ಪೊಲೀಸರು ಅವಕಾಶ ನೀಡಿದರೆ ಶೀರೂರು ಶ್ರೀ ಆರಾಧನೆ
Team Udayavani, Jul 28, 2018, 10:25 AM IST
ಉಡುಪಿ: ತನಿಖೆಯ ಉದ್ದೇಶದಿಂದ ಶೀರೂರು ಮೂಲ ಮಠ ಈಗ ಪೊಲೀಸ್ ಸುಪರ್ದಿಯಲ್ಲಿದೆ. ಪೊಲೀಸರು ಅವಕಾಶ ನೀಡಿದರೆ ಶೀರೂರು ಶ್ರೀಗಳ ಆರಾಧನೆಯನ್ನು ನಿಗದಿತ ದಿನಾಂಕದಂದೇ ನಡೆಸಲಾಗುವುದು ಎಂದು ಶೀರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶುಕ್ರವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಶೀರೂರು ಶ್ರೀಗಳು ಅಸ್ತಂಗತ ರಾದ 13ನೇ ದಿನಕ್ಕೆ ಅಂದರೆ ಜು. 31ರಂದು ಆರಾಧನೆಯ ವಿಧಿವಿಧಾನಗಳು ನಡೆಯಬೇಕಾಗಿವೆ. ಆದರೆ ಪ್ರಸ್ತುತ ತನಿಖೆಯ ಉದ್ದೇಶದಿಂದ ಪೊಲೀಸರು ಮಠದೊಳಗೆ ಸಾರ್ವಜನಿಕರಿಗೆ ಪ್ರವೇಶ ನೀಡುತ್ತಿಲ್ಲ. ಈ ಕುರಿತು ಎಸ್ಪಿ ಜತೆಗೆ ಮಾತನಾಡಿದ್ದೇವೆ. ಅವರು ಈ ಕುರಿತು ಶೀಘ್ರ ತಿಳಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಜು. 31 ರೊಳಗೆ ಪೊಲೀಸ್ ಸುಪರ್ದಿಯಿಂದ ಮುಕ್ತ ವಾದರೆ ಇಲ್ಲವೇ ಆರಾಧನೆಗೆ ಅವಕಾಶ ನೀಡಿದರೆ ಅಂದೇ ನಡೆಯಲಿದೆ.
ಇಲ್ಲವಾದಲ್ಲಿ ಅನಿವಾರ್ಯವಾಗಿ ಮುಂದೆ ಬೇರೊಂದು ದಿನ ಸಂಪ್ರದಾಯ ಪ್ರಕಾರ ನಡೆಸಲಾಗುವುದು. ನಮ್ಮ ವಿಧಿವಿಧಾನಗಳಿಂದ ಪೊಲೀಸ್ ತನಿಖೆಗೆ ಅಡ್ಡಿಯಾಗಬಾರದು. ವೃಂದಾವನ ನಿರ್ಮಾಣ ಶಾಸ್ತ್ರದಂತೆ ಒಂದು ವರ್ಷದ ಬಳಿಕವೇ ನಡೆಯುತ್ತದೆ. ಮೂಲಮಠದಲ್ಲಿ ನಿತ್ಯಪೂಜೆ, ಪ್ರತಿ ಶನಿವಾರ ರಂಗಪೂಜೆ ನಡೆಯುತ್ತಿದೆ. ಆದರೆ ಭಕ್ತರು ಪಾಲ್ಗೊಳ್ಳಲು ಅವಕಾಶವಿಲ್ಲ ಎಂದರು.
ಬೇಸರ ವ್ಯಕ್ತಪಡಿಸಿದ ಶ್ರೀಗಳು
ಕೆಲವು ಮಾಧ್ಯಮಗಳ ವರದಿಯಿಂದ ತುಂಬಾ ಬೇಸರವಾಗಿದೆ. ಅರಗಿಸಿಕೊಳ್ಳಲು ಆಗದಂತಹ ವರದಿಗಳು ಬಂದಿವೆ. ಅನ್ಯಾಯ ಮಾಡಿದವರು ಸಹಿಸಿಕೊಳ್ಳಬಹುದು. ಆದರೆ ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಾವು ಮನುಷ್ಯರಲ್ಲವೆ? ಪೊಲೀಸರಿಗೆ ಸಹಕಾರ ನೀಡುತ್ತಿದ್ದೇವೆ. ಪೊಲೀಸರು ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇಲ್ಲ. ಚಿನ್ನಾಭರಣಗಳು ಕೂಡ ಪೊಲೀಸರ ಸುಪರ್ದಿಯಲ್ಲಿಯೇ ಇವೆ ಎಂದು ಶ್ರೀಗಳು ಹೇಳಿದರು.
ಯೋಗ್ಯ ವಟುವಿನ ಆಯ್ಕೆ
ಶೀರೂರು ಮಠದ ಉತ್ತರಾಧಿಕಾರಿಯನ್ನಾಗಿ ಯೋಗ್ಯ ವಟುವನ್ನೇ ಆಯ್ಕೆ ಮಾಡಲಾಗುವುದು. ಯೋಗ್ಯರು ಸಿಕ್ಕಿದ ಕೂಡಲೇ ಶಿಷ್ಯ ಸ್ವೀಕಾರ ನಡೆಯಲಿದೆ. ಅದುವರೆಗೆ ಮಠದ ಆಸ್ತಿಗಳ ಉಸ್ತುವಾರಿ ನೋಡಿಕೊಳ್ಳುವ ಉದ್ದೇಶದಿಂದ ಐವರು ಸದಸ್ಯರನ್ನೊಳಗೊಂಡ ಉಸ್ತುವಾರಿ ಸಮಿತಿ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀರೂರು ಮಠ ಅನಾಥವಾಗುತ್ತಿದೆ ಎಂಬ ವರದಿಗಳಿಗೆ ಅರ್ಥವಿಲ್ಲ. ದ್ವಂದ್ವ ಮಠ ಇರುವಾಗ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ಶೀರೂರು ಮಠದಲ್ಲಿದ್ದವರನ್ನೇ ಈಗ ವ್ಯವಸ್ಥಾಪಕರನ್ನಾಗಿ ನಿಯೋಜಿಸಲಾಗಿದೆ. ಮಠಕ್ಕೆ ಇರುವ ಸಾಲದ ವಿಚಾರ ಗೊತ್ತಾಗಿಲ್ಲ. ಅವೆಲ್ಲವೂ ಇನ್ನಷ್ಟೇ ತಿಳಿಯಬೇಕಿದೆ. ಮಠದ ದಾಖಲೆಗಳು ಸೇರಿದಂತೆ ಯಾವುದೇ ವಸ್ತು ಗಳನ್ನು ಮುಟ್ಟಲು ಹೋಗಿಲ್ಲ. ಎಲ್ಲ ಮಠಗಳು ಸಹಕಾರ ನೀಡುತ್ತಿವೆ ಎಂದು ಸೋದೆ ಶ್ರೀಗಳು ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ