ಬಿಎಸ್‌ ವೈ ನೂತನ ಸಚಿವ ಸಂಪುಟ: ಕರಾವಳಿಗರು ಹೇಳುವುದೇನು ?


Team Udayavani, Aug 22, 2019, 11:35 AM IST

cabinet

ಮಣಿಪಾಲ: ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಮಂಗಳವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸಚಿವ ಸ್ಥಾನ ದೊರಕಿದೆ. ಈ ಬಗ್ಗೆ ʼಉದಯವಾಣಿʼ ಫೇಸ್‌ ಬುಕ್‌ ನಲ್ಲಿ ಜನರಿಗೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕರಾವಳಿಗೆ ಇನ್ನಷ್ಟು ಸ್ಥಾನ ಲಭಿಸಬೇಕಿತ್ತೇ ? ಯಾಕೆ ? ಎಂಬ ಪ್ರಶ್ನೆ ಕೇಳಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಆಯ್ದಪ್ರತಿಕ್ರಿಯೆಗಳು ಇಲ್ಲಿವೆ.

1. ದೀಕ್ಷಿತ್‌ ಗೌಡ ಕರಂದ್ಲಾಜೆ: ಹೌದು ಕೊಡಬೇಕಾಗಿತ್ತು. ಹಿರಿಯ ಶಾಸಕ ಎಸ್. ಅಂಗಾರ ಅವರಿಗಾದ್ರು ಕೊಡಬೇಕಿತ್ತು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾಜಪ ಒಂದೇ ಒಂದು ಕ್ಷೇತ್ರ ಉಳಿಸಿಕೊಂಡಿದ್ದರೆ ಅದು ಸುಳ್ಯ ಕ್ಷೇತ್ರ… ಪ್ರತಿ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಅಂತರವನ್ನು ಭಾಜಪ ಗೆ ತಂದುಕೊಡುವ ಕ್ಷೇತ್ರವು ಸುಳ್ಯ ಕ್ಷೇತ್ರವೇ. ಅಂಗಾರರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಲ್ಲಿನ ಮತದಾರರಿಗಾದ್ರು ಗೌರವ ನೀಡಬೇಕಿತ್ತು.

2. ನಳಿನಾಕ್ಷಿ ಕುಲಾಲ್:‌ ನನಗೇನು ಹಾಗನಿಸುವುದಿಲ್ಲ. ಕೆಲಸ ಮಾಡಲು ಮಂತ್ರಿ ಪದವಿಯ ಅವಶ್ಯಕತೆ ಇಲ್ಲ. ಸಿಗುವ ಅನುದಾನದ ಸರಿಯಾದ ಬಳಕೆಯಾಗಲಿ  ಜನರ ಆಶೋತ್ತರಗಳಿಗೆ ಸೂಕ್ತವಾದ ಸ್ಪಂದನ ಇರಲಿ.

3. ಅಭಿಶೇಕ್‌ ಶೆಟ್ಟಿ ಜಡ್ಕಲ್:‌ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಕಡೆಗಣಿಸಿದ್ದು ಸ್ವಲ್ಪ ಬೇಸರ ತಂದಿದೆ. ಆದರೆ ಇನ್ನಾದರೂ ಜಾತಿ ಸಮುದಾಯಗಳ ಓಲೈಕೆಗೆ ಸಚಿವ ಸಂಪುಟವನ್ನು ರಚಿಸದೆ ಸಮಸ್ತ ಕರ್ನಾಟಕದ ಬೆಳವಣಿಗೆಗೆ ಸೂಕ್ತವಾಗುವ ಸಚಿವ ಸಂಪುಟವನ್ನು ರಚಿಸಿ.

4. ಶರತ್‌ ಶೆಟ್ಟಿ: ನಿಜವಾಗಿಯೂ ಸಿಗಬೇಕಿತ್ತು. ಕರಾವಳಿ ಬಿಜೆಪಿಯಲ್ಲಿ ಹಲವು ಸಮರ್ಥ ಅನುಭವಿ ನಾಯಕರಿದ್ದರು ಉದಾಹರಣೆಗೆ ಅಂಗಾರ ಸುನೀಲ್ ಕುಮಾರ್ ಹಾಲಾಡಿ ಅವರು ಯಾರಿಗಾದ್ರು ಕಾರ್ಯಕರ್ತರಿಗೆ ಇನ್ನಷ್ಟು ಪಕ್ಷ ಸಂಘಟನೆಗೆ ಪ್ರೊತ್ಸಾಹ ಕೊಟ್ಟ ಹಾಗೆ ಆಗ್ತಿತ್ತು

5. ವಿನಯ್‌ ಪಟ್ನ ಕಡಬ: ಇಲ್ಲಿವರೆಗೆ ಹಣಕ್ಕಾಗಿ ಪಕ್ಷ ಬಿಟ್ಟು ಹೋದವರು ನಮ್ಮ ಜಿಲ್ಲೆಯಲ್ಲಿ ಇಲ್ಲ ಸ್ವಾಮಿ .ಎಂಜಲು ತಿನ್ನುವವರು ನಾವಲ್ಲ.

6. ನಾಗರಾಜ ಶೆಟ್ಟಿ: ಕಾಂಗ್ರೆಸ್ ಚಿಂತನೆ – ಕರಾವಳಿ ಬಿಜೆಪಿಯ ಭದ್ರ ಕೋಟೆ. ಹಾಗಾಗಿ ಕರಾವಳಿ ಭಾಗಕ್ಕೆ ಹೆಚ್ಚು ಮಂತ್ರಿ ಸ್ಥಾನ ನೀಡಿ ನಮ್ಮ ಆ ಭಾಗದ ಕಾಂಗ್ರೆಸ್ ಶಾಸಕರ ಸ್ಥಾನವನ್ನು ಮುಂದಿನ ಚುನಾವಣೆಯಲ್ಲಿಯೂ ಉಳಿಸಿಕೊಳ್ಳಬೇಕು. ಹೆಚ್ಚು ಮಂತ್ರಿ ಸ್ಥಾನ ಕೊಡದಿದ್ದರೇ ಮುಂದಿನ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ನಮಗೆ ಹೆಚ್ಚು ಸ್ಥಾನ ಸಿಗಲ್ಲ.
#ಬಿಜೆಪಿ ಚಿಂತನೆ : ಕರಾವಳಿ ಬಿಜೆಪಿಯ ಭದ್ರ ಕೋಟೆ.ಹಾಗಾಗಿ ಆ ಭಾಗದ ಶಾಸಕರಿಗೆ ಯಾವುದೇ ಮಂತ್ರಿ ಸ್ಥಾನ ಕೊಡದಿದ್ದರೂ ಪರ್ವಾಗಿಲ್ಲ. ನಾವು ಕೇಳದೇ ಇದ್ದರೂ ಅಲ್ಲಿಯ ಜನ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಓಟ್ ಹಾಕಿಯೇ ಹಾಕ್ತಾರೆ.

7. ಕೃಷ್ಣ ಪೂಜಾರಿ: ಪ್ರತಿಯೊಂದು ಸರಕಾರವೂ ದಕ್ಷಿಣ ಕನ್ನಡವನ್ನು ಕಡೆಗಣಿಸಿದೆ.

8. ಗಿರೀಶ್‌ ಸಾಲ್ಯಾನ್:‌ ನಮಗೆ ಮಂತ್ರಿ ಎನ್ನುವ ಪಟ್ಟ ಬೇಡ. ಇಲ್ಲಿ ಇರುವ ಜನರಿಗೆ ಒಳ್ಳೆ ಸವಲತ್ತು ಸಿಕ್ಕಿದರೆ ಸಾಕು. ಮನೆ, ನೀರು, ವಿದ್ಯುತ್‌, ಸರಕಾರಿ ಮೆಡಿಕಲ್‌ ಕಾಲೇಜು, ಸರಕಾರಿ ಶಾಲೆ ಮತ್ತು ಆಸ್ಪತ್ರೆ ಅಭಿವೃದ್ದಿ, ಗಲಾಟೆ ಇಲ್ಲದೆ ನೆಮ್ಮದಿಯ ಬದುಕು ಕಲ್ಪಿಸಬೇಕು, ಇಂತಹ ಕೆಲಸಗಳನ್ನು ಮೊದಲು ಮಾಡಿ

9. ನಾರಾಯಣ ಭಟ್‌: ಮಂತ್ರಿ ಪದವಿ ಇಲ್ಲದೆಯೂ ಕರಾವಳಿಯ ಶಾಸಕರು ಕೆಲಸ ಮಾಡಬಲ್ಲರು. ಆಡಳಿತ ಪಕ್ಷದ ಶಾಸಕರೇ ಇರುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ಮಂತ್ರಿಮಂಡಲದೊಂದಿಗೆ ಕೆಲಸ ಮಾಡಬಹುದು.

10. ಲೋಕೇಶ್‌ ಕಲ್ಲಾಜೆ: ಕೇಂದ್ರ, ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿರುವಾಗ ಸಚಿವ ಸ್ಥಾನದ ಅಗತ್ಯವಿಲ್ಲ. ಒಬ್ಬ ಉತ್ತಮ ಪ್ರತಿನಿಧಿಯಿಂದ ಖಂಡಿತ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು.

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.