ರೆಂಕೆದಗುತ್ತು: ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು
Team Udayavani, Jul 19, 2019, 11:14 AM IST
ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ ದಿ| ಸಂಜೀವ ಅವರ ಪತ್ನಿ ಸುಂದರಿ (55) ಅವರು ವಿದ್ಯುತ್ ಸ್ಪರ್ಶವಾಗಿ ಜು. 17ರ ತಡರಾತ್ರಿ ಮೃತಪಟ್ಟಿದ್ದಾರೆ.
ಮಧ್ಯರಾತ್ರಿ 12.30ರ ಸುಮಾರಿಗೆ ಹಟ್ಟಿಯಲ್ಲಿ ದನ ಕೂಗಿದ್ದನ್ನು ಕೇಳಿ ಅವರು ಹಟ್ಟಿಗೆ ಬಂದಾಗ ದುರಂತ ಸಂಭವಿಸಿದೆ. ತಂತಿಯ ಮೂಲಕ ಅಲ್ಲಿದ್ದ ಕಬ್ಬಿಣದ ಕಂಬಕ್ಕೆ ವಿದ್ಯುತ್ ಪ್ರವಹಿಸಿದ್ದು, ಆ ಕಂಬವನ್ನು ಸುಂದರಿ ಸ್ಪರ್ಶಿ ಸಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ. ಅವರ ಬೊಬ್ಬೆ ಕೇಳಿ ಧಾವಿಸಿ ಬಂದ ಮನೆಮಂದಿ ಅವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರಾದರೂ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಎಸ್ಐ ಕಲೈಮಾರ್, ಮೆಸ್ಕಾಂ ಎಇಇ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪುತ್ರರಾದ ದಸಂಸ ಮುಖಂಡ ರಮೇಶ್ ಆರ್. ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.