ಸಂಘರ್ಷದ ಬದಲು ಸೌಹಾರ್ದ : ಆಫ್ಘನ್ ಸರಕಾರ ತೀರ್ಮಾನ
Team Udayavani, Jul 15, 2021, 7:40 AM IST
ಕಾಬೂಲ್/ದುಶಾಂಬೆ: ತಾಲಿಬಾನ್ ಉಗ್ರ ಸಂಘಟನೆಯ ಜತೆಗೆ ಸಂಘರ್ಷದ ಬದಲು ಸೌಹಾರ್ದಯುತ ಮಾತುಕತೆ ನಡೆಸಲು ಅಫ್ಘಾನಿಸ್ಥಾನ ಸರಕಾರ ತೀರ್ಮಾನಿಸಿದೆ. ಅದಕ್ಕೆ ಪೂರಕವಾಗಿ ಕತಾರ್ನ ದೋಹಾದಲ್ಲಿ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಉಗ್ರ ಸಂಘಟನೆಯ ಪ್ರತಿನಿಧಿಗಳ ಜತೆಗೆ ಶಾಂತಿ ಮಾತುಕತೆ ನಡೆಸಲು ತೀರ್ಮಾನಿಸಿದೆ. ಶುಕ್ರವಾರ (ಜು.16) ಎರಡೂ ತಂಡಗಳು ಪರಸ್ಪರ ಕುಳಿತು, ದೀರ್ಘಕಾಲದಿಂದ ಕಗ್ಗಂಟಾಗಿ ಉಳಿದಿರುವ ಶಾಂತಿ ಸ್ಥಾಪನೆಯ ಬಗ್ಗೆ ಸಮಾಲೋಚನೆ ಮುಂದುವರಿಸಲು ಮುಂದಡಿ ಇಡುವ ಸಾಧ್ಯತೆಗಳಿವೆ.
ಉಗ್ರ ಸಂಘಟನೆ ತಾಲಿಬಾನ್ ದೋಹಾದಲ್ಲಿ ಅಧಿಕೃತ ಕಚೇರಿಯನ್ನೇ ಹೊಂದಿದೆ. ಅಮೆರಿಕ ಮತ್ತು ನ್ಯಾಟೋ ಪಡೆಗಳು ತಮ್ಮ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಮಾತುಕತೆಗೆ ವೇಗ ಸಿಕ್ಕಿದೆ. ಅಫ್ಘಾನಿಸ್ಥಾನದ ಮಾಜಿ ಸಚಿವ ಡಾ.ಅಬ್ದುಲ್ಲಾ ಅಬ್ದುಲ್ಲಾ ಸರ್ಕಾರದ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಜತೆಗೆ ಮಾಜಿ ಅಧ್ಯಕ್ಷ ಹಮೀದ್ ಕಜೈì ಕೂಡ ನಿಯೋಗದಲ್ಲಿ ಇರಲಿದಾರು ಕಳೆದ ವರ್ಷ ಫೆಬ್ರವರಿಯಲ್ಲಿ ಉಗ್ರ ಸಂಘಟನೆ ಮತ್ತು ಅಮೆರಿಕ ಸರಕಾರದ ಒಪ್ಪಂದದ ಅನ್ವಯ ಶಾಂತಿ ಸ್ಥಾಪನೆಯೇ ಮಾತುಕತೆಯ ಅಜೆಂಡಾ ಆಗಿರಲಿದೆ. ಇದೇ ವೇಳೆ, ಫ್ರಾನ್ಸ್, ಆಸ್ಟ್ರೇಲಿಯ ಸರಕಾರಗಳು ಕೂಡ ಆಫ್ಘನ್ ನಲ್ಲಿರುವ ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ತೀರ್ಮಾನಿಸಿವೆ.
2,70,000 ಹೊಸ ನಿರಾಶ್ರಿತರು: ಜನವರಿಯಿಂದ ಈಚೆಗೆ ಅಫ್ಘಾನಿಸ್ಥಾನದಲ್ಲಿ ಹಿಂಸೆ, ಗಲಭೆಗಳಿಂದ ಹೊಸತಾಗಿ 2,70,000 ಮಂದಿ ನಿರ್ವಸಿತರಾಗಿದ್ದಾರೆ. ಹೀಗೆಂದು ವಿಶ್ವಸಂಸ್ಥೆಯೇ ಅಂದಾಜು ಮಾಡಿದೆ. ತಾಲಿಬಾನ್ ಹೆಚ್ಚಿನ ಪ್ರದೇಶಗಳ ನಿಯಂತ್ರಣ ಪಡೆಯುತ್ತಿರುವುದು ಕಳವಳಕಾರಿ ಎಂದೂ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಆಯೋಗ (ಯುಎನ್ಎಚ್ಸಿಆರ್) ಅಭಿಪ್ರಾಯ ಪಟ್ಟಿದೆ.
ಮಾತುಕತೆಯೇ ಮಾರ್ಗ
ಅಫ್ಘಾನಿಸ್ಥಾನದ ಭವಿಷ್ಯವು ಭೂತಕಾಲದ ಘಟನೆಗಳನ್ನು ಆಧರಿಸಿ ಇರಬಾರದು. ಶಾಂತಿ ಸ್ಥಾಪನೆಗಾಗಿ ಮಾತುಕತೆಯೊಂದೇ ಪರಿಹಾರ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ತಜಿಕಿಸ್ಥಾನ ರಾಜಧಾನಿ ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ, ಯುದ್ಧಗ್ರಸ್ಥ ರಾಷ್ಟ್ರದ ಬಗೆಗಿನ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ದೋಹಾದಲ್ಲಿ ಇಬ್ಬರಿಗೂ ಸಮ್ಮತವಾಗುವ ಪ್ರಸ್ತಾಪ ಅಂಗೀಕಾರಗೊಳ್ಳಬೇಕಿದೆ. ಅಫ್ಘಾನಿಸ್ಥಾನದ ನೆರೆಯ ರಾಷ್ಟ್ರಗಳು ಭಯೋತ್ಪಾದನೆ, ಪ್ರತ್ಯೇಕತಾವಾದ, ತೀವ್ರಗಾಮಿತ್ವದಿಂದ ಭೀತಿಯಲ್ಲಿ ಇರುವಂಥ ವಾತಾವರಣ ನಿರ್ಮಾಣವಾಗಬಾರದು ಎಂದರು. ಇದರ ಜತೆಗೆ ಸಹಕಾರ ಒಕ್ಕೂಟದ ರಾಷ್ಟ್ರಗಳು ಉಗ್ರವಾದಕ್ಕೆ ಬೆಂಬಲ ನೀಡಬಾರದು. ಉಗ್ರರಿಗೆ ಹಣಕಾಸು ನೆರವು ನೀಡುವುದಕ್ಕೆ ಕಡಿವಾಣ ಹಾಕಬೇಕು ಎಂದೂ ಪ್ರತಿಪಾದಿಸಿದ್ದಾರೆ ಜೈಶಂಕರ್.
ಪಡೆಗಳ ವಾಪಸ್ ತಪ್ಪು ನಿರ್ಧಾರ
ಯುದ್ಧಗ್ರಸ್ಥ ರಾಷ್ಟ್ರದಿಂದ ಸೇನಾಪಡೆಗಳನ್ನು ವಾಪಸ್ ಪಡೆಯುವ ಹಾಲಿ ಸರ್ಕಾರದ ನಿರ್ಧಾರ ತಪ್ಪು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲೂ.ಬುಷ್ ಅಭಿಪ್ರಾಯಪಟ್ಟಿದ್ದಾರೆ. ತಾಲಿಬಾನ್ ಉಗ್ರರು ಆ ದೇಶದ ಪ್ರಜೆಗಳನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾರೆ. ಸೆಪ್ಟೆಂಬರ್ ಒಳಗಾಗಿ ಸೇನಾ ಪಡೆಗಳನ್ನು ವಾಪಸ್ ಪಡೆಯುವ ಅಧ್ಯಕ್ಷ ಜೋ ಬೈಡೆನ್ ನಿರ್ಧಾರ ಸರಿಯಾದದ್ದಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್