ಕೋವಿಡ್ ಸಮಯದಲ್ಲಿ ಮನೆ ನಿರ್ವಹಣೆಗೆ ಸಾಲದ ಮೊರೆ ಹೋದ ಶೇ.50ರಷ್ಟು ಭಾರತೀಯರು
Team Udayavani, Nov 5, 2020, 4:57 PM IST
ಹೊಸದಿಲ್ಲಿ: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು ಅರ್ಧದಷ್ಟು ಭಾರತೀಯರು ತಮ್ಮ ಮನೆಗಳನ್ನು ನಡೆಸಲು ಸಾಲ ಪಡೆದ ಹಣದ ಮೇಲೆ ಅವಲಂಬಿತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ ಮತ್ತು ವೇತನ ಕಡಿತದಿಂದಾಗಿ ಕಡಿಮೆ-ಮಧ್ಯಮ-ಆದಾಯದವರ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಸಾಂಕ್ರಾಮಿಕವು ರೋಗವು ಸಾಲ ಮತ್ತು ಸಾಲ ಆಧಾರಿತ ಆದ್ಯತೆಗಳ ಕಡೆಗೆ ಬಲವಾಗಿ ತಳ್ಳುತ್ತಿದೆ ಎಂದು ಹೋಮ್ ಕ್ರೆಡಿಟ್ ಇಂಡಿಯಾದ ವರದಿ ತಿಳಿಸಿದೆ.
ಸಮೀಕ್ಷೆಯ ಆಧಾರದ ಮೇಲೆ ವರದಿಯಲ್ಲಿ, ಶೇ.46ರಷ್ಟು ಜನರು ತಮ್ಮ ಮನೆಗಳನ್ನು ನಡೆಸಲು ಮುಖ್ಯವಾಗಿ ಸಾಲ ಪಡೆದಿದ್ದಾರೆ ಎಂದು ವರದಿ ತೋರಿಸಿದ್ದು, ಕೋವಿಡ್ ವೈರಸ್ ಪ್ರೇರಿತ ಲಾಕ್ಡೌನ್ ಸಮಯದಲ್ಲಿ ಜನರ ಸಾಲ ಪಡೆಯುವ ವಿಧಾನಗಳನ್ನು ಅರ್ಥೈಸಿಕೊಳ್ಳಲು ಏಳು ನಗರಗಳಲ್ಲಿ ಸುಮಾರು ಸಾವಿರ ಮಂದಿಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ:ನನ್ನ ತಮ್ಮನ ಕೊಲೆಯಲ್ಲಿ ಇನ್ನೂ ಕೆಲ ಗಣ್ಯ ವ್ಯಕ್ತಿಗಳ ಕೈವಾಡ ಇದೆ: ಯೋಗೀಶ ಗೌಡ ಅಕ್ಕ ಸಹೋದರಿ
ವೇತನ ಕಡಿತ ಅಥವಾ ವಿಳಂಬ ಸಂಬಳ ಪರಿಣಾಮವಾಗಿ ಹೆಚ್ಚಿನ ಸಾಲಗಾರರು ಎರವಲನ್ನು ಆಶ್ರಯಿಸಿದ್ದು, ಶೇ.27ರಷ್ಟು ಜನರು ತಮ್ಮ ಮಾಸಿಕ ಕಂತುಗಳನ್ನು ಹಿಂದಿನ ಸಾಲದಿಂದ ಮರುಪಾವತಿಸುವುದು ಕ್ರೆಡಿಟ್ ಹಿಂದಿನ ಎರಡನೇ ಅತಿದೊಡ್ಡ ಕಾರಣವೆಂದು ಉಲ್ಲೇಖೀಸಿದ್ದಾರೆ.
ಇನ್ನು ಶೇ.14ರಷ್ಟು ಜನರು ಉದ್ಯೋಗ ನಷ್ಟ ಅನುಭವಿಸಿದ್ದರಿಂದ ಸಾಲ ಪಡೆದಿದ್ದು, ಸಾಮಾನ್ಯ ಸಮಯಕ್ಕಿಂತ ಭಿನ್ನವಾಗಿ ಕೋವಿಡ್ ಸಾಂಕ್ರಾಮಿಕ ವೇಳೆ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಹಣ ಎರವಲು ಪಡೆಯಲು ಆದ್ಯತೆ ನೀಡಿದ್ದಾರೆ. ಪರಿಸ್ಥಿತಿ ಸಾಮಾನ್ಯವಾದಾಗ ಮತ್ತು ಉದ್ಯೋಗಗಳು ಅಥವಾ ಸಂಬಳ ಪಡೆದಾಗ ಹಣವನ್ನು ಹಿಂದಿರುಗಿಸಲು ಸುಲಭವಾಗುತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು