ವೀಕ್ಷಕರ ಮನ ಗೆದ್ದ ”ಬಣ್ಣ” ಕಿರು ಚಿತ್ರ
Team Udayavani, Aug 17, 2019, 1:21 PM IST
ಉಡುಪಿ: ಸದ್ಗುರು ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಸದಾನಂದ ಉಡುಪಿ ನಿರ್ದೇಶನದ ”ಬಣ್ಣ” ಕಿರುಚಿತ್ರ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರ ಮನಗೆಲ್ಲುವಲ್ಲಿ ಸಫಲವಾಗಿದೆ.
ಒಂದು ಸಾಮಾನ್ಯ ಹಳ್ಳಿಯಲ್ಲಿಯೂ ಒಂದು ಚಿಕ್ಕ ಘಟನೆ ಹೇಗೆ ಕೋಮುವಾದದ ಬಣ್ಣಕ್ಕೆ ತಿರುಗುತ್ತದೆ, ಈಗಿನ ಯುವ ಜನಾಂಗ ಆ ಘಟನೆಗೆ ಯಾವ ರೀತಿ ಸ್ಪಂದಿಸುತ್ತಾರೆ. ಹಿಂದಿನ ಪೀಳಿಗೆ ಮತ್ತು ಇಂದಿನ ಪೀಳಿಗೆ ಆ ಘಟನೆಯನ್ನು ನೋಡುವ ದೃಷ್ಟಿಕೋನ, ಊರಿನ ಹಿರಿಯ ಮಾಸ್ಟರ್ ಆ ಯುವ ಜನಾಂಗವನ್ನು ತಿದ್ದುವ ರೀತಿ ಎಲ್ಲಾ ಸೊಗಸಾಗಿ ಮೂಡಿ ಬಂದಿದೆ.
ಮನ ಮುಟ್ಟುವ ಕಥಾ ಹಂದರ, ಬಿಗಿಯಾದ ಚಿತ್ರಕಥೆ, ಅರ್ಥಗರ್ಭಿತ ಸಂಭಾಷಣೆ, ದಕ್ಷ ನಿರ್ದೇಶನ ಹಾಗೂ ಮನೋಜ್ಞ ಅಭಿನಯ ಚಿತ್ರದ ಪ್ರಮುಖ ಅಂಶವಾಗಿದೆ.
ಕುರುಡಣ್ಣನ ಪಾತ್ರದಲ್ಲಿ ಭಾಸ್ಕರ್ ಮಣಿಪಾಲ್ ಇವರ ಮನೋಜ್ಞ ಅಭಿನಯ, ಮೇಷ್ಟ್ರ ಪಾತ್ರದಲ್ಲಿ ಪ್ರಭಾಕರ್ ಕುಂದರ್ ರವರ ನೈಜವೆನಿಸುವ ನಟನೆ ಚಿತ್ರದ ಪ್ಲಸ್ ಪಾಯಿಂಟ್ . ಇನ್ನುಳಿದಂತೆ ರಂಗ ಭೂಮಿ ಶ್ರೀಪಾದ್ ಹೆಗಡೆ , ಸಂದೀಪ್ ಭಕ್ತ , ವಿನೋದ್ ಕುಮಾರ್, ರಾಜೇಶ್ ಮಾಬಿಯಾನ್ , ನಿರಂಜನ್ ಬೇಕಲ್ ಹಾಗೂ ಯುವ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ.
ಶುಭಂ,ಸಂಭ್ರಮ್ ಸಹೋದರರು ನಿರ್ಮಾಪಕರಾಗಿರುವ ಈ ಕಿರುಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ- ನಿರ್ದೇಶನದ ಜವಾಬ್ದಾರಿ ಹೊತ್ತಿರುವುದು ಸದಾನಂದ ಉಡುಪಿ.
30 ನಿಮಿಷಗಳ ಈ ಕಿರುಚಿತ್ರವನ್ನು ಪೂರ್ತಿಯಾಗಿ ನೋಡಿದಲ್ಲಿ ಮಾತ್ರ ಈ ಚಿತ್ರದ ಅರ್ಥ ತಿಳಿಯುವುದು ಎಂಬುದು ನಿರ್ದೇಶಕರ ಅಭಿಪ್ರಾಯ. ಕಿರುಚಿತ್ರ ಪ್ರಿಯರು ಯುಟ್ಯೂಬ್ ನಲ್ಲಿ ಈ ಕಿರು ಚಿತ್ರ ವೀಕ್ಷಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್