ಮತದಾನ ಬಹಿಷ್ಕಾರ ಸಭೆ ಬ್ಯಾನರ್ ತೆರವು
ಬಜ-ಬಲಯೂರು ರಸ್ತೆ
Team Udayavani, Mar 24, 2019, 2:48 PM IST
ಮತದಾನ ಬಹಿಷ್ಕಾರಸಭೆಯ ಬ್ಯಾನರ್
ಪುಂಜಾಲಕಟ್ಟೆ: ಸರಪಾಡಿ ಗ್ರಾ.ಪಂ.ವ್ಯಾಪ್ತಿಯ ಬಜ-ಬಲಯೂರು ರಸ್ತೆ ಕಳೆದ 15 ವರ್ಷಗಳಿಂದ ಡಾಮರನ್ನೇ ಕಾಣದೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಎಂದು ಆರೋಪಿಸಿ ಮಾ. 24ರಂದು ಬೆಳಗ್ಗೆ 10ಕ್ಕೆ ಸ್ಥಳೀಯ ಗ್ರಾಮಸ್ಥರ ಮತದಾನ ಬಹಿಷ್ಕಾರ ಸಭೆ ನಡೆಯಲಿದೆ ಎಂದು ಬ್ಯಾನರೊಂದು ಕಾಣಿಸಿಕೊಂಡಿದ್ದು, ಆದರೆ ಶನಿವಾರ ಚುನಾವಣಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಬ್ಯಾನರ್ ತೆರವುಗೊಳಿಸಿದೆ.
ಸರಪಾಡಿ, ಮಣಿನಾಲ್ಕೂರು ಹಾಗೂ ವಶ್ಯಪಡೂರು ಗ್ರಾಮಕ್ಕೆ ಸಂಬಂಧಿಸಿ ಬಜ-ಬಲಯೂರು ರಸ್ತೆ ಸಂತ್ರಸ್ತರು ಸಭೆ ನಡೆಸಲಿದ್ದಾರೆ ಎಂದು ಬ್ಯಾನರ್ನಲ್ಲಿ ನಮೂದಿಸಲಾಗಿದ್ದು, ಬಲಯೂರಿನಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ರಸ್ತೆಯ ಅಭಿವೃದ್ಧಿ ಕುರಿತು ಕಳೆದ ಹಲವು ವರ್ಷಗಳಿಂದ ಬೇಡಿಕೆ ಕೇಳಿ ಬರುತ್ತಿದ್ದು, ರಾಜಕೀಯ ಪರ-ವಿರೋಧದ ಚರ್ಚೆಗಳೂ ನಡೆಯುತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ