ಬದುಕಿಗೆ ಬೆಳಕಾಗೋ ಅಪ್ಪಂದಿರಿಗೂ ಸಲಾಮ್‌

ಇಂದು ವಿಶ್ವ ಅಪ್ಪಂದಿರ ದಿನ

Team Udayavani, Jun 16, 2019, 5:00 AM IST

z-13

ಹೆತ್ತವರನ್ನು ಗೌರವಿಸುವು ದೆಂದರೆ ದೇವರನ್ನು ಗೌರವಿಸಿದಂತೆ. ಇಂದು, ಜೂನ್‌ 16 ವಿಶ್ವ ಅಪ್ಪಂದಿರ ದಿನಾಚರಣೆ. ಮಲ್ಲಿಗೆಯಂತೆ ಉದುರುದುರಾಗಿರುವ ನಮ್ಮ ಕನಸುಗಳನ್ನು ದಾರದಲ್ಲಿ ಪೋಣಿಸಿ ಚಂದವಾದ ಒಂದು ಹೂ ದಂಡೆ ಮಾಡಿಕೊಡುವವರು ಅಪ್ಪ. ಅದರ ಹಿಂದಿರುವ ಅವರ ಸಹನೆ, ಶ್ರಮಗಳನ್ನು ನಾವು ಹಲವು ಬಾರಿ ಗುರುತಿಸುವುದಿಲ್ಲ. ತಾನು ಸೋತು ಮಕ್ಕಳನ್ನು ಗೆಲ್ಲಿಸುವ ಎಲ್ಲ ಅಪ್ಪಂದಿರಿಗೂ ಒಂದು ನಮನ.

ಪಿತೃ ದೇವೋಭವ ಎಂದು ಉಚ್ಚರಿ ಸುವ ಪ್ರತಿ ಕ್ಷಣವೂ ಅಪ್ಪನೇ ಕಣ್ಮುಂದೆ ಬರುತ್ತಾರೆ. ಹೌದು, ಮಗುವೊಂದಕ್ಕೆ ಅಮ್ಮನಂತೆ ಅಪ್ಪನ ಪೋಷಣೆಯೂ ತುಂಬಾ ಮುಖ್ಯ. ಅವರು ದೇವರೆಂದರೆ ತಪ್ಪಲ್ಲ. ಹುಟ್ಟಿದಾಗಿನಿಂದ ಮಗುವಿನ ಎಲ್ಲ ಸಣ್ಣ , ದೊಡ್ಡ ಬೇಡಿಕೆಗಳನ್ನು ಎಷ್ಟೇ ಕಷ್ಟವಾದರೂ ಯೋಚಿಸದೆ ಪೂರೈಸುವ ಮನಸ್ಸಿರುವುದು ಅಪ್ಪನಿಗೆ ಮಾತ್ರ. ಅಲ್ಲಿ ಸ್ವಾರ್ಥ ಎಂಬ ಪದಕ್ಕೆ ಅರ್ಥವೇ ಇಲ್ಲ.

ಅಪ್ಪಂದಿರ ಎಂತಹ ಕಠಿನ ಮನಸ್ಸು ಕೂಡ ಮಕ್ಕಳ ಅಕ್ಕರೆಯ ಬೇಡಿಕೆಗೆ ಕರಗದಿರುವುದಿಲ್ಲ. ಆತ ಎಷ್ಟೇ ದೃಢ ಮನಸ್ಸಿನವನಾದರೂ ಮಕ್ಕಳ ಕೋರಿಕೆಯ ಮುಂದೆ ಸೋತು ಬಿಡುತ್ತಾನೆ. ಅಪ್ಪ ನಾದವನು ಮಕ್ಕಳು ಸಣ್ಣದಿರುವಾಗ ಗುರುವಾಗಿದ್ದು ಅವರನ್ನು ತಿದ್ದಿ, ತೀಡಿ ಅವರು ಬೆಳೆದು ದೊಡ್ಡವರಾದಂತೆ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಗೆಳೆಯನಾಗಬೇಕಾಗುತ್ತದೆ. ಈ ಹಿನ್ನೆ ಲೆ ಯಲ್ಲೇ ಆಚ ರ ಣೆಗೆ ಬಂದದ್ದು ವಿಶ್ವ ಅಪ್ಪಂದಿರ ದಿನಾಚರಣೆ.

ದಿನದ ಇತಿಹಾಸ
ಹೆಚ್ಚಿನ ಎಲ್ಲ ದಿನಾಚರಣೆಗಳೂ ಪಾಶ್ಚಾತ್ಯರ ಕೊಡುಗೆಯೇ ಅಧಿಕವಾಗಿರುತ್ತದೆ. ಅಪ್ಪಂದಿರ ದಿನ ಕೂಡ ಪಾಶ್ಚಾತ್ಯ ದೇಶ ದಲ್ಲೇ ಮೊದಲು ಆಚರಣೆಗೆ ಬಂತು. ಸೊನೊರಾ ಲೂಯಿಸ್‌ ಸ್ಮಾರ್ಟ್‌ ಡೊಡ್‌ ಎಂಬ ಮಹಿಳೆಯ 62 ವರ್ಷದ ಹೋರಾಟದ ಫ‌ಲವಾಗಿ ಅಮೆರಿಕದಲ್ಲಿ ಮೊದಲು ಅಪ್ಪಂದಿರ ದಿನವನ್ನು ಆಚರಿಸ ಲಾಯಿತು. ಸೊನೊರಾ ಲೂಯಿಸ್‌ ಸ್ಮಾರ್ಟ್‌ ಡೊಡ್‌ 15 ವರ್ಷದ ಹುಡುಗಿಯಾಗಿದ್ದಾಗ ಅವಳ ತಾಯಿ ತೀರಿಕೊಂಡರು. ಹೀಗಾ ಗಿ ಅವಳನ್ನು ಮತ್ತು ಅವಳ 5 ವರ್ಷದ ತಮ್ಮನನ್ನು ಬೆಳೆಸುವ ಜವಾಬ್ದಾರಿ ಅಪ್ಪನ ಮೇಲೆ ಬಿತ್ತು. ಅಮ್ಮಂದಿರ ದಿನದ ಆಚರಣೆಯ ಬಗ್ಗೆ ಅರಿತ ಸೊನೊರಾ ಅಪ್ಪಂದಿರ ದಿನವನ್ನು ಅಥವಾ ತನ್ನ ಅಪ್ಪನ ದಿನವನ್ನು ಆಚರಿಸಲು ನಿರ್ಧರಿಸಿದಳು. ಅದಕ್ಕಾಗಿ ಸಂಬಂಧಪಟ್ಟ ಆಡಳಿತ ವರ್ಗ ಹಾಗೂ ಚರ್ಚ್‌ಗಳಿಗೆ ಪತ್ರವನ್ನು ಬರೆಯಲಾರಂಭಿಸಿದಳು.

ಅವಳು ನಿರೀಕ್ಷಿಸಿದ ಉತ್ತರ ಲಭಿಸ ದಿದ್ದಾಗ ಅವಳು ಅಮೆರಿಕದೆಲ್ಲೆಡೆ ಅಪ್ಪಂದಿರ ದಿನದ ಮಹ ತ್ವದ ಕುರಿತು ಅಭಿಯಾನ ಆರಂಭಿಸಿದಳು. ಇದರ ಪರಿಣಾಮವಾಗಿ 1972ರಲ್ಲಿ ವಿಶ್ವ ಅಪ್ಪಂದಿರ ದಿನವನ್ನು ಆಚರಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಲಾಯಿತು.ಮೊದಲು ಜೂನ್‌ 5ರಂದು ಆಚರಿಸ ಲ್ಪಡುತ್ತಿದ್ದ ಅಪ್ಪಂದಿರ ದಿನ ಅನಂತರದ ವರ್ಷಗಳಲ್ಲಿ ಜೂನ್‌ ತಿಂಗಳ ಮೂರನೇ ರವಿವಾರ ಆಚರಿಸಲ್ಪಟ್ಟಿತು. ಈಗಲೂ ಹಾಗೆಯೇ ಮುಂದುವರಿದಿದೆ.

ಅಪ್ಪನ ಜವಾಬ್ದಾರಿ ಗೌರವಿಸುವ ದಿನ
ಅಪ್ಪಂದಿರಿಗೆ ಸಮಾಜ ಮತ್ತು ಕುಟುಂಬದಲ್ಲಿರುವ ಜವಾಬ್ದಾರಿ ಮತ್ತು ಹೊಣೆಗಳನ್ನು ಗುರುತಿಸಿ ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮೊದಮೊದಲ ಗುಲಾಬಿ ನೀಡಿ ಆಚರಿಸಲ್ಪಡುತ್ತಿದ್ದ ಈ ದಿನ ಇತ್ತೀಚೆಗೆ ಉಡುಗೊರೆಗಳನ್ನು ನೀಡುವಲ್ಲಿಯವರೆಗೆ ಮುಂದುವರಿದಿದೆ.
ಒಂದು ಮಗುವನ್ನು ಹೆತ್ತು ಹೊತ್ತು ಸಾಕುವ ಅಮ್ಮನಷ್ಟೇ ಜವಾಬ್ದಾರಿ ಅಪ್ಪನಿಗೂ ಇದೆ. ಅಪ್ಪ ಒಬ್ಬ ಏಕಪೋಷಕನಾಗಿದ್ದರೆ ಅವರ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಿ ಅದನ್ನೂ ನಿಭಾಯಿಸಬೇಕಾಗುತ್ತದೆ.
ತನ್ನೆಲ್ಲ ಒತ್ತಡಗಳ ಮಧ್ಯೆಯೂ ಮಕ್ಕಳಿ ಗಾಗಿ ಸಮಯ ಮೀಸಲಿರಿಸಿ ಅವರ ಬೇಕು ಬೇಡಗಳನ್ನು ಪೂರೈಸುವ ಅಪ್ಪಂದಿರು ಕೂಡ ತಾಯಿಯಾಗಿ, ಗುರುವಾಗಿ, ಸ್ನೇಹಿತನಾಗಿ ಮಕ್ಕಳನ್ನು ಬೆಳೆಸಬಲ್ಲ, ಅವರ ಬದುಕಿಗೆ ಸರಿಯಾದ ದಾರಿ ತೋರಬಲ್ಲ ಎಂಬ ಸಂದೇಶವೂ ಇದರಲ್ಲಿ ಅಡಗಿದೆ.

ಉತ್ತಮ ಅಪ್ಪನಾಗುವುದು ಸುಲಭವಲ್ಲ
ಪ್ರತಿಯೊಬ್ಬ ಪುರುಷನ ಬಯಕೆ ಒಬ್ಬ ಉತ್ತಮ ಅಪ್ಪನಾಗಬೇಕು ಎನ್ನುವುದಾಗಿರುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವೇನಲ್ಲ. ಮಕ್ಕಳನ್ನು ಎಲ್ಲ ವಯಸ್ಸಿನಲ್ಲಿಯೂ ಅವರ ಭಾವನೆಗಳಿಗೆ ತಕ್ಕಂತೆ ಅರ್ಥ ಮಾಡಿಕೊಂಡು ತಿದ್ದಿ ತೀಡುವ ಹೊಣೆ ಅವರ ಮೇಲಿರುತ್ತದೆ. ಕೆಲವೊಂದು ಜವಾಬ್ದಾರಿಗಳೇ ಹಾಗೆ, ಕಷ್ಟವೆಂದರೆ ಕಷ್ಟ; ಇಷ್ಟಪಟ್ಟು ಮಾಡಿದರೆ ಸಂತೃಪ್ತಿ. ಅಪ್ಪನದ್ದೂ ಅದೇ ಹೊಣೆಗಾರಿಕೆ.

ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.