ರಾಜಸ್ಥಾನ : 11 ಮಂದಿ ಹಿಂದೂ ವಲಸಿಗರ ಕುಟುಂಬ ಸದಸ್ಯರ ಸಾವು! ಕಾರಣ ನಿಗೂಢ
Team Udayavani, Aug 9, 2020, 4:55 PM IST
ಜೋಧ್ಪುರ: ಪಾಕಿಸ್ತಾನದ ಹಿಂದೂ ವಲಸಿಗರ ಕುಟುಂಬದ 11 ಮಂದಿ ಸದಸ್ಯರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಜೋದ್ ಪುರ ಜಿಲ್ಲೆಯ ಲೊಡ್ತಾ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಬರ್ಹತ್ ಭೇಟಿ ನೀಡಿದ್ದಾರೆ, ಈ ಕುರಿತು ಮಾಹಿತಿ ನೀಡಿದ ಅವರು ಘಟನೆ ಶನಿವಾರ ರಾತ್ರಿ ನಡೆದಿರಬಹುದು, ಘಟನಾ ಸ್ಥಳದಲ್ಲಿ ಮೃತ ಪಟ್ಟ ಕುಟುಂಬದ ಓರ್ವ ಸದಸ್ಯ ಮಾತ್ರ ಬದುಕುಳಿದಿದ್ದು ಈತ ತನಗೆ ಈ ಘಟನೆ ಕುರಿತು ಏನು ತಿಳಿದಿಲ್ಲಾ ಎಂದಿದ್ದಾನೆ ಎಂದು ಹೇಳಿದ್ದಾರೆ.
ಕುಟುಂಬವು ಪಾಕಿಸ್ತಾನದ ಭಿಲ್ ಸಮುದಾಯಕ್ಕೆ ಸೇರಿದ್ದ ಕುಟುಂಬವಾಗಿದ್ದು ಅವರು ರಾಜಸ್ಥಾನದ ಲೊಡ್ತಾ ಗ್ರಾಮದ ಜಮೀನಿನಲ್ಲಿ ಕೃಷಿ ಕಾರ್ಯಗಳನ್ನು ಮಾಡಿಕೊಂಡಿದ್ದು ಅಲ್ಲಿಯೇ ಗುಡಿಸಲಿನಲ್ಲಿ ವಾಸವಾಗಿದ್ದಾರೆ, ಆದರೆ ಇಂದು ಬೆಳಗ್ಗೆ ಹನ್ನೊಂದು ಮಂದಿಯ ಮೃತ ದೇಹಗಳು ಪಕ್ಕದ ಜಮೀನಿನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳ ಹೇಳಿಕೆಯಂತೆ ಘಟನಾ ಸ್ಥಳದಲ್ಲಿ ರಾಸಾಯನಿಕ ವಸ್ತುವಿನ ವಾಸನೆ ಬಂದಿದ್ದು ಕುಟುಂಬದ ಸದಸ್ಯರು ರಾಸಾಯನಿಕ ಸೇವಿಸಿ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ, ಶವಗಳನ್ನು ಮರಣೋತ್ತರ ಪರೀಕ್ಷೆಯಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ