ಅಲೆಗಳ ಹೊಡೆತಕ್ಕೆ ಟಗ್ ಸಮುದ್ರಪಾಲು : ಓರ್ವ ಸಾವು, ಇಬ್ಬರು ಪಾರು, 5 ಮಂದಿ ನಾಪತ್ತೆ
Team Udayavani, May 15, 2021, 10:00 PM IST
ಪಡುಬಿದ್ರಿ : ಎನ್ಎಂಪಿಟಿಯಿಂದ 16 ನಾಟಿಕಲ್ ಮೈಲ್ ದೂರದಲ್ಲಿನ ಕರ್ತವ್ಯಕ್ಕಾಗಿ ತೆರಳಿದ್ದ 8 ಮಂದಿ ಗುತ್ತಿಗೆ ಕಾರ್ಮಿಕರಿದ್ದ ಹ್ಯಾಟ್ ಎಲ್ಐ ಎಂಬ ಹೆಸರಿನ ಟಗ್ ಬಿರುಸಾಗಿದ್ದ ಸಮುದ್ರದಲೆಗಳ ನಡುವೆ ಬುಡಮೇಲಾಗಿ ಬಿದ್ದಿದ್ದು ಪಡುಬಿದ್ರಿಯಲ್ಲಿ ದಡ ಸೇರಿದೆ.
ಇಬ್ಬರು ಕಾರ್ಮಿಕರು ಕಟಪಾಡಿ ಮಟ್ಟುಕೊಪ್ಲ ಬಳಿ ದಡ ಸೇರಿದ್ದಾರೆ. ಓರ್ವನ ಮೃತದೇಹ ತೆಂಕ ಎರ್ಮಾಳು ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು ಮೂಲ್ಕಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಐವರು ನಾಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಚೀಫ್ ಆಫೀಸರ್ ಅಷ್ಪಕ್ ಅಲಿ ಖಲ್ಪೆ ಮತ್ತವರ ಅಲಯನ್ಸ್ ತಂಡದಲ್ಲಿದ್ದ ಉತ್ತರ ಭಾರತ ಮೂಲದ ಕಾರ್ಮಿಕರಾದ ಝಿಬಾನುಲ್, ಮೊನಿರುಲ್ ಮೊಲ್ಲ, ಕರೀಬುಲ್ ಸಿಯಾಜುಲ್ ಶೇಖ್, ಮೈನುದ್ದೀನ್ ಹೇಕ್ ಶೇಖ್, ಪವನ್ ಚಂದ್ ಕಟೋಚ್, ನಾಜಿಮ್ ಅಹ್ಮದ್, ಹೇಮನಾಥ ಝಾ ಟಗ್ನಲ್ಲಿದ್ದರು. ಅವರು ಸೂಪರ್ ಶಿಪ್ಗಳ ಮೂಲಕ ಬಂದರಿಗೆ ಬರುತ್ತಿರುವ ಎಂಆರ್ಪಿಎಲ್ಗೆ ಸಂಬಂಧಿಸಿದ ಆಯಿಲ್ನ ಪಂಪಿಂಗ್ ಕಾರ್ಯಕ್ಕೆ ಪ್ರತಿನಿತ್ಯ ತೆರಳುತ್ತಿದ್ದು ವಾಪಸಾಗುವಾಗ ಅವಘಡವು ಸಂಭವಿಸಿದೆ.
ಹೇಮನಾಥ ಅವರ ಶವ ಪತ್ತೆಯಾಗಿದೆ. ಕಟಪಾಡಿ ಮಟ್ಟು ಬಳಿ ಜೀವಂತವಾಗಿ ದಡ ಸೇರಿರುವ ಮೊನಿರುಲ್ ಮೊಲ್ಲ (34) ಹಾಗೂ ಕರೀಬುಲ್ ಸಿಯಾಜುಲ್ ಶೇಖ್(24) ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು