿ ಇರುವ ಶಿಕ್ಷಣ ಸಂಸ್ಥೆ ಹಾಗೂ ಬೇರೆ ಕಟ್ಟಡಗಳಲ್ಲೂ ಮಳೆ ಕೊಯ್ಲು ಪದ್ಧತಿಯನ್ನು ವಿಸ್ತರಿಸಿ ನೀರಿನ ಕೊರತೆ ನೀಗಿಸುವ ಪ್ರಯತ್ನ ಮಾಡುವ ಸಂಕಲ್ಪ ತೊಟ್ಟಿದ್ದಾರೆ.

ಎಲ್ಲರೂ ಅಳವಡಿಸಿಕೊಳ್ಳಲಿ
ನಗರದಲ್ಲಿ ದೇವಸ್ಥಾನ, ಮಠ ಹಾಗೂ ಎರಡೂ ಸಂಸ್ಥೆಗಳಿಗೆ ಸೇರಿದ ವಸತಿಗೃಹ ಮತ್ತು ವಾಣಿಜ್ಯ ಸಂಕೀರ್ಣಗಳು ಸಾಕಷ್ಟಿವೆ. ಖಾಸಗಿ ವಸತಿಗೃಹಗಳು, ಹೊಟೇಲ್‌ ಇತ್ಯಾದಿಗಳ ಸಂಖ್ಯೆಯೂ ಜಾಸ್ತಿ ಇದೆ. ಇವೆಲ್ಲ ಕಟ್ಟಡಗಳಲ್ಲಿ ಮಳೆ ಕೊಯ್ಲು ಪದ್ಧತಿ ಜಾರಿಗೊಳಿಸಿದಲ್ಲಿ ಕುಕ್ಕೆ ನಗರದಲ್ಲಿ ಬೇಸಗೆಯಲ್ಲಿ ನೀರಿನ ಕೊರತೆ ಬಾಧಿಸದು ಎನ್ನುತ್ತಾರೆ ಗಣೇಶ್‌ ಪ್ರಸಾದ್‌.

ಯೋಜನೆಯ ಆವಶ್ಯಕತೆ ಇದೆ
ಕ್ಷೇತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಭಕ್ತ ರು, ಯಾತ್ರಾರ್ಥಿಗಳಿಗೆ ಬೇಸಗೆಯಲ್ಲಿ ನೀರು ಒದಗಿಸುವುದು ದೊಡ್ಡ ಸವಾಲು. ಅಭಿವೃದ್ಧಿ ಹೆಸರಿನಲ್ಲಿ ಈ ಭಾಗದಲ್ಲಿ ಕಾಡು ನಾಶವಾಗಿ ಕಟ್ಟಡಗಳು ತಲೆ ಎತ್ತಿ ನಿಲ್ಲುತ್ತಿವೆ. ನಗರ ಕಾಂಕ್ರೀಟ್‌ಮಯ ಆಗುತ್ತಿದೆ. ಹೀಗಾಗಿ ನಗರದಲ್ಲಿ ನೀರಿಂಗಿಸುವ ಯೋಜನೆಗಳ ಜಾರಿಯ ಅಗತ್ಯವಿದೆ ಎನ್ನುವುದು ಗಣೇಶ್‌ ಅವರ ಅಭಿಪ್ರಾಯ.

ಫಲ ತಂದಿದೆ, ವಿಸ್ತರಿಸುವೆ
ಮಳೆಗಾಲದಲ್ಲಿ ನೀರಿನ ಮಹತ್ವ ಗೊತ್ತಾಗುವುದಿಲ್ಲ. ಬೇಸಗೆಯಲ್ಲಿ ಅನುಭವಕ್ಕೆ ಬರುತ್ತದೆ. ಹೀಗಾಗಿ ಮಳೆ ಕೊಯ್ಲು ಪದ್ಧತಿಯನ್ನು ವಸತಿಗೃಹದಲ್ಲಿ ಅಳವಡಿಸಿಕೊಂಡು ನೀರನ್ನು ಬಾವಿ ಒಡಲು ಸೇರಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತನ್ನ ಮಾಲಕತ್ವದ ಎಲ್ಲ ಕಟ್ಟಡಗಳಿಗೂ ಇದನ್ನು ಆನ್ವಯಿಸುತ್ತೇನೆ. ಎಲ್ಲರೂ ಈ ರೀತಿ ನೀರಿನ ಮಹತ್ವ ಆರಿತುಕೊಂಡು ಯೋಜನೆ ಜಾರಿಗೊಳಿಸಿಕೊಂಡಲ್ಲಿ ನೀರಿನ ತಾಪತ್ರಯ ನಿವಾರಿಸಬಹುದು.
– ಗಣೇಶ್‌ ಪ್ರಸಾದ್‌ , ವಸತಿಗೃಹದ ಮಾಲಕ

ಬಾವಿಗೆ ಸೇರುತ್ತದೆ ನೀರು
ಕಟ್ಟಡದ ನೀರನ್ನು ವಸತಿಗೃಹದ ಮುಂಭಾಗದಲ್ಲಿ ಇರುವ ಬಾವಿಗೆ ಬಿಡಲಾಗುತ್ತಿದೆ. ಮಳೆ ಬಂದ ಸಂದರ್ಭ ಯಥೇತ್ಛವಾಗಿ ನೀರು ಭೂಮಿಯ ತಳ ಸೇರುತ್ತದೆ. ಸರಾಗವಾಗಿ ಮಳೆ ಬಂದಾಗ ಹೆಚ್ಚು ಪ್ರಮಾಣದ ನೀರು ಬಾವಿಯನ್ನು ತುಂಬಿಕೊಳ್ಳುತ್ತದೆ. ಮಳೆ ಇಲ್ಲದೇ ಇದ್ದಾಗ ಈ ನೀರು ಭೂಮಿಯೊಳಗೆ ಇಂಗಲು ಅನುಕೂಲವಾಗುತ್ತದೆ.

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.