ನಾಳೆ ಅಕ್ಷಯ ತೃತೀಯಾ ಸಂಭ್ರಮ : ಆನ್‌ ಲೈನ್‌ ನಲ್ಲೇ ಖರೀದಿಸಿ ಚಿನ್ನಾಭರಣ!


Team Udayavani, May 13, 2021, 8:30 AM IST

ನಾಳೆ ಅಕ್ಷಯ ತೃತೀಯಾ ಸಂಭ್ರಮ : ಆನ್‌ ಲೈನ್‌ ನಲ್ಲೇ ಖರೀದಿಸಿ ಚಿನ್ನಾಭರಣ!

ಬೆಂಗಳೂರು : ಒಂದೆಡೆ ಲಾಕ್‌ ಡೌನ್‌, ಮತ್ತೂಂದೆಡೆ ಅಕ್ಷಯ ತೃತೀಯಾ ಹಬ್ಬ. ಅದರಲ್ಲೂ ಚಿನ್ನ ಕೊಳ್ಳಲು ಅಕ್ಷಯ ತೃತೀಯಾಕ್ಕಿಂತ ಶ್ರೇಷ್ಠ ದಿನ ಮತ್ತೂಂದಿಲ್ಲ. ಆದರೆ ಲಾಕ್‌ ಡೌನ್‌ನಿಂದ ಅಂಗಡಿಗಳು ಮುಚ್ಚಿದ್ದು, ಏನು ಮಾಡುವುದು ಎಂಬ ಚಿಂತೆ ಬೇಡ. ಈಗ ಆನ್‌ ಲೈನ್‌ ನಲ್ಲೂ ಚಿನ್ನ ಖರೀದಿಸಬಹುದು!

ಬಂಗಾರದ ಬೆಲೆ ಇಳಿಕೆ
ಇದು ಬಂಗಾರ ಖರೀದಿಗೆ ಸುಸಮಯವೂ ಹೌದು. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಬುಧವಾರ 44,500 ರೂ. ಇತ್ತು. ಮಂಗಳವಾರಕ್ಕೆ ಹೋಲಿಸಿದರೆ 200 ರೂ. ಕಡಿಮೆ. 10 ಗ್ರಾಂ 24 ಕ್ಯಾರೆಟ್‌ಗೆ 48,560 ರೂ. ಗಳಾಗಿದ್ದು, 210 ರೂ. ಕಡಿಮೆ .

ಏನಿದು ಡಿಜಿಟಲ್‌ ಗೋಲ್ಡ್‌?
ಗೋಲ್ಡ್‌ ಕಾಯಿನ್‌, ಬುಲಿಯನ್‌, ಆಭರಣಗಳು, ಸವರಿನ್‌ ಗೋಲ್ಡ್‌ ಬಾಂಡ್‌, ಗೋಲ್ಡ್‌ ಮ್ಯೂಚುವಲ್‌ ಫ‌ಂಡ್‌ ಮತ್ತು ಗೋಲ್ಡ್‌ ಇಟಿಎಫ್ ಗಳನ್ನು ಭೌತಿಕ ರೂಪದ ಚಿನ್ನವೆಂದು ಕರೆಯಲಾಗುತ್ತದೆ. ಇವನ್ನು ಖರೀದಿಸಿ ಸುರಕ್ಷಿತವಾಗಿ ಇಡಬಹುದು. ಡಿಜಿಟಲ್‌ ಚಿನ್ನವನ್ನು ಆನ್‌ ಲೈನ್‌ನಲ್ಲೇ ಮಾರಾಟ ಮಾಡಲಾಗುತ್ತದೆ. ಇದು ಭೌತಿಕ ರೂಪದಲ್ಲಿ ಇರುವುದಿಲ್ಲ. ಮಾರಿದವರೇ ಗ್ರಾಹಕನ ಪರವಾಗಿ ಆತ ಖರೀದಿಸಿದ ಮೌಲ್ಯದಷ್ಟು ಬಂಗಾರವನ್ನು ವಾಲ್ಟ್ನಲ್ಲಿ ಇರಿಸುತ್ತಾರೆ.

ಮಳಿಗೆಗಳಲ್ಲೂ ಆನ್‌ಲೈನ್‌ ಖರೀದಿ
ಕರಾವಳಿ ಸಹಿತ ಪ್ರಮುಖ ಆಭರಣ ಅಂಗಡಿಗಳು ಆನ್‌ಲೈನ್‌ ನಲ್ಲಿ ಚಿನ್ನ ಖರೀದಿ ಅವಕಾಶ ಮಾಡಿಕೊಟ್ಟಿವೆ. ಚಿನ್ನದ ಕಾಯಿನ್‌ ನಿಂದ ಹಿಡಿದು ಚಿನ್ನದ ಬಾಂಡ್‌ ಗಳ ವರೆಗೆ ಇಲ್ಲಿ ಖರೀದಿಸಬಹುದಾಗಿದೆ. ಕೆಲವು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳೂ ಡಿಜಿಟಲ್‌ ಗೋಲ್ಡ್‌ ಮಾರಾಟ ಮಾಡುತ್ತಿವೆ.

 ಖರೀದಿ ಹೇಗೆ?
ಡಿಜಿಟಲ್‌ ಬಂಗಾರ ಮಾರುವ ಆ್ಯಪ್‌ ಅಥವಾ ವೆಬ್‌ಸೈಟ್‌ ಗೆ ಹೋಗಿ ಖರೀದಿಸಬೇಕು. ನಿಮಗೆಷ್ಟು ಬೇಕೋ ಅಷ್ಟು ಗ್ರಾಂ ಬಂಗಾರವನ್ನು ಆರಿಸಿಕೊಳ್ಳಬಹುದು. ಅಂದಿನ ಬಂಗಾರದ ದರ ಅನ್ವಯವಾಗುತ್ತದೆ. ಹಣ ಪಾವತಿಯಿಂದ, ಕೆವೈಸಿ ವರೆಗೆ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಸುರಕ್ಷಿತ ಲಾಕರ್‌ಗೆ ಡಿಜಿಟಲ್‌ ಬಂಗಾರ ಬರುತ್ತದೆ.

ಹಾಗೆಯೇ ಭೌತಿಕವಾಗಿ ಬಂಗಾರ ಬೇಕು ಎಂದಾದಲ್ಲಿ ನೀವು ಬೇಡಿಕೆ ಸಲ್ಲಿಸಬಹುದು, ಮನೆಬಾಗಿಲಿಗೇ ತಂದು ಕೊಡುತ್ತಾರೆ. ಆದರೆ ಡೆಲಿವರಿ ದರ ನೀಡಬೇಕಾಗುತ್ತದೆ.

ಉಪಯೋಗಗಳು
– ಮನೆ ಬಾಗಿಲಿಗೇ ಬಂಗಾರ ತರಿಸಬಹುದು.
– ಕೇವಲ ಒಂದು ರೂ. ಪಾವತಿಸಿ ಖರೀದಿಸಬಹುದು.
– ಸಾಲ ಪಡೆಯುವಾಗ ಅಡಮಾನವಾಗಿ ಇಡಬಹುದು.
– ಡಿಜಿಟಲ್‌ ಗೋಲ್ಡ್‌ 24 ಕ್ಯಾರೆಟ್‌ ಗೋಲ್ಡ್‌ ನಷ್ಟೇ ಉತ್ತಮ.
– ನೀವು ಖರೀದಿಸಿದ್ದು ಸಂಪೂರ್ಣ ಸುರಕ್ಷಿತ, ಇದರ ಮೇಲೆ ವಿಮೆ ಇರುತ್ತದೆ.
– ಡಿಜಿಟಲ್‌ ಗೋಲ್ಡನ್ನು ಭೌತಿಕ ಬಂಗಾರವಾಗಿ ಪರಿವರ್ತಿಸಿಕೊಳ್ಳಬಹುದು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.