ವಿಶ್ವಕಪ್‌ನಲ್ಲೀಗ ಎಲ್ಲರಿಗೂ ಗಾಯದ ಚಿಂತೆ!


Team Udayavani, Jun 18, 2019, 5:05 AM IST

asa

ನಾಟಿಂಗ್‌ಹ್ಯಾಮ್‌: ಪ್ರಸಕ್ತ ವಿಶ್ವಕಪ್‌ ಕೂಟವನ್ನು ‘ಇಂಜುರಿ ಹಿಟ್ ವಿಶ್ವಕಪ್‌’ ಎಂದರೆ ತಪ್ಪಾಗಲಾರದು ಎಂದೇ ವಿಶ್ಲೇಷಿಸಲಾಗುತ್ತಿದೆ. ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಸೇರಿದಂತೆ ಬಹುತೇಕ ಎಲ್ಲಾ ತಂಡಗಳೂ ಗಾಯಾಳುಗಳ ಸಮಸ್ಯೆಯಿಂದ ನರಳುತ್ತಿವೆ. ವಿಚಿತ್ರವೆಂದರೆ, ಪ್ರಮುಖ ಆಟಗಾರರೇ ಹೊರಗುಳಿಯುತ್ತಿರುವುದು ಆಘಾತ ತರಿಸಿದೆ.

ಶಿಖರ್‌ ಧವನ್‌
ಫಾರ್ಮ್ನಲ್ಲಿರುವ ಭಾರತದ ಆರಂಭಿಕ ಆಟಗಾರನಾಗಿರುವ ಶಿಖರ್‌ ಧವನ್‌ ಕೈಗಾಯಕ್ಕೆ ತುತ್ತಾಗಿ ಮೂರ್ನಾಲ್ಕು ಪಂದ್ಯಗಳಿಂದ ಹೊರಗಿದ್ದಾರೆ. ಇವರು ಇಡೀ ವಿಶ್ವಕಪ್‌ನಿಂದಲೇ ಹೊರಗುಳಿಯಬಹುದು ಎಂಬ ಆತಂಕಗಳಿವೆ. ಇವರ ಬದಲು ರಿಷಬ್‌ ಪಂತ್‌ ಇಂಗ್ಲೆಂಡ್‌ಗೆ ಬಂದಿಳಿದಿದ್ದಾರೆ.

ಭುವನೇಶ್ವರ್‌ ಕುಮಾರ್‌
ಭಾನುವಾರ ನಡೆದ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತದ ತಾರಾ ಬೌಲರ್‌ ಭುವನೇಶ್ವರ ಕುಮಾರ್‌ ಗಾಯಗೊಂಡಿದ್ದಾರೆ. ಹೀಗಾಗಿಯೇ ಇವರು 2.4 ಓವರ್‌ ಮಾತ್ರ ಬೌಲಿಂಗ್‌ ಮಾಡಿ ಪಂದ್ಯದಿಂದ ಹೊರಗುಳಿದಿದ್ದರು. ಇನ್ನೂ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ತಂಡ ಹೇಳಿದೆ. ಇವರ ಬದಲಿಗೆ ಶಮಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಕೇದಾರ್‌ ಜಾಧವ್‌
ಕೇದಾರ್‌ ಜಾಧವ್‌ ಅವರಂತೂ ಕೂಟ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದರು. ಅದೃಷ್ಟವಶಾತ್‌ ಪಂದ್ಯ ಆರಂಭವಾಗುವ ಹೊತ್ತಿಗೆ ಚೇತರಿಸಿಕೊಂಡು ತಂಡದಲ್ಲಿ ಆಡುತ್ತಿದ್ದಾರೆ.

ಜಾಸನ್‌ ರಾಯ್‌
ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಜಾಸನ್‌ ರಾಯ್‌ ಕೂಡ ಗಾಯಾಳುಗಳ ಪಟ್ಟಿಗೆ ಸೇರಿದ್ದಾರೆ. ಇವರು ಮಂಡಿರಜ್ಜು ಸಮಸ್ಯೆಗೆ ತುತ್ತಾಗಿದ್ದಾರೆ. ಮುಂದಿನ ಎರಡು ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ.

ಇಯಾನ್‌ ಮಾರ್ಗನ್‌
ಇಂಗ್ಲೆಂಡ್‌ ತಂಡದ ನಾಯಕ ಮಾರ್ಗನ್‌ ಬೆನ್ನುನೋವಿನಿಂದ ನರಳುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಇವರು ಈ ಸಮಸ್ಯೆಗೆ ತುತ್ತಾಗಿದ್ದರು. ಸದ್ಯಕ್ಕೆ ಮುಂದಿನ ಪಂದ್ಯದಲ್ಲಿ ಇವರು ಆಡಲಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿರುವುದು ಇಂಗ್ಲೆಂಡ್‌ ಪಾಲಿಗೆ ಸಂತಸದ ವಿಚಾರ.

ಡೇಲ್ ಸ್ಟೇನ್‌
ದಕ್ಷಿಣ ಆಫ್ರಿಕಾ ಪಾಲಿನ ಪ್ರಮುಖ ಬೌಲರ್‌ ಆಗಿದ್ದ ಡೇಲ್ ಸ್ಟೇನ್‌ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನಾಡದೇ ವಾಪಸ್‌ ತೆರಳಿದ್ದಾರೆ. ಇವರು ಭುಜನೋವಿನ ಸಮಸ್ಯೆಯಿಂದಾಗಿ ಹೊರಗುಳಿಯುವಂತಾಯಿತು. ಜತೆಗೆ ಪ್ರಮುಖ ಬ್ಯಾಟ್ಸ್‌ಮನ್‌ ಆಮ್ಲ ಕೂಡ ಗಾಯಕ್ಕೀಡಾಗಿ ವಾಪಸ್‌ ಬಂದಿದ್ದಾರೆ.

ಲುಂಗಿ ಎನ್‌ಗಿಡಿ
ದಕ್ಷಿಣ ಆಫ್ರಿಕಾದ ಮತ್ತೂಬ್ಬ ಬೌಲರ್‌ ಲುಂಗಿ ಒಂದೆರಡು ಪಂದ್ಯಗಳಲ್ಲಿ ಆಡಿ, ಅನಂತರ ಹೊರಗುಳಿದಿದ್ದಾರೆ. ಅವರು ಮಂಡಿರಜ್ಜು ನೋವಿನ ಕಾರಣದಿಂದಾಗಿ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಇವರಷ್ಟೇ ಅಲ್ಲ, ತರಬೇತಿ ವೇಳೆ ಭಾರತದನಾಯಕ ಕೊಹ್ಲಿ, ಮುಷ್ಪಿಕರ್‌ ರಹೀಮ್‌, ನುವಾನ್‌ ಪ್ರದೀಪ್‌ ಗಾಯಗೊಂಡು ಆತಂಕ ಮೂಡಿಸಿದ್ದರು. ಆದರೆ ಬೇಗನೆ ಗುಣಮುಖರಾಗಿ ಆಡುತ್ತಿದ್ದಾರೆ. ಜತೆಗೆ ಬಾಂಗ್ಲಾದ ಶಕೀಬ್‌ ಅಲ್ ಹಸನ್‌, ತಮೀಮ್‌ ಇಕ್ಬಾಲ್ ಕೂಡ ಗಾಯಕ್ಕೆ ತುತ್ತಾಗಿದ್ದರೂ ಅನಿವಾರ್ಯವಾಗಿ ಆಡುತ್ತಿದ್ದಾರೆ.

ಪಟ್ಟಿ ದೊಡ್ಡದೇ ಇದೆ..

ಇವರಷ್ಟೇ ಅಲ್ಲ, ತರಬೇತಿ ವೇಳೆ ಭಾರತದ ನಾಯಕ ವಿರಾಟ್ ಕೊಹ್ಲಿ, ಮುಷ್ಪಿಕರ್‌ ರಹೀಮ್‌, ನುವಾನ್‌ ಪ್ರದೀಪ್‌ ಗಾಯಗೊಂಡು ಆತಂಕ ಮೂಡಿಸಿದ್ದರು. ಆದರೆ, ಬೇಗನೆ ಗುಣಮುಖರಾಗಿ ಆಡುತ್ತಿದ್ದಾರೆ. ಜತೆಗೆ ಬಾಂಗ್ಲಾದ ಶಕೀಬ್‌ ಅಲ್ ಹಸನ್‌, ತಮೀಮ್‌ ಇಕ್ಬಾಲ್ ಕೂಡ ಗಾಯಕ್ಕೆ ತುತ್ತಾಗಿದ್ದರೂ, ಅನಿವಾರ್ಯವಾಗಿ ಆಡುತ್ತಿದ್ದಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.