ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!


Team Udayavani, Oct 9, 2021, 8:55 PM IST

1-t

ಕೋವಿಡ್ ಮಹಾಮಾರಿ ಬಂದ ಬಳಿಕ ಅನೇಕ ಮಂದಿ ನೆಚ್ಚಿನ ತಾಣಗಳಿಗೆ ಪ್ರವಾಸ ಹೋಗಲು ಸಾಧ್ಯವಾಗದೆ ಬೇಸರ ಮಾಡಿಕೊಂಡಿದ್ದಾರೆ. ಆದರೆ ಇದೀಗ ಕೋವಿಡ್ ಸೋಂಕಿನ ಪ್ರಭಾವ ತಗ್ಗುತ್ತಿದ್ದು, ಪ್ರವಾಸೋದ್ಯಮವೂ ಮತ್ತೆ ಚಿಗುರೊಡೆಯುತ್ತಿದೆ, ನಿಮಗೆ ವಿದೇಶದ  ರಮಣೀಯ ಸ್ಥಳಗಳಿಗೆ ಪ್ರವಾಸ ಹೋಗುವ ಮನಸ್ಸಿದೆಯೇ, ಅದೂ ಆರ್ಥಿಕ ಪ್ರೋತ್ಸಾಹವನ್ನು ಪಡೆದು !. ನಿಮ್ಮ ಕನಸನ್ನು ಶೀಘ್ರದಲ್ಲೇ ನನಸಾಗಿಸಿಕೊಳ್ಳಬಹುದು.

ಪ್ರಪಂಚದಾದ್ಯಂತದ ಹಲವಾರು ದೇಶಗಳು, ನಗರಗಳು ಮತ್ತು ರಾಜ್ಯಗಳು ಆರ್ಥಿಕ ಪ್ರೋತ್ಸಾಹವನ್ನು ನೀಡಿ ನಿಮ್ಮನ್ನು ಪ್ರವಾಸಕ್ಕೆ ಕರೆಯುತ್ತಿವೆ. ಆದರೆ ಒಂದು ಗುಟ್ಟು ಅಲ್ಲಿದೆ..

ಪ್ರವಾಸಕ್ಕೆ ಹೋಗಲೇ ಬೇಕಾದರೆ ಕೆಲವು ಸ್ಥಳಗಳಲ್ಲಿ ನೀವು ವ್ಯಾಪಾರ ಆರಂಭಿಸಬೇಕಾಗಿದ್ದರೆ, ಕೆಲವೆಡೆ ನೀವು ಮನೆಗಳನ್ನು ಸ್ವಂತ ವೆಚ್ಚದಲ್ಲಿ ದುರಸ್ಥಿ ಮಾಡಬೇಕಾಗಿದೆ.

ಯಾವೆಲ್ಲ ಪ್ರಮುಖ ಸ್ಥಳಗಳು ?

ಅಮೆರಿಕಾ

ಒಕ್ಲಹೋಮ

ತುಲ್ಸಾ ನಗರವು ದೂರದ ಕೆಲಸಗಾರರನ್ನು ಹುಡುಕುತ್ತಿದೆ. $ 10,000 (Rs7,47385) ಅನುದಾನದ ಜೊತೆಗೆ, ಇದು ನಿಮಗೆ ಉಚಿತ ಡೆಸ್ಕ್ ಸ್ಥಳ ಮತ್ತು ನೆಟ್ವರ್ಕಿಂಗ್ ಈವೆಂಟ್‌ಗಳಿಗೆ ಪ್ರವೇಶವನ್ನು ಒದಗಿಸಲು ಸಿದ್ಧವಿದೆ.

ಮಿನ್ನೇಸೋಟ
14,000 ಜನಸಂಖ್ಯೆ ಹೊಂದಿರುವ ಬೆಮಿಡ್ಜಿ ನಗರವು ದೂರದ ಕೆಲಸಗಾರರನ್ನು ಹುಡುಕುತ್ತಿದ್ದು, ಪ್ರತಿಯಾಗಿ, ನಿಮ್ಮ ವ್ಯಾವಹಾರವನ್ನು ಸ್ಥಾಪಿಸಲು ಮತ್ತು ಬೆಳೆಸಲು ನಿಮಗೆ ಸಹಾಯ ಬೇಕಾದಲ್ಲಿ ಟ್ರಾವೆಲಿಂಗ್ ವೆಚ್ಚಗಳು, ಸಹ-ಕೆಲಸ ಮಾಡುವ ಸ್ಥಳ ಮತ್ತು ಸಮುದಾಯ ಸಹಾಯ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ನಿಮಗೆ $ 2,500 (1,86,846) ನೀಡಲಾಗುತ್ತದೆ.

ಅಲಾಸ್ಕಾ
ರಿಮೋಟ್ ವರ್ಕರ್ ಗ್ರ್ಯಾಂಟ್ ಸ್ಕೀಮ್ ಇಲ್ಲಿಗೆ ತೆರಳಲು ನೀವು ಬಯಸಿದಲ್ಲಿ $ 10,000 ((Rs7,47385; ಎರಡು ವರ್ಷಗಳಲ್ಲಿ) ನೀಡುತ್ತದೆ.

ಯುರೋಪ್


ಸ್ಪೇನ್
ಪೊಂಗಾ, ಅಸ್ಟೂರಿಯಸ್ ಪಟ್ಟಣಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಿದ್ದು, ಅಲ್ಲಿ ನೆಲೆಸಲು ಮುಂದಾದವರಿಗೆ ಸಹಾಯ ಮಾಡಲು ಕುಟುಂಬಗಳಿಗೆ € 3,000 (2,59,137ರೂ.) ನೀಡುತ್ತಿದೆ, ಜೊತೆಗೆ ಪಟ್ಟಣದಲ್ಲಿ ಜನಿಸಿದ ಪ್ರತಿ ಮಗುವಿಗೆ ಹೆಚ್ಚುವರಿಯಾಗಿ € 3,000 (2,59,137 ರೂ.) ನೀಡುತ್ತದೆ. ನಿಮ್ಮ ಆದಾಯಕ್ಕೆ ಪೂರಕವಾಗಿ ರೂಬಿಯಾ ಪಟ್ಟಣವು ನಿಮಗೆ ತಿಂಗಳಿಗೆ -1 100-150 (8,636 ರೂ.) ನೀಡಲು ಮುಂದಾಗಿದೆ.

ಸ್ವಿಜರ್ಲ್ಯಾಂಡ್
ಪಟ್ಟಣದ ಜನಸಂಖ್ಯೆಯನ್ನು ಹೆಚ್ಚಿಸಲು, ಅಲ್ಬಿನೆನ್ 45 ವರ್ಷ ಕ್ಕಿಂತ ಕಡಿಮೆ ವಯಸ್ಸಿನ ವಲಸಿಗರನ್ನು ಕರೆಯುತ್ತಿದ್ದು, $ 25,200 (21,76,398 ರೂ.) ನಗದು ವೆಚ್ಚದಲ್ಲಿ ನೀಡುತ್ತದೆ. ನೀವು ಅಲ್ಲಿ 10 ವರ್ಷಗಳ ಕಾಲ ಇರಬೇಕಾಗುತ್ತದೆ. ಜೊತೆಗೆ, ನೀವು ಸ್ವಿಟ್ಜರ್ಲೆಂಡ್‌ನ ನಿವಾಸಿಯಾಗಿರಬೇಕು, ಅಥವಾ ನೀವು ಸ್ವಿಸ್ ನಿವಾಸಿಗಳನ್ನು ಮದುವೆಯಾಗಿರಬೇಕಾಗಿದೆ.

ಇಟಲಿ
ಕ್ಯಾಂಡೆಲಾ ಮತ್ತು ಕ್ಯಾಲಬ್ರಿಯಾಗಳು ಅಲ್ಲಿ ನೆಲೆಗೊಳ್ಳಲು ಹಣಕಾಸಿನ ಪ್ರೋತ್ಸಾಹವನ್ನು ನೀಡುತ್ತಿವೆ. ಹಲವು ಸ್ಥಳಗಳಲ್ಲಿ ಕೆಲವು. ಕ್ಯಾಂಡೆಲಾ ಒಬ್ಬರಿಗೆ € 800 (69,090 ರೂ.), ಜೋಡಿಗಳಿಗೆ € 1,200 (1,03,639 ರೂ.) ಯುರೋಗಳು ಮತ್ತು ಕುಟುಂಬಗಳಿಗೆ € 2,000 (1,72,732 ರೂ.) ನೀಡುತ್ತದೆ. ಕ್ಯಾಲಬ್ರಿಯಾಕ್ಕೆ ಅರ್ಜಿ ಸಲ್ಲಿಸುವವರು 40 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಮೂರು ವರ್ಷಗಳಲ್ಲಿ € 28,000 (24,18,975 ರೂ.) ಪಡೆಯಲು ಅರ್ಹರಾಗಿರುತ್ತಾರೆ.

ನೀವು ವ್ಯಾಪಾರ ಆರಂಭಿಸಿದರೆ ನೆರವು ನೀಡುವ ದೇಶಗಳು

ಐರ್ಲೆಂಡ್
ನೀವು ವ್ಯಾಪಾರವನ್ನು ಆರಂಭಿಸಲು ಬಯಸಿದರೆ, ಐರ್ಲೆಂಡ್ ದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು . ಎಂಟರ್‌ಪ್ರೈಸ್ ಐರ್ಲೆಂಡ್ ಹೊಸ ವ್ಯವಹಾರಗಳನ್ನು ಬೆಂಬಲಿಸುವ ಯೋಜನೆಯಾಗಿದ್ದು, ಕಳೆದ ವರ್ಷ, ಇದು ಆರಂಭದ ವ್ಯವಹಾರಗಳಿಗೆ €120 ದಶಲಕ್ಷವನ್ನು ನೀಡಿತು. ಅರ್ಜಿ ಸಲ್ಲಿಸಲು ನೀವು ಐರಿಶ್ ಪ್ರಜೆ ಆಗಿರಬೇಕಾಗಿಲ್ಲ, ಆದರೆ ನೀವು ನಿಮ್ಮ ವ್ಯವಹಾರವನ್ನು ಐರ್ಲೆಂಡ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಚಿಲಿ

ಸ್ಟಾರ್ಟ್ ಅಪ್ ಚಿಲಿಯು 300,000 ಡಾಲರ್ (2 ಕೋಟಿ ರೂ ) ಸಿ ಎಲ್ ಪಿ ನಿಧಿಯನ್ನು ವಿಶಿಷ್ಟವಾದ ವ್ಯಾಪಾರ ಕಲ್ಪನೆಗಳನ್ನು ಹೊಂದಿರುವರಿಗೆ ನೀಡುತ್ತಿದೆ.

ಮಾರಿಷಸ್

ಉಷ್ಣವಲಯದ ದ್ವೀಪ ರಾಷ್ಟ್ರವು 20,000 ಮಾರಿಷಿಯನ್ ರೂಪಾಯಿಗಳನ್ನು (35,218) ಅಲ್ಲಿಗೆ ತೆರಳುವರಿಗೆ ಆರಂಭಿಕ ವ್ಯವಹಾರಗಳಿಗೆ ಪ್ರೋತ್ಸಾಹವಾಗಿ ನೀಡುತ್ತಿದೆ. ಅರ್ಹತೆ ಪಡೆಯಬೇಕಾದರೆ, ಒಂದು ಅನನ್ಯ ಮತ್ತು ಲಾಭದಾಯಕ ವ್ಯಾಪಾರ ಕಲ್ಪನೆಯನ್ನು ಸಮಿತಿಗೆ ಪ್ರದರ್ಶಿಸುವ ಅಗತ್ಯವಿದೆ.

ಮನೆಗಳನ್ನು ನವೀಕರಿಸುವ ಅಗತ್ಯವಿರುವ ದೇಶಗಳು !

ಇಟಲಿಯ € 1 ಮನೆಗಳು
ಸಿಸಿಲಿ, ಸಾರ್ಡಿನಿಯಾ, ಅಬ್ರುಝ್ವೋ ಮತ್ತು ಮಿಲಾನೊ ಪ್ರದೇಶಗಳಲ್ಲಿ ಎಲ್ಲರೂ ಮೆಕ್‌ಡೊನಾಲ್ಡ್ಸ್ ಬರ್ಗರ್‌ಗಿಂತ ಕಡಿಮೆ ಬೆಲೆಗೆ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ನೀವು ನಿಗದಿತ ಸಮಯದೊಳಗೆ ನಿಮ್ಮ ಸ್ವಂತ ವೆಚ್ಚದಲ್ಲಿ ಶಿಥಿಲಗೊಂಡಿರುವ ಅವರ ಮನೆಗಳನ್ನು ನವೀಕರಿಸಿ ಕೊಡಬೇಕಾಗಿದೆ.

ಆಂಟಿಕಿಥೆರಾ, ಗ್ರೀಸ್
ಕೇವಲ 70 ಜನರು ನೆಲೆಯಾಗಿರುವ ಸುಂದರ ದ್ವೀಪ ಉಚಿತ ವಸತಿ, ಒಂದು ನಿವೇಶನ ಮತ್ತು € 500 (43,206ರೂ ) ಮೂರು ವರ್ಷಗಳವರೆಗೆ ನೀಡುತ್ತಿದೆ.

ಲೆಗ್ರಾಡ್, ಕ್ರೊವೇಷಿಯಾ
ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಉಳಿಸಲು, ಉತ್ತರ ಕ್ರೊವೇಷಿಯಾದ ಪಟ್ಟಣವು 1 ಕುನಾ ಅಂದರೆ 11ರೂಪಾಯಿಗಳಿಗೆ ಮನೆಗಳನ್ನು ಮಾರಾಟ ಮಾಡುತ್ತಿದೆ.

ವಿಮಾ ಕಂಪನಿಯ ಉದ್ಯೋಗಿ ವಿಲಿಯಂ ರಸೆಲ್ ನಡೆಸಿದ ಸಂಶೋಧನೆಯ ಪ್ರಕಾರ, ಜನಸಂಖ್ಯೆ ಇಳಿಕೆ , ಆರ್ಥಿಕತೆಯ ಕುಸಿತ ಮತ್ತು ಶಿಥಿಲಗೊಂಡ ಕಟ್ಟಡಗಳಿರುವ ಸ್ಥಳಗಳು ವಲಸಿಗರಿಗೆ ಬಾಗಿಲು ತೆರೆಯಲು ಪ್ರಮುಖ ಕಾರಣಗಳಾಗಿವೆ.

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.