ಗಗನಕ್ಕೇರಿದ ಮೀನಿನ ಬೆಲೆ; ಖಾದ್ಯವೂ ದುಬಾರಿ
Team Udayavani, Jun 24, 2019, 5:33 AM IST
ಕುಂದಾಪುರ: ಈ ಬಾರಿಯ ಮುಂಗಾರು ತಡವಾಗಿ ಆರಂಭವಾಗಿರುವುದರಿಂದ ನಾಡದೋಣಿ ಮೀನುಗಾರಿಕೆ ಮೇಲೆಯೂ ಇದರ ಬಿಸಿ ತಟ್ಟಿದ್ದು, ಎಲ್ಲ ತರಹದ ಮೀನಿನ ಬೆಲೆ ಗಗನಕ್ಕೇರಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಬೂತಾಯಿ (ಬೈಗೆ) ಮೀನಿಗೂ ಈಗ ಭಾರೀ ಹಣ ನೀಡುವಂತಾಗಿದೆ.
ಯಾಂತ್ರೀಕೃತ ಮೀನುಗಾರಿಕಾ ಋತು ಮೇ 31ಕ್ಕೆ ಅಂತ್ಯವಾದ ಬಳಿಕ ಗಂಗೊಳ್ಳಿ, ಮರವಂತೆ, ಕೊಡೇರಿ, ಶಿರೂರು ಸಹಿತ ಎಲ್ಲ ಬಂದರುಗಳಲ್ಲಿ ಯಾವುದೇ ಮೀನುಗಾರಿಕೆ ನಡೆಯುತ್ತಿಲ್ಲ. ಮಳೆಗಾಲದಲ್ಲಿ ನಡೆಯುವ ನಾಡದೋಣಿ ಮೀನುಗಾರಿಕೆ ಕೂಡ ಇನ್ನೂ ಆರಂಭಗೊಂಡಿಲ್ಲ. ಇದರಿಂದ ಮೀನಿನ ದರ ನಿರೀಕ್ಷೆಗೂ ಮೀರಿ ಹೆಚ್ಚಳವಾದಂತಾಗಿದೆ.
ಕುಂದಾಪುರ, ಗಂಗೊಳ್ಳಿ ಭಾಗದಲ್ಲಿ ಒಂದು ಕೆ.ಜಿ. ಬೂತಾಯಿಗೆ 200 ರೂ.ಗಿಂತಲೂ ಹೆಚ್ಚಿದೆ. 12 ಬೂತಾಯಿಗೆ 100 ರೂ.ಗೆ ಕೆಲವೆಡೆಗಳಲ್ಲಿ ಮಾರಾಟವಾಗುತ್ತಿದೆ. ಇದನ್ನು ದೂರದ ಚೆನ್ನೈ ಯಿಂದ ಇಲ್ಲಿಗೆ ಪೂರೈಕೆ ಮಾಡಲಾಗುತ್ತಿದೆ. ಇನ್ನು 4 ಬಂಗುಡೆಗೆ 100 ರೂ. ಇದ್ದರೆ, ಕೊಡ್ಡಾಯಿ (ಕೊಡ್ವಾಯಿ)ಗೆ 1 ಕೆ.ಜಿ.ಗೆ 130ರಿಂದ 170 ರೂ. ವರೆಗೆ ಮಾರಾಟವಾಗುತ್ತಿದೆ. ಅಂಜಲ್, ಸಹಿತ ಇನ್ನಿತರ ಮೀನುಗಳು ಸಿಗುತ್ತಲೇ ಇಲ್ಲ.
ಮೀನಿನ ಖಾದ್ಯವೂ ದುಬಾರಿ
ಮೀನಿನ ಬೆಲೆ ಹೆಚ್ಚಳವಾದುದರಿಂದ ಸರ್ವೆ ಸಾಮಾನ್ಯ ವಾಗಿ ಹೊಟೇಲ್ಗಳಲ್ಲಿ ತಯಾರಿಸುವ ಮೀನಿನ ಖಾದ್ಯಗಳು ಕೂಡ ದುಬಾರಿಯಾಗಿದೆ. ಮೀನಿನ ಖಾದ್ಯಗಳ ದರ ಏಕಾಏಕಿ ಏರಿಕೆಯಾಗಿದ್ದು, ಮತ್ಸ್ಯಪ್ರಿಯರಿಗೆ ಸ್ವಲ್ಪ ಮಟ್ಟಿಗೆ ಕಹಿಯನ್ನುಂಟು ಮಾಡಿದೆ.
ಆರಂಭವಾಗದ ನಾಡದೋಣಿ ಮೀನುಗಾರಿಕೆ
ಮುಂಗಾರು ಮಳೆ ಈಗಿನ್ನು ನಿಧಾನಕ್ಕೆ ಬಿರುಸು ಪಡೆದುಕೊಳ್ಳುತ್ತಿದ್ದು, ಸಮುದ್ರದಲ್ಲಿ ತೂಫಾನ್ ಕಾಣಿಸಿ ಕೊಂಡು, ಅದು ಶಾಂತವಾದ ಬಳಿಕವಷ್ಟೇ ನಾಡದೋಣಿ ಮೀನುಗಾರರು ಕಡಲಿಗಿಳಿಯುತ್ತಾರೆ. ಆದರೆ ಜುಲೈ ಮೊದಲ ವಾರದಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ