ಖಾತೆಯಲ್ಲಿ ಹೆಸರು ಸೇರ್ಪಡೆಗೆ ಲಂಚ : ಎಸಿಬಿ ಬಲೆಗೆ ಬಿದ್ದ ಸಿಟಿ ಸರ್ವೇಯರ್
Team Udayavani, Mar 21, 2022, 8:56 PM IST
ವಿಜಯಪುರ : ನಗರದ ಅರ್ಜಿದಾರರೊಬ್ಬರಿಂದ ಖಾತೆಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂದಾಖಲೆಗಳ ಇಲಾಖೆಯ ನಗರ ಸರ್ವೇಯರ್ ರವಿ ರಾಮಸಿಂಗ್ ನಾಯ್ಕ ಲಂಚದ ಹಣದ ಸಮೇತ ಎಸಿಬಿ ಬಲೆಗೆ ಬಿದ್ದಾರೆ.
ಉಮರ ಫಾರೂಕ್ ಬಾಂಗಿ ಎಂಬವರು ತಮ್ಮ ತಂದೆ ಇಮಾಮ್ ಖಾಸಿಂ ಬಾಂಗಿ ಅವರು ಮೃತರದ ಕಾರಣ ತಂದೆಯ ಹೆಸರಿನಲ್ಲಿದ್ದ ಮನೆಯನ್ನು ತಮ್ಮ ಹೆರಿಗೆ ದಾಖಲಿಸಲು ನಗರ ಭೂದಾಖಲೆಗಳ ಕಛೇರಿಗೆ ಮಾ.14 ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಸದರಿ ಅರ್ಜಿಯಂತೆ ವಾರ್ಡ್ ನಂ.6 ರಲ್ಲಿರುವ ಮನೆಯನ್ನು ನಿಮ್ಮ ಹೆಸರಿಗೆ ಮಾಡಲು ಕಛೇರಿ ಖರ್ಚಿನ ವೆಚ್ಚವಾಗಿ 4 ಸಾವಿರ ರೂ, ನೀಡುವಂತೆ ರವಿ ನಾಯ್ಕ ಮಾ.21 ರಂದು ಉಮರ ಅವರಿಗೆ ಕರೆ ಮಾಡಿ ಲಂಚಕ್ಕೆ ಬೇಡಿಕೆ ಇರಿಸಿದ್ದರು.
ಲಂಚ ಕೊಡಲು ಒಪ್ಪದ ಉಮರ್ ಅವರು, ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸೋಮವಾರ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚದ ಹಣ ಸ್ವೀಕರಿಸುವಾಗಲೇ ಸಿಟಿ ಸರ್ವೇಯರ್ ರವಿ ನಾಯಕ ಎಂಬ ಆರೋಪಿಯನ್ನು ಲಂಚದ ಹಣದ ಸಮೇತ ಬಂಧಿಸಿದ್ದಾರೆ.
ಡಿಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಸಿಪಿಐಗಳಾದ ಚಂದ್ರಕಲಾ, ಪರಮೇಶ್ವರ ಕವಟಗಿ, ಸಿಬ್ಬಂದಿಗಳಾದ ಎ.ಐ.ಶೇಖ್, ಆಶೋಕ ಸಿಂಧೂರ, ಚನ್ನನಗೌಡ ಯಾಳವಾರ, ಸದಾಶಿವ ಕೋಟ್ಯಾಳ, ಮಾಳಪ್ಪ ಸಲಗೊಂಡ, ಮದಸನಿಂಗ್, ಎಸ್.ಎಸ್.ಮುಂಜೆ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ