ಕೋವಿಡ್ ಗೆದ್ದ ಯಡಮೊಗೆಯ ಕುಟುಂಬ! ಎಲ್ಲ 9 ಮಂದಿಯೂ ಸೋಂಕು ಎದುರಿಸಿ ಜಯಿಸಿದರು
Team Udayavani, May 12, 2021, 7:10 AM IST
ಕುಂದಾಪುರ: ಆತ್ಮಸ್ಥೈರ್ಯ, ಸೂಕ್ತ ಉಪಚಾರ, ವೈದ್ಯರ ಸಲಹೆಯೊಂದಿಗೆ ಮನೆ ಯಲ್ಲಿ ಇದ್ದೇ ಕೊರೊನಾವನ್ನು ಗೆಲ್ಲಬಹುದು ಎನ್ನುವು ದನ್ನು ಕುಂದಾಪುರದ ತೀರಾ ಗ್ರಾಮೀಣ ಪ್ರದೇಶ ವಾದ ಯಡಮೊಗೆ ಗ್ರಾಮದ 9 ಮಂದಿಯ ಕುಟುಂಬವೊಂದು ನಿರೂಪಿಸಿದೆ.
ಕೊರೊನಾಕ್ಕೆ ತುತ್ತಾಗು ತ್ತಿರುವವರ ಸಂಖ್ಯೆ ಹೆಚ್ಚು ತ್ತಿರುವ ನಡುವೆ ಸೋಂಕನ್ನು ದಿಟ್ಟತನದಿಂದ ಜಯಿಸಿ ಬಂದವರ ಸಂಖ್ಯೆಯೂ ಅಷ್ಟೇ ದೊಡ್ಡದಾಗಿ ಬೆಳೆಯು ತ್ತಿರುವುದು ಆಶಾ ದಾಯಕ. ಇದಕ್ಕೆ ಯಡಮೊಗೆ ಗ್ರಾಮದ ಕಲ್ಕುರಡಿಯ 67 ವರ್ಷದ ಶ್ರೀಧರ ಯಡಿಯಾಳ ಮತ್ತು 62 ವರ್ಷದ ಇಂದುಮತಿ ದಂಪತಿ ಮತ್ತವರ ಕುಟುಂಬ ಸಾಕ್ಷಿ.
ಈ ಮನೆಯ 9 ಮಂದಿಯೂ ಕೊರೊನಾದಿಂದ ಸಂಪೂರ್ಣ ಮುಕ್ತರಾಗಿದ್ದಾರೆ. 10 ವರ್ಷದೊಳಗಿನ ಇಬ್ಬರು ಪುಟಾಣಿಗಳೂ ಸೋಂಕಿಗೆ ಈಡಾಗಿದ್ದರು.
ಮನೆಯಲ್ಲೇ ಚಿಕಿತ್ಸೆ
ಒಬ್ಬರಿಗೆ ಎ. 29ರಂದು ಪಾಸಿಟಿವ್ ಬಂದಿತ್ತು. ಬಳಿಕ ಎಲ್ಲರಿಗೂ ಪಾಸಿಟಿವ್ ದೃಢಪಟ್ಟಿತು. ಇದನ್ನು ಸವಾಲಾಗಿ ತೆಗೆದುಕೊಂಡ ಕುಟುಂಬ, ವೈದ್ಯರ ಸಲಹೆಯಂತೆ ಔಷಧ ತೆಗೆದು ಕೊಂಡರು. ಪಲ್ಸ್ ಆಕ್ಸಿಮೀಟರ್ ತರಿಸಿ ತಪಾಸಣೆ ನಡೆಸುತ್ತಿದ್ದರು. ಇಂದುಮತಿಯವರೇ ಎಲ್ಲರಿಗೂ ಪೌಷ್ಠಿಕವಾದ ಬಿಸಿಬಿಸಿ ಆಹಾರ, ಕಷಾಯ ಮತ್ತಿತರ ಮನೆ ಮದ್ದು, ತಯಾರಿಸಿ ಕೊಡುತ್ತಿದ್ದರು.
ಯಾವುದೇ ಕಾಯಲೆ ಬಂದರೂ ಧೈರ್ಯದಿಂದ ಎದು ರಿಸಬೇಕು. ನಾವು ಎಲ್ಲರೂ ಒಗ್ಗಟ್ಟಿನಿಂದ ಎದುರಿ ಸುವ ಪಣ ತೊಟ್ಟೆವು. ಈಗ ಗೆದ್ದಿದ್ದೇವೆ. ಸೋಂಕು ಗೊತ್ತಾದಾಗ ಆತಂಕ ಪಡುವುದ ಕ್ಕಿಂತ ಏನು ಮಾಡಬೇಕು ಎಂದು ಯೋಚಿ ಸುವುದು ಉತ್ತಮ. ಮನೆಯಲ್ಲೇ ಇದ್ದು ಚಿಕಿತ್ಸೆ, ಆಹಾರ ಅನುಸರಿಸಿದೆವು. ಖುಷಿಯಾಗಿ ಇರುತ್ತಿದ್ದೆವು. – ಶ್ರೀಧರ ಯಡಿಯಾಳ ಯಡಮೊಗೆ, ಕುಟುಂಬದ ಯಜಮಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್