50 ದೇಶಗಳಲ್ಲಿ 40 ಭಾರತೀಯರು ಸಾವು
Team Udayavani, Apr 27, 2020, 10:50 AM IST
ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಮುಂದಾಗಿದೆ. ಅದೇ ಸಂದರ್ಭದಲ್ಲಿ ಹೊಸ ಸವಾಲೊಂದು ಎದುರಾಗಿದೆ. ಐವತ್ತು ದೇಶಗಳಲ್ಲಿರುವ ಸರಿ ಸುಮಾರು 6,300 ಭಾರತೀಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರನ್ನು ಕರೆತರುವುದು ಹೇಗೆ ಎಂಬ ಚಿಂತೆ ಕಾಡ ತೊಡಗಿದೆ. ಅಲ್ಲದೆ, ಕೇವಲ 10 ದಿನಗಳ ಅವಧಿಯಲ್ಲಿ ಸೋಂಕು ತಗುಲಿದ ಭಾರತೀಯರ ಸಂಖ್ಯೆ ದ್ವಿಗುಣವಾಗಿದೆ.
ವಸತಿ ನಿಲಯಗಳಲ್ಲಿ ವ್ಯಾಪಿಸಿದ ಸೋಂಕು
ಸಿಂಗಾಪುರದಲ್ಲಿ ಶೇ.90ರಷ್ಟು ಭಾರತೀಯರಿಗೆ ವಸತಿ ನಿಲಯದ ಮೂಲಕವೇ ಸೋಂಕು. ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ವಸತಿ ನಿಲಯಗಳು ಇರುವುದರಿಂದ ಸೋಂಕು ಬೇಗ ಹಬ್ಬುತ್ತದೆ. ಕುವೈಟ್, ಬಹರೈನ್, ಒಮಾನ್, ಕತಾರ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 2 ಸಾವಿರ ಭಾರತೀಯರಿಗೆ ಸೋಂಕು. ಇರಾನ್ನಲ್ಲಿರುವ 100ಕ್ಕೂ ಅಧಿಕ ಮಂದಿ ಭಾರತೀಯರಿಗೆ ಕೊರೊನಾ ದೃಢ.
10ದಿನದಲ್ಲಿ ದುಪ್ಪಟ್ಟು
6,300: ವಿದೇಶದಲ್ಲಿರುವ ಒಟ್ಟು ಭಾರತೀಯರಿಗೆ ಸೋಂಕು?
3,336 ; ಎ.16ರಂದು ಇದ್ದ ಪ್ರಕರಣ
40: ಸೋಂಕಿಗೆ ಎಷ್ಟು ಭಾರತೀಯರು ಬಲಿ
25 ; ಎ.16ರಂದು ಇದ್ದ ಮೃತರ ಸಂಖ್ಯೆ
50 ; ಕ್ಕೂ ಹೆಚ್ಚು ದೇಶಗಳಲ್ಲಿ ಸೋಂಕಿತ ಭಾರತೀಯರು
ಎಕ್ಸಿಟ್ ಪ್ಲಾನ್ ರೆಡಿ
ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ವಿಸ್ತೃತ ಯೋಜನೆಯನ್ನು ವಿದೇಶಾಂಗ ಸಚಿವಾಲಯ ಸಿದ್ಧಪಡಿಸಿದೆ. ಯಾವ ಯಾವ ದೇಶದಿಂದ, ಎಷ್ಟು ವಿಮಾನಗಳನ್ನು ಕಳಿಸಿ, ಭಾರತೀಯರನ್ನು ಹೇಗೆ ವಾಪಸ್ ಕರೆತರಬೇಕು ಎಂಬ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಯೋಜನೆ ರೂಪಿಸಿ¨ªಾರೆ. ಕೋವಿಡ್ ನೆಗೆಟಿವ್ ಎಂಬ ಪ್ರಮಾಣಪತ್ರ ಇದ್ದವರನ್ನಷ್ಟೇ ದೇಶಕ್ಕೆ ಕರೆಸಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಈ ಸಂಪೂರ್ಣ ಎಕ್ಸಿಟ್ ಪ್ಲಾನ್ ಗೆ ಸಂಬಂಧಿಸಿದ ಮಾಹಿತಿಯನ್ನು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
MUST WATCH
ಹೊಸ ಸೇರ್ಪಡೆ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ