ಉಚಿತ ಆರೋಗ್ಯ ಸೇವೆಗೆ ಕೃಷ್ಣಮಠದಿಂದ “ಧನ್ವಂತರಿ ಚಿಕಿತ್ಸಾಲಯ’
Team Udayavani, Apr 22, 2019, 12:39 PM IST
ಉಡುಪಿ: ಅನ್ನದಾನದ ಮೂಲಕ ಪ್ರಸಿದ್ಧವಾಗಿರುವ ಉಡುಪಿ ಶ್ರೀಕೃಷ್ಣಮಠಕ್ಕೆ ಬರುವ ಭಕ್ತರು ಹಾಗೂ ಆವಶ್ಯಕತೆಯುಳ್ಳವರಿಗೆ 24×7 ದಿನ ವೈದ್ಯಕೀಯ ಸೇವೆ ಆರಂಭಿಸುವ ಮೂಲಕ ಪಲಿ ಮಾರು ಶ್ರೀಗಳ ಪರ್ಯಾಯ ಹೊಸ ಇತಿಹಾಸ ಸೃಷ್ಟಿಸಿದೆ.
ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಆಶಯದಂತೆ ಮಠಕ್ಕೆ ಬರುವ ಭಕ್ತರ ಆರೋಗ್ಯ ತಪಾಸಣೆ ಮತ್ತು ಶುಶ್ರೂಷೆಗೆ ಸುಸಜ್ಜಿತ ಧನ್ವಂತರಿ ಕ್ಲಿನಿಕ್ ತೆರೆಯಲಾಗಿದೆ. ಇಲ್ಲಿ ಭಕ್ತರು, ಆವಶ್ಯಕತೆಯುಳ್ಳವರಿಗೆ ಸೇವೆ ದೊರಕುತ್ತಿದೆ.
10 ಲ.ರೂ. ವೆಚ್ಚ
ಮಠದ ಪಟ್ಟದ ಆನೆ ಲಾಯವಿದ್ದ 700 ಚ.ಅಡಿ ಜಾಗದಲ್ಲಿ ಸುಮಾರು 10 ಲ.ರೂ. ವೆಚ್ಚದಲ್ಲಿ ಧನ್ವಂತರಿ ಚಿಕಿತ್ಸಾಲಯ ನಿರ್ಮಿಸಲಾಗಿದೆ. ಕ್ಲಿನಿಕ್ನಲ್ಲಿ ಮೆಡಿಕಲ್ ರೂಮ್, ವೈದ್ಯರ ಕೊಠಡಿ, ಲ್ಯಾಬ್, ರೋಗಿಗಳ ನಿರೀಕ್ಷಣಾ ಕೊಠಡಿಗಳಿವೆ.
ಶ್ರೀ ಕೃಷ್ಣ ಚಿಕಿತ್ಸಾಲಯ ಸ್ಥಳಾಂತರ
ಅನೇಕ ವರ್ಷದಿಂದ ರಥಬೀದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕೃಷ್ಣ ಚಿಕಿತ್ಸಾಲಯವನ್ನು ಹೊಸದಾಗಿ ನಿರ್ಮಿಸಲಾದ ಧನ್ವಂತರಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ.
24×7 ಆರೋಗ್ಯ ಸೇವೆ
ಈ ಚಿಕಿತ್ಸಾಲಯದಲ್ಲಿ ಬರುವವರಿಗೆ ಚಿಕಿತ್ಸೆ ಒದಗಿಸಲು ದಿನವಿಡೀ ವೈದ್ಯರ ಸೇವೆ ಲಭ್ಯವಿರಲಿದೆ. ಉಡುಪಿ ಸುತ್ತಮುತ್ತಲಿನ ತಜ್ಞ ವೈದ್ಯರು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ವೈದ್ಯರು ಯಾವ ದಿನ ಲಭ್ಯರಿರುತ್ತಾರೆ ಎಂಬ ಮಾಹಿತಿಯನ್ನು ನೋಟಿಸ್ ಬೋರ್ಡ್ನಲ್ಲಿ ತಿಳಿಸುವ ಉದ್ದೇಶವಿದೆ.
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ