ಕುಂದಾಪುರ : ಬಿಜೆಪಿಯಿಂದ ಬೃಹತ್ ರೋಡ್ ಶೋ
Team Udayavani, Apr 16, 2019, 6:30 AM IST
ಕುಂದಾಪುರ: ಲೋಕಸಭೆ ಚುನಾವಣೆಯ ಉಡುಪಿ – ಚಿಕ್ಕ ಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪರ ಮತ ಯಾಚಿಸಿ ಸೋಮವಾರ ಕುಂದಾಪುರ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಯಿತು.
ಬೃಹತ್ ಕಾಲ್ನಡಿಗೆ ಜಾಥಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಹಾಲಾಡಿ ಅವರು ಚಾಲನೆ ನೀಡಿದರು.
ಶಾಸ್ತಿÅ ವೃತ್ತದಿಂದ ಆರಂಭಗೊಂಡ ರೋಡ್ ಶೋ ಪಾರಿಜಾತ ಸರ್ಕಲ್ ಮೂಲಕವಾಗಿ ಹೊಸ ಬಸ್ ನಿಲ್ದಾಣವಾಗಿ ಮತ್ತೆ ಶಾಸ್ತಿÅ ಸರ್ಕಲ್ ಬಳಿ ಬಂದು ಸಮಾಪನಗೊಂಡಿತು. ಇದೇ ವೇಳೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಿಕ್ಷಾ ಚಾಲಕರ ಬಳಿ ಮತಯಾಚಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಪ್ರ. ಕಾರ್ಯದರ್ಶಿಗಳಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಕಿರಣ್ ಕೊಡ್ಗಿ, ಸತೀಶ್ ಪೂಜಾರಿ, ಸುನೀಲ್ ಶೆಟ್ಟಿ, ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಸುಪ್ರೀತಾ ಉದಯ ಕುಲಾಲ್, ಜಯಶ್ರೀ ಮೊಗವೀರ, ಗುಣರತ್ನಾ, ಜ್ಯೋತಿ, ಪುರಸಭೆ ಸದಸ್ಯರು, ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು