ಸ್ಪೀಡ್ ಬೋಟ್ ಸೇವೆ ಆರಂಭ
ಮಲ್ಪೆ ಬೀಚ್ನಿಂದ ಸೈಂಟ್ಮೇರಿ ದ್ವೀಪ ಯಾನ
Team Udayavani, Sep 16, 2019, 5:13 AM IST
ಮಲ್ಪೆ: ಕರಾವಳಿಯ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣ ಮಲ್ಪೆ ಸೈಂಟ್ಮೇರಿ ದ್ವೀಪಕ್ಕೆ ಸ್ಪೀಡ್ಬೋಟ್ ಸೇವೆ ಸೆ. 15ರಿಂದ ಆರಂಭಗೊಂಡಿದೆ. ಇದು ಮಲ್ಪೆ ಬೀಚ್ನಿಂದ ಹೊರಡಲಿದ್ದು ಕೇವಲ 15ನಿಮಿಷಗಳಲ್ಲಿ ತಲುಪಲು ಸಾಧ್ಯವಾಗಲಿದೆ.
ಜೈ ಹನುಮಾನ್, ಜ್ಞಾನಜ್ಯೋತಿ, ಸೀಬರ್ಡ್ ಮತ್ತು ಇಂಡಿಯನ್ ಒಟ್ಟು 4 ಸ್ಪೀಡ್ ಬೋಟ್ಗಳು ಸೇವೆಗೆ ಇದೆ. ಒಂದು ಬೋಟಿನಲ್ಲಿ ಚಾಲಕರು,ನಿರ್ವಾಹಕರು ಸೇರಿದಂತೆ 14 ಮಂದಿಗೆ ಮಾತ್ರ ತೆರಳಲು ಅವಕಾಶ ವಿದ್ದು, ಯಾನಕ್ಕಾಗಿ ಕಾಯುವ ಪ್ರಮೇಯ ಇರುವುದಿಲ್ಲ. ಮಾತ್ರವಲ್ಲದೆ ದ್ವೀಪದಲ್ಲೂ ಹೆಚ್ಚು ಹೊತ್ತು ಸುತ್ತಾಡಿ ಕಾಲ ಕಳೆಯುವ ಅವಕಾಶ ನೀಡ ಲಾಗುತ್ತದೆ.
ಬೋಟ್ಗಳು ಅತ್ಯಾಧುನಿಕ ಸೌಕರ್ಯ ಹೊಂದಿದ್ದು, ಪ್ರತಿ ಬೋಟಿನಲ್ಲಿ ಇಬ್ಬರು ನುರಿತ ಈಜುಗಾರರು, ಲೈಫ್ಬಾಯ್, ಲೈಫ್ ಜಾಕೆಟ್ ಸಹಿತ ಸುರಕ್ಷಿತ ಸಾಧನಗಳು ಪ್ರಯಾಣಿಕರಿಗೆ ಲಭಿಸಲಿದೆ.
ಕಳೆದ 11 ವರ್ಷಗಳಿಂದ ಬೋಟಿ ನಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾ, ಉತ್ತಮ ಸೇವೆ ಕಾಪಾಡಿ ಕೊಂಡು ಬಂದಿದ್ದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಂದ ಸಂಸ್ಥೆಗೆ ಪ್ರಶಂಸಾ ಪತ್ರ ದೊರಕಿದೆ. ಸ್ಪೀಡ್ಬೋಟ್ನ ಟಿಕೆಟ್ ಕೌಂಟರ್ನ್ನು ಬೀಚ್ ಗಾಂಧಿ ಪ್ರತಿಮೆಯ ಬಳಿ ತೆರೆಯಲಾಗಿದೆ ಎಂದು ಟೂರಿಸ್ಟ್ ಬೋಟಿನ ಪ್ರಮುಖ ನಿರ್ವಾಹಕ ಸನತ್ ಸಾಲ್ಯಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ