ಮಕ್ಕಳ ಬಿಸಿಯೂಟಕ್ಕೆ ಉಪ್ಪಡ್ ಪಚ್ಚಿರ್
ಹಲಸಿನ ಖಾದ್ಯದ ಸೂಪರ್ ಊಟ!
Team Udayavani, Aug 2, 2019, 8:11 PM IST
ಉಪ್ಪಡ್ ಪಚ್ಚಿರ್ ಗಾಗಿ ಹಲಸಿನ ಸೋಳೆ ತೆಗೆಯುತ್ತಿರುವುದು.
ಎಡಪದವು: ಕುಪ್ಪೆಪದವು ಕಲ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಿಂದ ಮಕ್ಕಳ ಬಿಸಿಯೂಟವನ್ನು ಇನ್ನಷ್ಟು ರುಚಿಕರವನ್ನಾಗಿಸಲು ಹಲಸಿನ ಸೊಳೆಗಳನ್ನು ಉಪ್ಪುನೀರಲ್ಲಿ ಹಾಕಿಡಲಾಗಿದೆ.
ಎಸ್.ಡಿ.ಎಂ.ಸಿ. ಸದಸ್ಯರು ಶಾಲಾ ಮುಖ್ಯ ಶಿಕ್ಷಕಿ ಮೇರಿ ವಾಝ್ ಹಾಗೂ ಸಹಶಿಕ್ಷಕರ ಸಹಕಾರದಿಂದ ಮಕ್ಕಳ ಜತೆ ಸೇರಿ ಹಲಸಿನ ಕಾಯಿಯ ಉಪ್ಪಡ್ ಪಚ್ಚಿರ್ ಹಾಕುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಎಸ್.ಡಿ.ಎಂ.ಸಿ. ಸದಸ್ಯರು ಊರಿನ ಹಲಸಿನ ಮರದಿಂದ ಹಲಸಿನ ಕಾಯಿಯನ್ನು ಹೊತ್ತು ತಂದು ಮಕ್ಕಳ ಜತೆ ಸೇರಿ ಅದರ ಸೊಳೆ, ಬೀಜ ತೆಗೆದು ಪ್ರತ್ಯೇಕಿಸಿದರು. ಸೊಳೆಯನ್ನು ಉಪ್ಪಿನಲ್ಲಿ ಹಾಕಿದರೆ, ಬೀಜವನ್ನು ಸಂಗ್ರಹಿಸಿಡಲಾಯಿತು.
ಆಷಾಢ ಮಾಸದ ತುಳುನಾಡಿನ ಪ್ರಸಿದ್ಧ ಪಲ್ಯವಾಗಿರುವ ಉಪ್ಪಡ್ ಪಚ್ಚಿರ್ ಮಕ್ಕಳ ಬಿಸಿಯೂಟವನ್ನು ಇನ್ನಷ್ಟು ರುಚಿಕಟ್ಟಾಗಿಸಲಿದೆ. ಇದರ ಬೀಜವನ್ನು ಸಂಬಾರ್ನಲ್ಲಿ ಬಳಸುವುದಾಗಿ ಸದಸ್ಯರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಮಕ್ಕಳ ಬಿಸಿಯೂಟಕ್ಕೆ ತೊಗರಿಬೇಳೆಯ ತೋವೆ ಇದ್ದರೆ ಈ ಶಾಲೆಯ ಮಕ್ಕಳಿಗೆ ಹಲಸಿನ ಉಪ್ಪಡ್ ಪಚ್ಚಿರ್ ನ ಖಾದ್ಯ ದೊರಕಲಿದೆ. ಊರಿನ ಹಲಸಿನ ಮರಗಳಲ್ಲಿ ಬೆಳೆದು ಮಳೆಗಾಲದಲ್ಲಿ ಕೊಳೆತು ಹೋಗುವ ಹಲಸಿನ ಕಾಯಿಯನ್ನು ಈ ರೀತಿ ಬಳಕೆ ಮಾಡಿದರೆ ಮಕ್ಕಳ ಊಟ ರುಚಿಕಟ್ಟಾಗುವ ಜೊತೆಗೆ ಪೌಷ್ಠಿಕಾಂಶವೂ ದೊರಕುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್