ಪ್ರತಿ ಜೀವಿಗೂ ಪುಣ್ಯದ ಅಪೇಕ್ಷೆ: ಮುನಿಶ್ರೀ ವೀರಸಾಗರ್
Team Udayavani, Jul 13, 2018, 10:54 AM IST
ಕಾರ್ಕಳ: ಮನುಷ್ಯರು ಸೇರಿದಂತೆ ಎಲ್ಲ ಜೀವಿಗಳಿಗೂ ಪುಣ್ಯ ಪ್ರಾಪ್ತಿಯಾಗಬೇಕೆಂಬ ಅಪೇಕ್ಷೆ ಇರು
ತ್ತದೆ. ಪುಣ್ಯದ ಆಸೆ ಮತ್ತು ಇಚ್ಛೆ ಯಿಂದಲೇ ಎಲ್ಲರೂ ಕೆಲಸ ನಿರ್ವ ಹಿಸುತ್ತಾರೆ. ಪಾಪಿಗಳಾಗುವ ಇಚ್ಛೆ ಯಾರಿಗೂ ಇರುವುದಿಲ್ಲ ಎಂದು ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮುನಿಮಹಾರಾಜರು ಹೇಳಿದರು.
ಕಾರ್ಕಳದಲ್ಲಿ ಜು. 27ರಿಂದ ನ. 11ರ ವರೆಗೆ ನಡೆಯಲಿರುವ ಚಾರ್ತುಮಾಸ್ಯ ವ್ರತದ ಹಿನ್ನೆಲೆಯಲ್ಲಿ ಬುಧವಾರ ತಮ್ಮ ಪುರಪ್ರವೇಶದ ಅನಂತರ ಜೈನಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕಾರ್ಕಳದ ಈ ಪುಣ್ಯ ನಾಡಿನಲ್ಲಿ 65 ವರ್ಷಗಳ ಬಳಿಕ ಈ ಚಾತುರ್ಮಾಸ್ಯ ನಡೆಯುತ್ತಿದೆ. ಧರ್ಮ ಪ್ರವರ್ಧನೆಗೆ ಮಹತ್ತರವಾದ ಕಾಲಘಟ್ಟ ಇದು. ಒಂದೇ ಸ್ಥಳದಲ್ಲಿದ್ದುಕೊಂಡು ಧರ್ಮ ಪ್ರವರ್ಧನೆಯ ಕಾರ್ಯವನ್ನು ಚಾತು
ರ್ಮಾಸ್ಯದಲ್ಲಿ ಮಾಡಲಾಗುತ್ತದೆ. ಈ ಸಮಯದಲ್ಲಿ ಸಮು ದಾಯದ ಎಲ್ಲರೂ ಜ್ಞಾನ ವೃದ್ಧಿಪಡಿಸಿ ಕೊಳ್ಳುವುದು ಮುಖ್ಯ ಎಂದು ನುಡಿ ದರು.
ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವೀರಸಾಗರ ಶ್ರೀಗಳಿಗೆ ಚಾತುರ್ಮಾಸ ಕೈಗೊಳ್ಳಲು ವಿವಿಧ ಭಾಗಗಳಿಂದ ಬೇಡಿಕೆ ಬಂದಿತ್ತು. ಆದರೆ ಶ್ರೀಗಳು ಕಾರ್ಕಳಕ್ಕೆ ಬಂದಿರುವುದು ನಮ್ಮ ಸೌಭಾಗ್ಯ. ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು. ಶ್ರೀಗಳು ಧರ್ಮಕ್ಕೆ ಸಂಸ್ಕಾರ, ಶಕ್ತಿ ತುಂಬಲಿದ್ದಾರೆ ಎಂದರು.ಸಮಿತಿಯ ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್, ಪ್ರಮುಖರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ