“ಮೆಸ್ಕಾಂನ ಮಾಹಿತಿಗಳು ಜನರಿಗೂ ತಿಳಿಯಲಿ’
Team Udayavani, Aug 22, 2019, 5:00 AM IST
ಉಪ್ಪುಂದ: ಬಿಜೂರು ಗ್ರಾಮ ಪಂಚಾಯತ್ನ ಗ್ರಾಮ ಸಭೆ ಬವಳಾಡಿ ಸರಕಾರಿ ಶಾಲೆಯಲ್ಲಿ ಆ.21ರಂದು ನಡೆಯಿತು. ವಿವಿಧ ಯೋಜನೆಗಳ ಹಾಗೂ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಬವಳಾಡಿ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಇದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಎಫ್ಎಸಿ ಶುಲ್ಕ ಏಕೆ?
ಮೆಸ್ಕಾಂನ ಮಾಹಿತಿಗಳು ಗುತ್ತಿಗೆದಾರರಿಗೆ ಬಿಟ್ಟರೆ ಜನರಿಗೆ ತಿಳಿಯುತ್ತಿಲ್ಲ. ಮೆಸ್ಕಾಂನ ಯೋಜನೆಗಳ ಮಾಹಿತಿ ಸಾರ್ವಜನಿಕರಿಗೆ ಇಲ್ಲ. ಜನರಿಗೆ ತಲುಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಮಸ್ಥ ವೆಂಕಟ ರಾವ್ ಮಾತನಾಡಿ, ಎಫ್ಎಸಿ ಶುಲ್ಕ ತೆಗೆದುಕೊಳ್ಳು ವಂತಿಲ್ಲವಾದರೂ ವಿದ್ಯುತ್ ಬಿಲ್ನಲ್ಲಿ ವಿಧಿಸಲಾಗುತ್ತಿದೆ ಏಕೆ ಎಂದು ಪ್ರಶಿಸಿದರು. ರವಿ ದೇವಾಡಿಗ ಮಾತನಾಡಿ, ಮರಗಳನ್ನು ಕಡಿದು ರಸ್ತೆ ಮೇಲೆಯೇ ಬಿಟ್ಟು ಹೋಗುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಡಿದ ಮರದ ಗಲ್ಲುಗಳನ್ನು ಬದಿಗೆ ಹಾಕುವಂತೆ ತಿಳಿಸಿದರು.
ದೀಟಿ ಮಹಾಲಿಂಗೇಶ್ವರ ದೇವಸ್ಥಾನ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗಳು ತೀರಾ ಅಪಾಯದ ಸ್ಥಿತಿಯಲ್ಲಿ ನೇತಾಡುತ್ತಿದ್ದು ಸರಿಪಡಿಸುವಂತೆ ಆಗ್ರಹಿಸಿದರು. ಕೆಲವು ಕಡೆ ಬೀದಿ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ, ನಿರ್ವಹಣೆ ಇಲ್ಲದೇ ಸೊರಗುತ್ತಿವೆ. ಹಲವು ಕಡೆಗಳಲ್ಲಿ ಬೀದಿ ದೀಪಗಳೇ ಇಲ್ಲ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಾವಿ ನಿರ್ಮಾಣದಿಂದ ಸಮಸ್ಯೆ ಬಗೆಹರಿಯದು
ಜಯರಾಮ ಶೆಟ್ಟಿ ಮತ್ತು ರಾಜೇಂದ್ರ ಮಾತನಾಡಿ 3 ಮತ್ತು 4ನೇ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈಗಾಗಲೇ ಸಾಕಷ್ಟು ಸರಕಾರಿ ಬಾವಿಗಳಿವೆ. ಇವುಗಳ ನೀರಿನ ಸದ್ಬಳಕೆಯ ಕುರಿತು ಯೋಜನೆ ರೂಪಿಸಿ, ನೀರಿನ ಸಮಸ್ಯೆ ಪರಿಹರಿಸಬೇಕು. ಹೊರತು ಅನಗತ್ಯ ರಾಜಕೀಯ ಗೊಂದಲಗಳನ್ನು ಉಂಟು ಮಾಡಬಾರದು ಎಂದರು.
ಬಿಜೂರು ಶಾಲಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿ ವಿತರಣೆ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಜಯರಾಮ ಶೆಟ್ಟಿ ಆಗ್ರಹಿಸಿದರು. ತ್ಯಾಜ್ಯ ಸಮಸ್ಯೆ, ಚರಂಡಿ, ಗಂಟಿ ಹೊಳೆ ಸೇತುವೆಯ ಬದಿ ಕುಸಿದು ಸಂಚಾರಕ್ಕೆ ತೊಂದರೆ, ರಸ್ತೆ ಸಮಸ್ಯೆಗಳ ಕುರಿತು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯೆ ಜಗದೀಶ ದೇವಾಡಿಗ, ಗ್ರಾ.ಪಂ. ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಸದಸ್ಯರು, ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಜಿ. ಉಪ್ಪುಂದ, ಪಿಡಿಒ ಸತೀಶ ತೊಳಾರ ಪಂ. ಸಿಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗೋಮಾಳ ನಿರ್ಮಿಸಿ
ಬಿಜೂರು ಗ್ರಾಮದಲ್ಲಿರುವ ಗೋಮಾಳವನ್ನು ಗುರುತಿಸುವಂತೆ ಪ್ರತಿ ಗ್ರಾಮ ಸಭೆಯಲ್ಲಿ ಆಗ್ರಹಿಸುತ್ತಿದ್ದೇವೆ. ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಬೀಡಾಡಿ ಜಾನುವಾರುಗಳ ಹಾವಳಿಯಿಂದಾಗಿ ರೈತರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ರೈತ ಬೆಳೆದ ಫಸಲುಗಳನ್ನು ತಿಂದು ಹಾಕುತ್ತಿರುವ ಬೀಡಾಡಿ ಜಾನುವಾರುಗಳನ್ನು ನಿಯಂತ್ರಿಸಬೇಕು. ಗೋಮಾಳ ಜಾಗವನ್ನು ಗುರುತಿಸಿದರೆ ಇದು ಸಾಧ್ಯವಾಗುತ್ತದೆ. ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ