ಕಡಬ: ಹೊಸಮಠ ಸೇತುವೆ ಬಳಿ ಅಪಾಯಕಾರಿ ಹಂಪ್ನಿಂದ ತೊಂದರೆ
ಅವೈಜ್ಞಾನಿಕ ಕಾಮಗಾರಿಯಿಂದ ಸರಣಿ ಅಪಘಾತ: ಶೀಘ್ರ ಸರಿಪಡಿಸಲು ಸಾರ್ವಜನಿಕರ ಆಗ್ರಹ
Team Udayavani, Jun 26, 2019, 5:06 AM IST
ಕಡಬದ ಹೊಸಮಠ ಸೇತುವೆ ಬಳಿ ಅಪಘಾತಗಳಿಗೆ ಕಾರಣವಾಗಿರುವ ಹಂಪ್.
ಕಡಬ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ಹಂಪ್ (ರಸ್ತೆ ಉಬ್ಬು) ನಿಂದಾಗಿ ಎರಡು ದಿನಗಳಿಂದ ಹಲವು ವಾಹನಗಳು ಅಪಘಾತಕ್ಕೀಡಾಗಿರುವುದು ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡ ಬಳಿಕ ಸೇತುವೆಯ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿನ ತಿರುವುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವ ದೂರುಗಳ ಹಾಗೂ ಮಾಧ್ಯಮ ವರದಿಗಳ ಬಳಿಕ ಸೇತುವೆಯ ಎರಡೂ ಕಡೆ ತಡೆ ಬೇಲಿ, ರಿಫ್ಲೆಕ್ಟರ್ಗಳನ್ನು ಅಳವಡಿಸಲಾಗಿತ್ತು. ಆದರೂ ಕೆಲ ದಿನಗಳ ಹಿಂದೆ ವೇಗವಾಗಿ ಬಂದ ವಾಹನವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಯ ಪಾದಚಾರಿ ಮಾರ್ಗದ ಗೋಡೆಗೆ ಬಡಿದು ರಿಫ್ಲೆಕ್ಟರ್ಗಳು ಹಾನಿಗೀಡಾಗಿದ್ದವು. ಈ ವಿಚಾರ ಪುತ್ತೂರು ತಾಲೂಕು ಪಂಚಾಯತ್ ಸಭೆಯಲ್ಲೂ ಚರ್ಚೆಗೆ ಬಂದು ಸೇತುವೆಯ ಎರಡೂ ಬದಿ ಸಂಪರ್ಕ ರಸ್ತೆಯಲ್ಲಿ ಹಂಪ್ ರಚಿಸುವಂತೆ ಸೂಚಿಸಲಾಗಿತ್ತು.
ಆದರೆ, ಹಂಪ್ಗ್ಳೇ ಈಗ ಅಪಘಾತಕ್ಕೆ ಕಾರಣವಾಗಿರುವುದು ವಿಪರ್ಯಾಸ. ಹಂಪ್ನಿಂದಾಗಿ ವಾಹನಗಳು ಚಾಲಕರ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ. ಹಲವು ಬೈಕ್ಗಳು ಪಲ್ಟಿ ಹೊಡೆದು, ಹಾನಿ ಹಾಗೂ ಗಾಯಗಳಿಗೆ ಕಾರಣವಾಗಿವೆ. ಕಾರುಗಳ ಅಡಿಭಾಗ ಈ ಹಂಪ್ಗೆ ತಾಗಿ ಬಿಡಿ ಭಾಗಗಳಿಗೆ ಹಾನಿಯಾಗುತ್ತಿರುವ ದೂರುಗಳು ಬಂದಿವೆ.
ರವಿವಾರ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದ್ದ ಮಂಗಳೂರು ಮೂಲದ ಯಾತ್ರಿಕರ ಹೊಸ ಕಾರು ಹಂಪ್ನ ಮೇಲೆ ಚಲಿಸಿದ ವೇಳೆ ಕಾರಿನ ತಳಭಾಗಕ್ಕೆ ಧಕ್ಕೆಯಾಗಿ, ದುರಸ್ತಿಗೆ 1 ಲಕ್ಷ ರೂ. ವೆಚ್ಚವಾಗಿದೆ. ಈ ಹಂಪ್ಗ್ಳನ್ನು ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಚಾಲಕರಿಂದ ವ್ಯಕ್ತವಾಗಿದೆ.
ಸಮಸ್ಯೆ ಕುರಿತು ವಿವರಣೆ
ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಅವರು ಸಾರ್ವಜನಿಕರ ದೂರಿನಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್ಡಿಸಿಎಲ್) ಅಧಿಕಾರಿಗಳನ್ನು ಸಂಪರ್ಕಿಸಿ, ಹಂಪ್ಗ್ಳಿಂದ ಆಗುತ್ತಿರುವ ಸಮಸ್ಯೆ ವಿವರಿಸಿ, ಸರಿಪಡಿಸಲು ಆಗ್ರಹಿಸಿದ್ದಾರೆ.
ಭೇಟಿ ನೀಡಿ ಪರಿಶೀಲನೆ
ಹೊಸಮಠದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ರಸ್ತೆಯ ಇಕ್ಕೆಲೆಗಳಲ್ಲಿ ಮತ್ತು ಮಧ್ಯದಲ್ಲಿ ಬಣ್ಣದ ಪಟ್ಟಿ ಹಾಕಲಾಗಿದೆ. ಸೇತುವೆಯಲ್ಲಿ ಪಾದಚಾರಿ ಮಾರ್ಗದ ಗೋಡೆಗಳಿಗೂ ರಿಫ್ಲೆಕ್ಟರ್ ಅಳವಡಿಸಲಾಗಿದೆ.ಸಂಪರ್ಕ ರಸ್ತೆ ಸೇತುವೆಗೆ ಸೇರುವಲ್ಲಿ ಹಾಗೂ ಸಂಪರ್ಕ ರಸ್ತೆಯ ತಿರುವಿನಲ್ಲಿ ಎರಡೂ ಕಡೆ ಝೀಬ್ರಾ ಕ್ರಾಸ್ ರೀತಿಯಲ್ಲಿ ಹಳದಿ ಬಣ್ಣದ ಪಟ್ಟಿ ಹಾಕಿ ಅದಕ್ಕೂ ರಿಫ್ಲೆಕ್ಟರ್ ಅಳವಡಿಸಿದೆ. ಆದರೂ ವಾಹನಗಳ ವೇಗ ನಿಯಂತ್ರಿಸಲು ಸಾಧ್ಯವಾಗಿಲ್ಲ ಎನ್ನುವ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಉಬ್ಬು ನಿರ್ಮಿಸಿದ್ದೇವೆ. ರಸ್ತೆ ಉಬ್ಬಿನಿಂದಾಗಿ ಸಮಸ್ಯೆ ಎದುರಾಗಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ನಮ್ಮ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
-ಮಂಜುನಾಥ್, ಎಇಇ, ಕೆಆರ್ಡಿಸಿಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ