11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ
Team Udayavani, Jan 16, 2022, 8:25 PM IST
ಕುಷ್ಟಗಿ: ಕುಷ್ಟಗಿಯ ಹನ್ನೊಂದು ವರ್ಷದ ಅವಳಿ ಸಹೋದರರು ಭಾರ ಎತ್ತುವ ಸಾಹಸ ಪ್ರದರ್ಶನದಲ್ಲಿ 50 ಕೆ.ಜಿ. ಚೀಲ ಎತ್ತುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ.
ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದ ನಿವಾಸಿ ಮರಸಣ್ಣಭೀ. ತಾಳದ ಅವರ ಅವಳಿ ಮಕ್ಕಳಾದ ಅಜಯ್- ವಿಜಯ್ ಇಲ್ಲಿನ ಅಜಯ್ ಅಕ್ಷರ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾರೆ.
ಭಾನುವಾರ ನಡೆದ ರಾಯಚೂರ ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ 50 ಕೆ.ಜಿ. ಧಾನ್ಯ ದ ಚೀಲ ಎತ್ತುವ ಮೂಲಕ ಅಲ್ಲಿದ್ದವರನ್ನು ನಿಬ್ಬೇರಗಾಗಿಸಿದ್ದಾರೆ.
ಹನ್ನೊಂದು ವರ್ಷದ ಅವಳಿ ಸಹೋದರರು ತಮ್ಮ ಸಾಮಾರ್ಥ್ಯ ಮೀರಿ 50 ಕೆಜಿ ಭಾರ ಎತ್ತಿದ್ದಾರೆ. ಯುವಕರನ್ನು ನಾಚಿಸುವಂತೆ 50 ಕೆ.ಜಿ. ಭಾರವನ್ನು ಎತ್ತುವಾಗ ತಿಣಕಾಡುವ ಇಂದಿನ ದಿನಮಾನಗಳಲ್ಲಿ 50 ಕೆ.ಜಿ. ಭಾರವನ್ನು ಈ ಅವಳಿ ಸಹೋದರರು, ಸಲೀಸಾಗಿ ಎತ್ತಿ ಭಾರ ಎತ್ತುವ ಕ್ರೀಡೆಯಲ್ಲಿ ಭವಿಷ್ಯದ ಕ್ರೀಡಾಪಟುಗಳ ಭರವಸೆ ಮೂಡಿಸಿದ್ದಾರೆ.
ಅಜಯ್- ವಿಜಯ್ ಅವಳಿ ಸಹೋದರರು, ಫಿಟ್ನೆಸ್ ಗೆ ಆದ್ಯತೆ ನೀಡಿದ್ದು, ದಿನವೂ ಕಸರತ್ತಿನ ವ್ಯಾಯಾಮದಲ್ಲಿನಿರತರಾಗಿದ್ದು ಸದಾ ಲವಲವಿಕೆಯಂದಿದ್ದಾರೆ. ಈ ಅವಳಿ ಸಹೋದರರ ಭಾರ ಎತ್ತಿದ ಭೀಮಣ್ಣನ ಮೊಮ್ಮಕ್ಕಳ ಸಹಾಸ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 20% ಸಮೀಪಕ್ಕೆ : ಇಂದು 13 ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ