ಪ್ರತಿವರ್ಷ ಕೇರಳದಲ್ಲಿ 600 ಆನೆಗಳ ಕಗ್ಗೊಲೆ: ಮನೇಕಾ
Team Udayavani, Jun 7, 2020, 5:50 AM IST
ಆಗ್ರಾ/ ಪಾಲಕ್ಕಾಡ್: “ಕೇರಳದಲ್ಲಿ ಪ್ರತಿವರ್ಷ ದಂತಕ್ಕಾಗಿ 600 ಆನೆ ಗಳನ್ನು ಕೊಲ್ಲಲಾಗು ತ್ತಿದೆ. ಆದರೂ ಅಲ್ಲಿನ ಸರಕಾರ ದುಷ್ಕರ್ಮಿ ಗಳ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಬಿಜೆಪಿ ನಾಯಕಿ ಮನೇಕಾ ಗಾಂಧಿ ಆರೋಪಿಸಿದ್ದಾರೆ.
ಆನೆಗಳ ಹತ್ಯೆ ಬಗ್ಗೆ ಪ್ರತಿ ವಾರ ಕೇರಳ ಅರಣ್ಯ ಇಲಾಖೆ ಜತೆಗೆ ಚರ್ಚಿ ಸುತ್ತೇನೆ. ಪ್ರಸ್ತುತ ಕೇರಳದ ದೇವಾಲಯವೊಂದರಲ್ಲಿ ಆನೆಯ ಕಾಲುಗಳನ್ನು 4 ದಿಕ್ಕಿನಿಂದಲೂ ಎಳೆದು ಕಟ್ಟಿ ಹಿಂಸಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿ ತಿಂಗಳಾಗಿದೆ. ಆದರೂ ಕ್ರಮ ಜರುಗಿಸಿಲ್ಲ ಎಂದು ಮನೇಕಾ, ಆಗ್ರಾದ ಕಾರ್ಯಕರ್ತ ನರೇಶ್ ಪಾರ ಸ್ಗೆ ಬರೆದ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ತೆಂಗಿನಕಾಯಿ ಪಟಾಕಿ?
ಪಾಲಕ್ಕಾಡ್ನಲ್ಲಿ ಪಟಾಕಿ ಸೇವಿಸಿ, ಮೃತಪಟ್ಟ ಆನೆಯ ಪ್ರಕರಣ ಹೊಸ ತಿರುವು ಪಡೆದಿದೆ. ದುಷ್ಕರ್ಮಿಗಳು ಆನೆಗೆ ತಿನ್ನಲು ನೀಡಿದ್ದು ಅನಾನಸ್ ಅಲ್ಲ, ತೆಂಗಿನ ಕಾಯಿ ಪಟಾಕಿ ಎನ್ನಲಾಗುತ್ತಿದೆ. “ಹೆಚ್ಚಿನ ತನಿಖೆಗಾಗಿ ಬಂಧಿತ ವಿಲ್ಸನ್ ನನ್ನು ಪ್ಲಾಂಟೇಶನ್ ಶೆಡ್ಗೆ ಕರೆದೊ ಯ್ಯಲಾಗಿತ್ತು. ಅಲ್ಲಿ ಆತ ಇಬ್ಬರು ಪಟಾಕಿ ತಯಾರಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ತೆಂಗಿನಕಾಯಿ ಒಡೆದು ಅದರೊಳಗೆ ಸ್ಫೋಟಕವನ್ನಿಟ್ಟು ಆನೆಗೆ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ’ ಎಂದು ಮನ್ನಾರ್ಕ್ಕಾಡ್ ವಿಭಾಗದ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಎನ್ಡಿಟಿವಿಗೆ ಹೇಳಿದ್ದಾರೆ. ಆನೆ 20 ದಿನಗಳಿಂದ ಉಪವಾಸವಿತ್ತು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
MUST WATCH
ಹೊಸ ಸೇರ್ಪಡೆ
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್