ವಿಶ್ವಾಸಮತ ಮರೀಚಿಕೆ, ರಾತ್ರಿಯವರೆಗೂ ಕಲಾಪ ನಡೆದರೂ ಪೂರ್ಣಗೊಳ್ಳದ ಚರ್ಚೆ
ಇಂದು 6 ಗಂಟೆಯೊಳಗೆ ಪ್ರಕ್ರಿಯೆ ಮುಗಿಸಲು ಸ್ಪೀಕರ್ ಸೂಚನೆ
Team Udayavani, Jul 23, 2019, 6:22 AM IST
ಬೆಂಗಳೂರು: ಸೋಮವಾರವೂ ವಿಶ್ವಾಸಮತ ಮಂಡನೆಯಾಗಲಿಲ್ಲ. ರಾಜ್ಯ ಸರಕಾರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ನೀಡಿದ್ದ ಭರವಸೆಯೂ ಸುಳ್ಳಾಗಿದ್ದು, ಮಧ್ಯರಾತ್ರಿ ವೇಳೆಗೆ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, 6 ಗಂಟೆ ವೇಳೆಗೆ ವಿಶ್ವಾಸ ಮತ ಪ್ರಕ್ರಿಯೆ ಮುಗಿಯಬೇಕಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಚಿವ ಆರ್.ವಿ.ದೇಶಪಾಂಡೆ ಅವರ ಸಲಹೆ ಮೇರೆಗೆ ಕಲಾಪವನ್ನು ಮುಂದೂಡಿದರು.
ಈ ಹಂತದಲ್ಲಿ ಸಿದ್ದರಾಮಯ್ಯ ಅವರು, ಮಂಗಳವಾರ ರಾತ್ರಿ 8ರ ವೇಳೆಗೆ ಎಲ್ಲ ಮುಗಿಸಿಕೊಡುತ್ತೇವೆ ಎಂದು ಹೇಳಿದರಾದರೂ ಇದಕ್ಕೆ ಸ್ಪೀಕರ್ ಒಪ್ಪಿಗೆ ನೀಡಲಿಲ್ಲ. ಸಂಜೆ 4 ಗಂಟೆ ವೇಳೆಗೆ ಮುಕ್ತಾಯ ಮಾಡಲೇಬೇಕು ಎಂದರು. ಕಡೆಗೆ ಸಿದ್ದರಾಮಯ್ಯ ಚರ್ಚೆ, ಸಿಎಂ ಉತ್ತರ, ಮತದಾನವನ್ನು 6 ಗಂಟೆಯೊಳಗೆ ಮುಗಿಸಿಕೊಡುತ್ತೇವೆ ಎಂದು ಹೇಳಿದ್ದರಿಂದ ಸ್ಪೀಕರ್ ಒಪ್ಪಿಗೆ ಸೂಚಿಸಿ ಕಲಾಪ ಮುಂದೂಡಿದರು.
ಸಿಎಂ-ಡಿಸಿಎಂ ಗೈರು
ಸೋಮವಾರ ರಾತ್ರಿಯೊಳಗೆ ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಶುಕ್ರವಾರ ರಾತ್ರಿ ಹೇಳಿದ್ದರಾದರೂ ಸೋಮವಾರ ಸದನದಲ್ಲಿ ಗದ್ದಲ ಮುಂದುವರಿದ ಕಾರಣ ರಾತ್ರಿ 10ರ ವೇಳೆಗೆ ಸದನದಿಂದ ನಿರ್ಗಮಿಸಿದರು. ತದನಂತರ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಸಹ ನಿರ್ಗಮಿಸಿದರು. ಇವರಿಬ್ಬರೂ ಮತ್ತೆ ವಾಪಸ್ ಬರಲೇ ಇಲ್ಲ. ಸ್ಪೀಕರ್ ಸಹ ಈ ಇಬ್ಬರು ನಾಯಕರು ಗೈರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ದೇಶಪಾಂಡೆ ಸಲಹೆ ಕೇಳಿದರು. ಸಿದ್ದರಾಮಯ್ಯ ಅವರು ಮಾತ್ರ ರಾತ್ರಿ 11.45ರ ವರೆಗೆ ಸದನದಲ್ಲಿ ಹಾಜರಿದ್ದು ಅಂತಿಮವಾಗಿ ಮಂಗಳವಾರ ಸಂಜೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದರು.
ಬಿಜೆಪಿ ಶಾಸಕರ ಬೇಸರ
ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವ ಸ್ಪೀಕರ್ ನಿರ್ಧಾರವನ್ನು ಬಿಜೆಪಿ ಸದಸ್ಯರು ವಿರೋಧಿಸಿದರು. ಶುಕ್ರವಾರವೂ ಕುಳಿತಿದ್ದೆವು, ಸೋಮವಾರವಿಡಿ ಕುಳಿತಿದ್ದೇವೆ. ಆದರೂ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ವಿಧಾನಸಭೆ ಸುಸೂತ್ರವಾಗಿ ನಡೆಯುತ್ತಿದೆಯೇ? ಶಾಸಕರ, ಅದರಲ್ಲೂ ಮೈತ್ರಿ ಪಕ್ಷಗಳ ಶಾಸಕರ ನಡವಳಿಕೆಗಳು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಘನತೆ ತರುತ್ತಿವೆಯೇ?
ಸದನವನ್ನು ಮತ್ತೆ ಮುಂದೂಡಬೇಕೆಂದು ಕಾಂಗ್ರೆಸ್- ಜೆಡಿಎಸ್ ಶಾಸಕರು ಒತ್ತಾಯಿಸಿದ ಸಂದರ್ಭದಲ್ಲಿ ಕಲಾಪವನ್ನು ಕೆಲವು ಕಾಲ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಎದ್ದು ನಿಂತು ತಮ್ಮ ಆಕ್ಷೇಪಣೆಯನ್ನು ವಿವರಿಸಿ ವಿಶ್ವಾಸಮತ ನಿರ್ಣಯ ಮಂಡಿಸಿ ಕಲಾಪ ಮುಂದುವರಿಸಲು ಒತ್ತಾಯಿಸಿದರು. ಆಗ ಜೆಡಿಎಸ್, ಕಾಂಗ್ರೆಸ್ ಶಾಸಕರು ಎದ್ದುನಿಂತು ಯಡಿಯೂರಪ್ಪ ಮಾತಿಗೆ ಅಡ್ಡಿಪಡಿಸಿ ಜೋರಾಗಿ “ಸಂವಿಧಾನ ಉಳಿಸಿ’, ನ್ಯಾಯ ಕೊಡಿ’, ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…