
ಸ್ವಾತಂತ್ರ್ಯ ವೀರರು@75: ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ಹೋರಾಡಿದ್ದ ಧೀರ ಅಮಚಡಿ ತೇವನ್
ಅಸ್ಪೃಶ್ಯರಾದ ಈ ಸಮುದಾಯದ ಬದುಕು ಆ ದಿನಗಳಲ್ಲಿ ಅತ್ಯಂತ ಶೋಚನೀಯವಾಗಿತ್ತು.
ಕೀರ್ತನ್ ಶೆಟ್ಟಿ ಬೋಳ, Aug 9, 2022, 2:46 PM IST

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಂದಿ ಶ್ರಮವಿದೆ. ಸಾವಿರಾರು ಮಂದಿ ಹೋರಾಟಗಾರರು ಎಲೆಮರೆಯ ಕಾಯಿಯಂತೆ ಮಹಾನ್ ನಾಯಕರ ಮರೆಯಲ್ಲಿಯೇ ಹೋರಾಡಿದ್ದಾರೆ. ದೇಶಕ್ಕಾಗಿ, ಸಮಾಜದ ಒಳಿತಿಗಾಗಿ ಹೋರಾಡಿದವರಲ್ಲಿ ಕೇರಳ ಅಮಚಡಿ ತೇವನ್ ಕೂಡಾ ಒಬ್ಬರು. ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ನಿಂತು, ನಂತರ ಗಾಂಧೀಜಿ ಅನುಯಾಯಿಯಾಗಿ ಬೆಳೆದ ಅಮಚಡಿ ತೇವನ್ ಅವರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೆನೆಯಲೇ ಬೇಕು.
ಕೇರಳದ ಆಲಪ್ಪಿ ಜಿಲ್ಲೆಯ ಚೇರ್ತಲಾ ತಾಲೂಕಿನ ಪೆರುಂಬಲಂ ದ್ವೀಪದಲ್ಲಿ ಹುಟ್ಟಿದವರು ಈ ಅಮಚಡಿ ತೇವನ್. ಇವರು ಇಲ್ಲಿನ ಪುಲಯಾ ಸಮುದಾಯಕ್ಕೆ ಸೇರಿದವರು. ಅಸ್ಪೃಶ್ಯರಾದ ಈ ಸಮುದಾಯದ ಬದುಕು ಆ ದಿನಗಳಲ್ಲಿ ಅತ್ಯಂತ ಶೋಚನೀಯವಾಗಿತ್ತು. ಆದರೆ ಇತರ ಪುಲಯ ಮಕ್ಕಳಿಗಿಂತ ಭಿನ್ನವಾಗಿ, ಅವರು ಕ್ರಾಂತಿಕಾರಿ ಮಹಿಳೆ ಅಚ್ಚುಕುಟ್ಟಿ ಅಮ್ಮನ ಸಹಾಯದಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಭಾಗ್ಯ ಪಡೆದರು.
ಆದರೆ ಮೇಲ್ಜಾತಿಯ ಜನರ ಪ್ರತಿಭಟನೆಯಿಂದಾಗಿ ಸಾಕು ಮನೆಯಿಂದ ಹೊರಹಾಕಲ್ಪಟ್ಟ ಅಮಚಡಿ ತೇವನ್ ಇತರ ಪುಲಯ ಜನರಂತೆ ಗದ್ದೆಯಲ್ಲಿ ಜೀತದ ಕೆಲಸ ಮಾಡಬೇಕಾಯಿತು. ಆದರೆ ಅಕ್ಷರ ಜ್ಞಾನ ಹೊಂದಿದ್ದ ತೇವನ್, ಸಮಾಜ ಸುಧಾರಕರ ಕೃತಿಗಳನ್ನು ಓದುತ್ತಿದ್ದರು. ಈ ಸಮಯದಲ್ಲಿ ಅವರು ಗಾಂಧೀಜಿ ಮತ್ತು ನಾರಾಯಣ ಗುರುಗಳ ಬರಹಗಗಳಿಂದ ಆಕರ್ಷಿತರಾದರು.
ಈ ವೇಳೆ ಪ್ರಕರಣವೊಂದರಲ್ಲಿ ಮೇಲ್ಜಾತಿಯ ಗುಂಪೊಂದು ತೇವನ್ ರನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಿತ್ತು. ಪೊಲೀಸರು ಈತನನ್ನು ಬಂಧಿಸಿ ಕ್ರೂರವಾಗಿ ಹಿಂಸಿಸಿದ್ದರು. ಅಸ್ಪೃಶ್ಯತೆ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದ ಅಮಚಡಿ ತೇವನ್ ಈ ಕಾರಣದಿಂದಲೇ ಕಾಂಗ್ರೆಸ್ಸಿನ ಪ್ರಬಲ ಬೆಂಬಲಿಗರಾದರು. ತೇವನ್ ಎಷ್ಟು ರೆಬೆಲ್ ಆಗಿದ್ದರು ಎಂದರೆ ಆಗ ಕೆಳ ಜಾತಿಯವರು ಧರಿಸಲೇ ಬಾರದು ಎಂಬಂತಿದ್ದ ಬಿಳಿ ಬಟ್ಟೆಯನ್ನೇ ಅವರು ಧರಿಸುತ್ತಿದ್ದರು. ಇದರಿಂದ ಮೇಲ್ಜಾತಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಸ್ಪೃಶ್ಯತೆ ಮತ್ತು ಅನಾಚಾರದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಕಾಂಗ್ರೆಸ್ ಕರೆ ನೀಡಿದಾಗ ಟಿ.ಕೆ. ಮಾಧವನ್ ಅವರು ವೈಕ್ಕಂ ಸತ್ಯಾಗ್ರಹವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದರು. ಇದರ ಪ್ರಯತ್ನದ ಭಾಗವಾಗಿ ತೇವನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಟಿ.ಕೆ.ಮಾಧವನ್ ಪೂತೊಟ್ಟ ದೇವಸ್ಥಾನಕ್ಕೆ ಪ್ರವೇಶಿಸಿದಾಗ ಅಮಚಡಿ ತೇವನ್ ಮತ್ತು ಕೆಳವರ್ಗದ ಪುಲ್ಯರ ಗುಂಪು ಕೂಡ ದೇವಸ್ಥಾನವನ್ನು ಪ್ರವೇಶಿಸಿ ದೇವರ ಮುಂದೆ ಪ್ರಾರ್ಥಿಸಿದರು. ಇದು ಮೆಲ್ಜಾತಿಗೆ ಅರಗಿಸಲಾಗಲಿಲ್ಲ. ಪರಿಣಾಮ ತೇವನ್ ಮತ್ತು ಟಿ.ಕೆ.ಮಾಧವನ್ ಅವರನ್ನು ಬಂಧಿಸಿ ಎರಡು ವಾರಗಳ ಕಾಲ ಜೈಲಿನಲ್ಲಿರಿಸಲಾಯಿತು.
ಪ್ರಬಲ ಕಾಂಗ್ರೆಸ್ಸಿಗರಾಗಿ, ತೇವನ್ ಅವರು ವೈಕ್ಕಂ ಸತ್ಯಾಗ್ರಹವನ್ನು ಸೇರಿದರು. ಸತ್ಯಾಗ್ರಹದ ಸಮಯದಲ್ಲಿ ಕೆ.ಪಿ.ಕೇಶವ ಮೆನನ್ ಮತ್ತು ಟಿ.ಕೆ.ಮಾಧವನ್ ಅವರು ತೇವನ್ ಅವರನ್ನು ಬೆಂಬಲಿಸಿದರು. ಅಲ್ಲದೆ ಗಾಂಧೀಜಿಯನ್ನು ಭೇಟಿಯಾಗಲು ತೇವನ್ ಗೆ ಸಹಾಯ ಮಾಡಿದವರು ಕೆ.ಪಿ.ಕೇಶವ ಮೆನನ್. ಕೆಳವರ್ಗದ ಜನರಲ್ಲಿ ಮದ್ಯ ವ್ಯಸನದ ವಿರುದ್ಧ ಪ್ರಚಾರ ಮಾಡಬೇಕು ಎಂದು ಗಾಂಧೀಜಿ ತೇವನ್ ಗೆ ಸಲಹೆ ನೀಡಿದ್ದರು. ಅಲ್ಲದೆ ಈ ಕೆಳ ಜಾತಿ ಜನರು ಎಲೆಗಳು ಮತ್ತು ಕಲ್ಲುಗಳಿಂದ ಮಾಡಿದ ಆಭರಣಗಳನ್ನು ಧರಿಸುವುದನ್ನು ಬಿಡುವಂತೆ ಮಾಡಬೇಕು ಎಂದು ತೇವನ್ ಗೆ ಗಾಂಧೀಜಿ ಸೂಚಿಸಿದ್ದರು.
ವೈಕ್ಕಂ ಸತ್ಯಾಗ್ರಹದ ಸಮಯದಲ್ಲಿ ಅಮಚಡಿ ತೇವನ್ ಮೇಲೆ ಉನ್ನತ ಜಾತಿಯ ಹಲವರು ದಾಳಿ ಮಾಡಿದ್ದರು. ಈ ವೇಳೆ ತೇವನ್ ಅವರ ಕಣ್ಣುಗಳಿಗೆ ಸುಣ್ಣದ ದ್ರಾವಣವನ್ನು ಸುರಿದು, ಚಿತ್ರಹಿಂಸೆ ನೀಡಿದ್ದರು. ಇದರಿಂದ ಅವರು ಬಹುತೇಕ ಕುರುಡರಾಗಿದ್ದರು. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೆ.ಪಿ.ಕೇಶವ ಮೆನನ್, ಗಾಂಧೀಜಿಯವರು ತೇವನ್ ಗೆ ಔಷಧಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದರು. ಇದು ತೇವನ್ ಅವರಿಗೆ ದೃಷ್ಟಿ ಮರಳಿ ಪಡೆಯಲು ನೆರವಾಯಿತು.
ವೈಕ್ಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಚಡಿ ತೇವನ್ ಮತ್ತು ಇತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದರು. 1925 ರಲ್ಲಿ ಅಮಚಡಿ ತೇವನ್ ಜೈಲಿನಿಂದ ಬಿಡುಗಡೆ ಹೊಂದಿ ಊರಿಗೆ ಮರಳಿದಾಗ, ಅವರ ಮನೆಯನ್ನು ಧ್ವಂಸ ಮಾಡಲಾಗಿತ್ತು. ಮೇಲ್ಜಾತಿಯವರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಟಿ.ಕೆ ಮಾಧವನ್ ಅವರ ಸಹಾಯದಿಂದ ಅದೇ ದ್ವೀಪದಲ್ಲಿ ತೇವನ್ ಅವರಿಗೆ ಒಂದು ಎಕರೆ ಜಮೀನು ಸಿಕ್ಕಿತು.
ಕೊನೆಯವರೆಗೂ ಸಮಾಜಕ್ಕಾಗಿ, ದೇಶಕ್ಕಾಗಿ ಹೋರಾಡಿದ ಅಮಚಡಿ ತೇವನ್ ಅವರ ನೆನಪಿಗಾಗಿ ಅಮಚಡಿ ತುರುತ್ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹರ್ ಘರ್ ತಿರಂಗಾ- ಈ ವರ್ಷ 30 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ, 500 ಕೋಟಿ ಆದಾಯ: ಸಿಎಐಟಿ

ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಉದ್ದಿಮೆಗಳ ಖಾತಾ ಬದಲಾವಣೆ ಸಮಸ್ಯೆಗೆ ತ್ವರಿತ ಪರಿಹಾರ: ಅತಿಕ್

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ

ಪಠಾಣ್ ಯಶಸ್ಸು; ಜೀವನವನ್ನು ಮತ್ತೆ ಸಿನಿಮಾಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು ಎಂದ ಶಾರುಖ್