ಮನೆಯಲ್ಲಿ ಜಲ ಮರು ಪೂರಣ: ಕೃಷಿಗೆ ವರದಾನ


Team Udayavani, Jul 26, 2019, 5:00 AM IST

m-30

ಸುಬ್ರಹ್ಮಣ್ಯ: ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಜಲಮರುಪೂರಣದ ಹಲವು ವಿಧಾನಗಳು ಕೃಷಿಕರಿಗೆ ವರದಾನ. ಇದಕ್ಕೆ ನಿದರ್ಶನ ಎಂಬಂತೆ 24 ಕೊಳವೆ ಬಾವಿಗಳನ್ನು ತೋಡಿ ಸೋಲು ಕಂಡಿದ್ದ ಪಂಜದ ಕೃಷಿಕರೊಬ್ಬರು ಕೊಳವೆ ಬಾವಿಗೆ ಜಲಮರು ಪೂರಣದ ಬಳಿಕ ಇದೀಗ ಜಲ ಸಂರಕ್ಷಣೆ ಸಾಧ್ಯ ಎನ್ನುವುದನ್ನು ಮನಗಂಡಿದ್ದಾರೆ. ಪಂಜದ ಸಂಗಾತಿ ಸ್ಟೋರ್ಸ್‌ನ ಮಾಲಕ, ಕೃಷಿಕ ವೆಂಕಟ್ರಮಣ ಭಟ್‌ ಕೊಳವೆ ಬಾವಿಗೆ ಜಲಮರುಪೂರಣ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಮನೆಯಿಂದಲೇ ಜಲ ಸಂರಕ್ಷಣೆಯ ಜಾಗೃತಿಗೆ ಮುಂದಾಗಿದ್ದಾರೆ.

ವೆಂಕಟ್ರಮಣ ಭಟ್‌ ನೀರಿನ ಅಗತ್ಯಕ್ಕಾಗಿ ಜಮೀನಿನಲ್ಲಿ 24 ಕೊಳವೆಬಾವಿಗಳನ್ನು ಕೊರೆಸಿದ್ದರು. ಅದರಲ್ಲಿ ಕೆಲವೊಂದರಲ್ಲಿ ಮಾತ್ರ ನೀರಿದೆ. ಬೇಸಗೆಯಲ್ಲಿ ತೋಟ ಒಣಗುತ್ತದೆ ಎಂದು ಅನಿಸಿದ ತತ್‌ಕ್ಷಣವೇ ಮತ್ತೂಂದು ಕೊಳವೆಬಾವಿ ಕೊರೆಸಲು ಮುಂದಾಗುತ್ತಿದ್ದರು. ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗದಿದ್ದಾಗ ಹತಾಶರಾಗುತ್ತಿದ್ದರು. ನಷ್ಟಕ್ಕೂ ಒಳಗಾಗಿದ್ದರು.

ಪರಿಹಾರ ಮಾರ್ಗ: ಜಲಮರುಪೂರಣವೇ ಇದಕ್ಕೆ ದಾರಿ ಎಂದು ತೀರ್ಮಾನಿಸಿ ಕೊಳವೆಬಾವಿ ರೀಚಾರ್ಜ್‌ ಮಾಡಿದ್ದಾರೆ. ಕೊಳವೆಬಾವಿ ತೆಗೆಯುವುದೇ ಪರಿಹಾರವಲ್ಲ. ತೆಗೆದ ನೀರನ್ನು ತುಂಬಿಸಬೇಕು. ಅಂತರ್ಜಲ ತುಂಬಿಸುವುದೂ ನಮ್ಮ ಕರ್ತವ್ಯ ಎನ್ನುವ ಅವರು, 24 ಕೊಳವೆ ಬಾವಿಗೂ ರೀಜಾರ್ಜ್‌ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಈ ವರ್ಷ ಕನಿಷ್ಠ 3 ಕೊಳವೆಬಾವಿ ರೀಚಾರ್ಜ್‌ ಅನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕಾರ್ಯ ವಿಧಾನ: ಮನೆಯ ಛಾವಣಿ ನೀರನ್ನು ಸಂಗ್ರಹ ಮಾಡಿ ಅದಕ್ಕೆ ವಿಶೇಷ ಮಾದರಿಯ ಫಿಲ್ಟರ್‌ ಅಳವಡಿಸಿ,  ಆ ನೀರು ಮೊದಲನೇ ಕೊಳವೆಬಾವಿಗೆ ಸೇರುವಂತೆ ಮಾಡಿದ್ದಾರೆ. ಆ ಕೊಳವೆಬಾವಿ ಎಲ್ಲ ನೀರನ್ನು ಏಕಕಾಲಕ್ಕೆ ತೆಗೆದುಕೊಳ್ಳುವುದಿಲ್ಲ.

ಕೊಂಚ ಕೊಂಚವೇ ರೀಜಾರ್ಜ್‌ ಆಗುತ್ತದೆ. ಹೆಚ್ಚಾದ ನೀರು ಕೊಳವೆಬಾವಿಯ ಮೇಲ್ಭಾಗದ ತೂತಿನ ಮೂಲಕ ಇನ್ನೊಂದು ಕೊಳವೆಬಾವಿಗೆ ಹೋಗುತ್ತದೆ. ಅದರಲ್ಲೂ ಹೆಚ್ಚಾಗಿ ನೀರು ಮತ್ತೂಂದು ಕೊಳವೆಬಾವಿಗೆ ಹೋಗುತ್ತದೆ. ಅಂಡರ್‌ ಗ್ರೌಂಡ್‌ ಪೈಪ್‌ ಮೂಲಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯ
ಪ್ರತಿಯೊಬ್ಬರೂ ಜಲಪಮರುಪೂರಣ ಮಾಡಬೇಕು. ನಾನು ಅನೇಕ ವರ್ಷಗಳಿಂದ ಭೂಮಿಯ ಒಳಗಿದ್ದ ನೀರು ತೆಗೆದೆ. ನಿರಂತರವಾಗಿ ಕೊಳವೆಬಾವಿ ಕೊರೆದೆ. ಈಚೆಗೆ ಕೊರೆಸಿದ ಕೊಳವೆಬಾವಿಯಲ್ಲಿ ಉತ್ತಮ ನೀರಿತ್ತು. ಅನಂತರ ಕಡಿಮೆಯಾಗುತ್ತಾ ಬಂತು. ಈಗ ಜ್ಞಾನೋದಯವಾಗಿದೆ. ನಾವು ತೆಗೆದ ನೀರನ್ನು ಭೂಮಿಗೆ ಮತ್ತೆ ತುಂಬಿಸಲೇಬೇಕು. ಈ ರೀತಿ ಮಾಡುವುದರಿಂದ ನನಗೆ ಮಾತ್ರ ಪ್ರಯೋಜನ ಎಂದು ಭಾವಿಸಬಾರದು. ಇದೊಂದು ಸಾಮಾಜಿಕ ಕಾರ್ಯ ಎಂದುಕೊಂಡು ಈ ಕೆಲಸ ಮಾಡಬೇಕು ಎನ್ನುತ್ತಾರೆ ಭಟ್‌.

ನೀರಿನ ಲಿಕ್ಕಾಚಾರವಿರಲಿ
ಒಂದು ಮೀಟರ್‌ ಪ್ರದೇಶದಲ್ಲಿ ಸುಮಾರು10×10ರಂತೆ ಸರಾಸರಿ ವರ್ಷದಲ್ಲಿ 4,500 ಲೀಟರ್‌ ಮಳೆ ನೀರು ಸಂಗ್ರಹವಾಗುತ್ತದೆ. ಒಬ್ಬನಿಗೆ ಒಂದು ದಿನಕ್ಕೆ ಸರಾಸರಿ 90ರಿಂದ 100 ಲೀಟರ್‌ ನೀರು ಬೇಕಾಗುತ್ತದೆ. ಒಂದು ವರ್ಷ ಸಂಗ್ರಹವಾದ ಮಳೆ ನೀರು ಒಬ್ಬ ವ್ಯಕ್ತಿಗೆ 45 ದಿನಕ್ಕೆ ಸಾಕಾಗಬಹುದು. ಈ ಪ್ರಕಾರ ವರ್ಷಕ್ಕೆ ಎಷ್ಟು ನೀರು ಬೇಕಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ಅಷ್ಟು ಪ್ರದೇಶದ ನೀರು ಸಂಗ್ರಹ ಮಾಡಿ ಬಳಕೆ ಮಾಡಬಹುದು ಎನ್ನುತ್ತಾರೆ ವೆಂಕಟ್ರಮಣ ಭಟ್‌.

ಆಧುನಿಕ ಮಾದರಿ
ಮನೆಯ ಛಾವಣಿಗೆ ಅಳವಡಿಸಿರುವ ಫಿಲ್ಟರ್‌ ಆಧುನಿಕ ವಿನ್ಯಾಸ ಹಾಗೂ ವ್ಯವಸ್ಥೆ ಒಳಗೊಂಡಿದೆ. ಮಳೆ ಬಂದಾಗ ಛಾವಣಿಯಲ್ಲಿದ್ದ ಕಸ, ಕಡ್ಡಿ ನೀರಿನ ಜತೆ ಕೊಳವೆಬಾವಿಗೆ ಸೇರದಂತೆ ಫಿಲ್ಟರ್‌ ತಡೆಯುತ್ತದೆ. ಫಿಲ್ಟರ್‌ ಕೆಳಭಾಗದಲ್ಲಿ ಟ್ಯಾಪ್‌ ಇದೆ. ಇದು ಬಿಟ್ಟಿದ್ದರೆ ಅಟೋ ಕ್ಲೀನಿಂಗ್‌ ಆಗುತ್ತದೆ ಎನ್ನುತ್ತಾರೆ ವೆಂಕಟ್ರಮಣ ಭಟ್‌. ಇಲ್ಲಿ ಅಲ್ಪ ಪ್ರಮಾಣದ ನೀರು ಭೂಮಿಗೆ ಹೋದರೂ ಪರವಾಗಿಲ್ಲ. ಆದರೆ ಸ್ವತ್ಛವಾದ ನೀರು ಕೊಳವೆಬಾವಿಗೆ ಇಳಿಯುತ್ತದೆ. ಈ ಮಾದರಿಯ ಫಿಲ್ಟರ್‌ ಗಮನ ಸೆಳೆದಿದೆ.

ಸಮಸ್ಯೆಗೆ ಪರಿಹಾರ
ಜಲಮರುಪೂರಣದ ಬಗ್ಗೆ ಪಡೆದ ಅನುಭವವನ್ನು ಮತ್ತೂಬ್ಬರಿಗೆ ದಾಟಿಸುವುದರಿಂದ ಅವರೂ ಅಳವಡಿಸಿ ಕೊಳ್ಳುವಂತಾಗುತ್ತದೆ. ಈ ಮೂಲಕ ಎಲ್ಲರಲ್ಲಿ ಜಾಗೃತಿ ಮೂಡಿದಲ್ಲಿ ಖಂಡಿತ ಸಂಭವನೀಯ ನೀರಿನ ಸಮಸ್ಯೆ ಪರಿಹರಿಸಬಹುದು. ಇದು ಸಾಮಾಜಿಕ‌ ಜವಾಬ್ದಾರಿ ರೀತಿಯಲ್ಲಿ ಆಗಬೇಕು. ತನ್ನ ಬಳಿ ಯಾರೆ ಬಂದರೂ ಉಚಿತ ಮಾಹಿತಿ ನೀಡಲು ಸಿದ್ಧ.
– ವೆಂಕಟ್ರಮಣ ಭಟ್‌, ಕೃಷಿಕ, ಪಂಜ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.