ತರಹೇವಾರಿ ತಿನಿಸುಗಳ ಉಣಬಡಿಸಿದ “ಅಡುಗೆ ಹಬ್ಬ’
Team Udayavani, Apr 18, 2019, 6:30 AM IST
ಕುಂದಾಪುರ: ಜೇಸಿಐ ಕುಂದಾಪುರದ ವತಿಯಿಂದ ಹೆಸ್ಕತ್ತೂರಿನ ಸರಕಾರಿ ಹಿ. ಪ್ರಾ. ಶಾಲೆಯಲ್ಲಿ “ಅಡುಗೆ ಹಬ್ಬ’ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳೇ ಸ್ವತಹಃ ಬೆಂಕಿಯನ್ನು ಬಳಸದೇ ತಮ್ಮದೇ ಪರಿಕಲ್ಪನೆಯಡಿ ವೈವಿಧ್ಯಮಯ ತಿಂಡಿ – ತಿನಿಸುಗಳನ್ನು ತಯಾರಿಸಿ ಸಂಭ್ರಮಪಟ್ಟರು.
ಕೋಸಂಬರಿ, ಫ್ರುಟ್ ಸಲಾಡ್, ಮೊಸರು ಬಾಜಿ, ಸ್ಯಾಂಡ್ವಿಚ್, ಅವಲಕ್ಕಿ, ಪುನರ್ಪುಳಿ ಜ್ಯೂಸ್, ರಸಾಯನ, ಶರಬತ್, ಉಪ್ಪಿನಕಾಯಿ, ಮುಂಡಕ್ಕಿ ಉಪRರಿ ಹೀಗೆ ಮಕ್ಕಳು ತರಹೇವಾರಿ ತಿನಿಗಳನ್ನು ತಯಾರಿಸಿ, ಉಣ ಬಡಿಸಿದರು.
ಶಾಲೆಯ ಹಿರಿಯ ಶಿಕ್ಷಕಿ ಜಯಲಕ್ಷ್ಮೀ ಬಿ. ಅವರು ಉದ್ಘಾಟಿಸಿದರು.
ಜೇಸಿಐ ಕುಂದಾಪುರದ ಅಧ್ಯಕ್ಷ ಅಶೋಕ ತೆಕ್ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಶೇಖರ ಕುಮಾರ, ಸಹ ಶಿಕ್ಷಕರಾದ ಜಯರಾಮ ಶೆಟ್ಟಿ, ವಿಜಯಾ ಆರ್., ವಿಜಯ ಶೆಟ್ಟಿ, ರವೀಂದ್ರ ನಾಯಕ್, ಅತಿಥಿ ಶಿಕ್ಷಕಿ ಪ್ರೀತಿ, ಜರ್ಮನ್ನ ಶಿಕ್ಷಕಿ ರೂಯಿಸ್ಕಾ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
Kota; 1 ಕೋಟಿ ರೂ. ಮೌಲ್ಯದ 1.2 ಕೆಜಿ ಚಿನ್ನ ವಶ: ಚಿತ್ರ ನಿರ್ಮಾಪಕನ ಮನೆಯಿಂದ ಕದ್ದಾತ ಸೆರೆ
Heavy Rain ಸಿದ್ದಾಪುರ: ಮನೆಗೆ ಮರ ಬಿದ್ದು ಮೂವರಿಗೆ ಗಾಯ
Kundapura: ಕಿರುಕುಳ; ಆರೋಪಿಗೆ ನಿರೀಕ್ಷಣ ಜಾಮೀನು