ಯಶೋದಾ ಕೃಷ್ಣ ಬಹುಮಾನ ವಿತರಣೆ ಇಂದು
Team Udayavani, Sep 21, 2019, 4:30 AM IST
ಉಡುಪಿ: ಶ್ರೀ ಕೃಷ್ಣಾಷ್ಣಮಿ ಪ್ರಯುಕ್ತ “ಉದಯವಾಣಿ’ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ ಯಶೋದಾ ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಶನಿವಾರ, ಸೆ.21ರಂದು ನಡೆಯಲಿದೆ.
ನಗರದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯ ಎರಡನೇ ಮಹಡಿಯಲ್ಲಿ ಅಪರಾಹ್ನ 3 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೃತ್ಯಗುರು ವಿದುಷಿ ಲಕ್ಷ್ಮೀ ಗುರುರಾಜ್ ಭಾಗವಹಿಸಲಿದ್ದು, ಪ್ರಾಯೋಜಕರಾದ ಗೀತಾಂಜಲಿ ಸಿಲ್ಕ್ಸ್ ನ ಆಡಳಿತ ಪಾಲುದಾರರಾದ ರಾಮಕೃಷ್ಣ ನಾಯಕ್ ಮತ್ತು ಎಂಎಂಎನ್ಎಲ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್ ಕುಮಾರ್ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು “ಉದಯವಾಣಿ’ಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೂ ಬಹುಮಾನ ವಿತರಣೆ ನಡೆಯಲಿದೆ.