ಸಿನಿಮಾದಲ್ಲಿ ನಿರತವಾದ ಹಿನ್ನೆಲೆ ಚುನಾವಣೆಯಲ್ಲಿ ಸ್ಪರ್ಧೆಸಲು ಆಗುತ್ತಿಲ್ಲ: ನಟ ಉಪೇಂದ್ರ
Team Udayavani, Nov 24, 2019, 8:01 PM IST
ಬೆಂಗಳೂರು: ಸಿನಿಮಾದಲ್ಲಿ ತೊಡಗಿ ಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುತ್ತಿಲ್ಲ ಎಂದು ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ರಾಜ್ಯಾಧ್ಯಕ್ಷ ಉಪೇಂದ್ರ ಅವರು ಹೇಳಿದ್ದಾರೆ.
ಭಾನುವಾರ ಪ್ರಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ)ದ 15 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪರಿಚಯಿಸಿ ಅವರು, ಮಾತನಾಡಿದರು.
ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿಯೇ ಚುನಾವಣಾ ಅಖಾಡಕ್ಕೆ ಇಳಿಯಬೇಕು ಎಂದು ಅಂದು ಕೊಂಡಿದ್ದೆ. ಆದರೆ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ಹಿನ್ನೆಲೆಯಲ್ಲಿ ಆಗಲಿಲ್ಲ. ದಿಢೀರ್ ಎಂದು ಈಗ ಉಪಚುನಾವಣೆ ಬಂದಿದೆ. ಈಗಲೂ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಆ ಹಿನ್ನೆಲೆಯಲ್ಲಿಯೇ ಕಣಕ್ಕಿಳಿಯಲು ಆಗುತ್ತಿಲ್ಲ ಎಂದರು.
ಚಿತ್ರ ನಿರ್ಮಾಪಕರಿಗೆ ತೊಂದರೆ ಆಗದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಸಿನಿಮಾದಲ್ಲಿ ಬಿಡುವು ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯಬೇಕು ಎಂದು ಅಂದು ಕೊಂಡಿದ್ದೇನೆ. ಮುಂಬರುವ ಚುನಾವಣೆಗಳಲ್ಲಿ ಈ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದು ಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಹದಿನೈದು ಕ್ಷೇತ್ರಗಳಲ್ಲಿ ಕಣಕ್ಕೆ:
ಕಳೆದ ಮೂರು ವರ್ಷಗಳಿಂದ ಉತ್ತಮ ಪ್ರಜಾಕೀಯ ಪಕ್ಷ ಕಾರ್ಯ ನಿರ್ವಹಿಸುತ್ತಿದೆ. ದಿಢೀರ್ ಎಂದು ಬಂದಿರುವ ಉಪ ಚುನಾವಣೆಯಲ್ಲೂ ಸ್ಪರ್ಧಿಸಲಿದೆ. ಈಗ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಉಪೇಂದ್ರ ಹೇಳಿದರು.
ಈಗಿನ ರಾಜಕೀಯ ವ್ಯವಸ್ಥೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಚುನಾವಣೆಯಲ್ಲಿ ಮತದಾರರು ವ್ಯಕ್ತಿ, ಪಕ್ಷ ನೋಡಿ ಮತ ಹಾಕಬಾರದು.
ವಿಚಾರವಂತಿಕೆಗೆ ಮಾತ್ರ ಮತ ಹಾಕಬೇಕು. ಸುಳ್ಳಿನ ಲೋಕದಿಂದ ಮತದಾತರು ಹೊರಬರಬೇಕಾಗಿದು,ª ಹೊಸ ಕಾರ್ಯ ವಿಧಾನಗಳ ಮೂಲಕ ಉತ್ತಮ ರಾಜಕೀಯ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ ಎಂದರು.
ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ ಸೇರಿದಂತೆ ಹಲವರು ಪಕ್ಷದ ಕಾರ್ಯ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷಕ್ಕೆ ಜನರೇ ಹೈಕಮಾಂಡ್ ಆಗಿರುವ ಹಿನ್ನೆಲೆಯಲ್ಲಿ ಬೇಡವಾದ ವ್ಯಕ್ತಿಗಳನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದರು.
ಅಥಣಿ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಡಾ. ನಾಗಾಥ ವಿ ಯಾದ್ಗೀರ್ ಮಾತನಾಡಿ, ಭಿನ್ನ ದೃಷ್ಟಿಕೋನದ ರಾಜಕೀಯ ಚಿಂತನೆ ಉಪೇಂದ್ರ ಅವರಲ್ಲಿರುವ ಹಿನ್ನೆಲೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದರು.
ಕೊಳಗೇರಿ ಪ್ರದೇಶದಲ್ಲಿ ಬೆಳೆದು ಬಂದಿದ್ದೇನೆ
ಸಾಮಾನ್ಯ ಜನರಿಗೆ ನಿಮ್ಮ ಪಕ್ಷದ ಕಾರ್ಯಸೂಚಿ ಅರ್ಥವಾಗುತ್ತಿಲ್ಲ. ಇನ್ನೂ ಕೊಳಗೇರಿ ನಿವಾಸಿಗಳು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಟ ಉಪೇಂದ್ರ, ನಾನೂ ಕೂಡ ಕೊಳಗೇರಿ ಪ್ರದೇಶದಲ್ಲೆ ಬೆಳೆದು ಬಂದಿದ್ದೇನೆ. ಆ ಪ್ರದೇಶದ ನಿವಾಸಿಗಳಿಗೆ ನನ್ನ ಆಲೋಚನೆಗಳು ಬಹಳ ಬೇಗ ಅರ್ಥವಾಗುತ್ತವೆ.ಆದರೆ ಕೆಲ ಪ್ರಜ್ಞಾವಂತರಿಗೆ ಅರ್ಥವಾಗುವುದಿಲ್ಲ ಎಂದರು.
15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ:
ಡಾ.ನಾಗನಾಥ ವಿ ಯಾದ್ಗೀರ್ (ಅಥಣಿ ), ಎ.ಸಚಿನ್ಕುಮಾರ್ ( ಕಾಗವಾಡ), ಸಂತೋಷ ನಂದೂರ್ (ಗೋಕಾಕ), ಸುನೀಲ್ ಪವಾರ (ಯಲ್ಲಾಪುರ), ದೇವೇಂದ್ರಪ್ಪ (ಹಿರೇಕೆರೂರು ), ಐ.ಎಚ್.ಪಾಟೀಲ (ರಾಣೆ ಬೆನ್ನೂರು), ಮಹೇಶ ಲಂಬಾಣಿ (ವಿಜಯನಗರ ), ಫಣಿರಾಜ್ (ಚಿಕ್ಕಬಳ್ಳಾಪುರ ), ಎಂ.ಸಂತೋಷ ( ಕೆ.ಆರ್.ಪುರ), ಎಂ.ಮಂಜುನಾಥ್ (ಯಶವಂತಪುರ ), ವಿ.ಆಶಾರಾಣಿ ( ಮಹಾಲಕ್ಷಿ$¾ ಲೇ ಔಟ್), ವಿ.ಕೌಶಿಕ್ ರೆಡ್ಡಿ (ಶಿವಾಜಿ ನಗರ), ಆರ್.ಸುರೇಶ್ ರಾವ್ (ಹೊಸಕೋಟೆ), ಎಚ್.ಎಂ.ಚಂದ್ರೇಗೌಡ (ಕೃಷ್ಣರಾಜಪೇಟೆ ) ಮತ್ತು ದಿವಾಕರ್ ಗೌಡ ( ಹುಣಸೂರು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ