ಸ್ವಾತಂತ್ರ್ಯ ವೀರರು@75: ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ಹೋರಾಡಿದ್ದ ಧೀರ ಅಮಚಡಿ ತೇವನ್

ಅಸ್ಪೃಶ್ಯರಾದ ಈ ಸಮುದಾಯದ ಬದುಕು ಆ ದಿನಗಳಲ್ಲಿ ಅತ್ಯಂತ ಶೋಚನೀಯವಾಗಿತ್ತು.

ಕೀರ್ತನ್ ಶೆಟ್ಟಿ ಬೋಳ, Aug 9, 2022, 2:46 PM IST

independence 75 k

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಂದಿ ಶ್ರಮವಿದೆ. ಸಾವಿರಾರು ಮಂದಿ ಹೋರಾಟಗಾರರು ಎಲೆಮರೆಯ ಕಾಯಿಯಂತೆ ಮಹಾನ್ ನಾಯಕರ ಮರೆಯಲ್ಲಿಯೇ ಹೋರಾಡಿದ್ದಾರೆ. ದೇಶಕ್ಕಾಗಿ, ಸಮಾಜದ ಒಳಿತಿಗಾಗಿ ಹೋರಾಡಿದವರಲ್ಲಿ ಕೇರಳ ಅಮಚಡಿ ತೇವನ್ ಕೂಡಾ ಒಬ್ಬರು. ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ನಿಂತು, ನಂತರ ಗಾಂಧೀಜಿ ಅನುಯಾಯಿಯಾಗಿ ಬೆಳೆದ ಅಮಚಡಿ ತೇವನ್ ಅವರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೆನೆಯಲೇ ಬೇಕು.

ಕೇರಳದ ಆಲಪ್ಪಿ ಜಿಲ್ಲೆಯ ಚೇರ್ತಲಾ ತಾಲೂಕಿನ ಪೆರುಂಬಲಂ ದ್ವೀಪದಲ್ಲಿ ಹುಟ್ಟಿದವರು ಈ ಅಮಚಡಿ ತೇವನ್. ಇವರು ಇಲ್ಲಿನ ಪುಲಯಾ ಸಮುದಾಯಕ್ಕೆ ಸೇರಿದವರು. ಅಸ್ಪೃಶ್ಯರಾದ ಈ ಸಮುದಾಯದ ಬದುಕು ಆ ದಿನಗಳಲ್ಲಿ ಅತ್ಯಂತ ಶೋಚನೀಯವಾಗಿತ್ತು. ಆದರೆ ಇತರ ಪುಲಯ ಮಕ್ಕಳಿಗಿಂತ ಭಿನ್ನವಾಗಿ, ಅವರು ಕ್ರಾಂತಿಕಾರಿ ಮಹಿಳೆ ಅಚ್ಚುಕುಟ್ಟಿ ಅಮ್ಮನ ಸಹಾಯದಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಭಾಗ್ಯ ಪಡೆದರು.

ಆದರೆ ಮೇಲ್ಜಾತಿಯ ಜನರ ಪ್ರತಿಭಟನೆಯಿಂದಾಗಿ ಸಾಕು ಮನೆಯಿಂದ ಹೊರಹಾಕಲ್ಪಟ್ಟ ಅಮಚಡಿ ತೇವನ್ ಇತರ ಪುಲಯ ಜನರಂತೆ ಗದ್ದೆಯಲ್ಲಿ ಜೀತದ ಕೆಲಸ ಮಾಡಬೇಕಾಯಿತು. ಆದರೆ ಅಕ್ಷರ ಜ್ಞಾನ ಹೊಂದಿದ್ದ ತೇವನ್, ಸಮಾಜ ಸುಧಾರಕರ ಕೃತಿಗಳನ್ನು ಓದುತ್ತಿದ್ದರು. ಈ ಸಮಯದಲ್ಲಿ ಅವರು ಗಾಂಧೀಜಿ ಮತ್ತು ನಾರಾಯಣ ಗುರುಗಳ ಬರಹಗಗಳಿಂದ ಆಕರ್ಷಿತರಾದರು.

ಈ ವೇಳೆ ಪ್ರಕರಣವೊಂದರಲ್ಲಿ ಮೇಲ್ಜಾತಿಯ ಗುಂಪೊಂದು ತೇವನ್ ರನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಿತ್ತು. ಪೊಲೀಸರು ಈತನನ್ನು ಬಂಧಿಸಿ ಕ್ರೂರವಾಗಿ ಹಿಂಸಿಸಿದ್ದರು. ಅಸ್ಪೃಶ್ಯತೆ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದ ಅಮಚಡಿ ತೇವನ್ ಈ ಕಾರಣದಿಂದಲೇ ಕಾಂಗ್ರೆಸ್ಸಿನ ಪ್ರಬಲ ಬೆಂಬಲಿಗರಾದರು. ತೇವನ್ ಎಷ್ಟು ರೆಬೆಲ್ ಆಗಿದ್ದರು ಎಂದರೆ ಆಗ ಕೆಳ ಜಾತಿಯವರು ಧರಿಸಲೇ ಬಾರದು ಎಂಬಂತಿದ್ದ ಬಿಳಿ ಬಟ್ಟೆಯನ್ನೇ ಅವರು ಧರಿಸುತ್ತಿದ್ದರು. ಇದರಿಂದ ಮೇಲ್ಜಾತಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಸ್ಪೃಶ್ಯತೆ ಮತ್ತು ಅನಾಚಾರದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಕಾಂಗ್ರೆಸ್ ಕರೆ ನೀಡಿದಾಗ ಟಿ.ಕೆ. ಮಾಧವನ್ ಅವರು ವೈಕ್ಕಂ ಸತ್ಯಾಗ್ರಹವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದರು. ಇದರ ಪ್ರಯತ್ನದ ಭಾಗವಾಗಿ ತೇವನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಟಿ.ಕೆ.ಮಾಧವನ್ ಪೂತೊಟ್ಟ ದೇವಸ್ಥಾನಕ್ಕೆ ಪ್ರವೇಶಿಸಿದಾಗ ಅಮಚಡಿ ತೇವನ್ ಮತ್ತು ಕೆಳವರ್ಗದ ಪುಲ್ಯರ ಗುಂಪು ಕೂಡ ದೇವಸ್ಥಾನವನ್ನು ಪ್ರವೇಶಿಸಿ ದೇವರ ಮುಂದೆ ಪ್ರಾರ್ಥಿಸಿದರು. ಇದು ಮೆಲ್ಜಾತಿಗೆ ಅರಗಿಸಲಾಗಲಿಲ್ಲ. ಪರಿಣಾಮ ತೇವನ್ ಮತ್ತು ಟಿ.ಕೆ.ಮಾಧವನ್ ಅವರನ್ನು ಬಂಧಿಸಿ ಎರಡು ವಾರಗಳ ಕಾಲ ಜೈಲಿನಲ್ಲಿರಿಸಲಾಯಿತು.

ಪ್ರಬಲ ಕಾಂಗ್ರೆಸ್ಸಿಗರಾಗಿ, ತೇವನ್ ಅವರು ವೈಕ್ಕಂ ಸತ್ಯಾಗ್ರಹವನ್ನು ಸೇರಿದರು. ಸತ್ಯಾಗ್ರಹದ ಸಮಯದಲ್ಲಿ ಕೆ.ಪಿ.ಕೇಶವ ಮೆನನ್ ಮತ್ತು ಟಿ.ಕೆ.ಮಾಧವನ್ ಅವರು ತೇವನ್ ಅವರನ್ನು ಬೆಂಬಲಿಸಿದರು. ಅಲ್ಲದೆ ಗಾಂಧೀಜಿಯನ್ನು ಭೇಟಿಯಾಗಲು ತೇವನ್‌ ಗೆ ಸಹಾಯ ಮಾಡಿದವರು ಕೆ.ಪಿ.ಕೇಶವ ಮೆನನ್. ಕೆಳವರ್ಗದ ಜನರಲ್ಲಿ ಮದ್ಯ ವ್ಯಸನದ ವಿರುದ್ಧ ಪ್ರಚಾರ ಮಾಡಬೇಕು ಎಂದು ಗಾಂಧೀಜಿ ತೇವನ್‌ ಗೆ ಸಲಹೆ ನೀಡಿದ್ದರು. ಅಲ್ಲದೆ ಈ ಕೆಳ ಜಾತಿ ಜನರು ಎಲೆಗಳು ಮತ್ತು ಕಲ್ಲುಗಳಿಂದ ಮಾಡಿದ ಆಭರಣಗಳನ್ನು ಧರಿಸುವುದನ್ನು ಬಿಡುವಂತೆ ಮಾಡಬೇಕು ಎಂದು ತೇವನ್ ಗೆ ಗಾಂಧೀಜಿ ಸೂಚಿಸಿದ್ದರು.

ವೈಕ್ಕಂ ಸತ್ಯಾಗ್ರಹದ ಸಮಯದಲ್ಲಿ ಅಮಚಡಿ ತೇವನ್ ಮೇಲೆ ಉನ್ನತ ಜಾತಿಯ ಹಲವರು ದಾಳಿ ಮಾಡಿದ್ದರು. ಈ ವೇಳೆ ತೇವನ್ ಅವರ ಕಣ್ಣುಗಳಿಗೆ ಸುಣ್ಣದ ದ್ರಾವಣವನ್ನು ಸುರಿದು, ಚಿತ್ರಹಿಂಸೆ ನೀಡಿದ್ದರು. ಇದರಿಂದ ಅವರು ಬಹುತೇಕ ಕುರುಡರಾಗಿದ್ದರು. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೆ.ಪಿ.ಕೇಶವ ಮೆನನ್, ಗಾಂಧೀಜಿಯವರು ತೇವನ್ ಗೆ ಔಷಧಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದರು. ಇದು ತೇವನ್ ಅವರಿಗೆ ದೃಷ್ಟಿ ಮರಳಿ ಪಡೆಯಲು ನೆರವಾಯಿತು.

ವೈಕ್ಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಚಡಿ ತೇವನ್ ಮತ್ತು ಇತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದರು. 1925 ರಲ್ಲಿ ಅಮಚಡಿ ತೇವನ್ ಜೈಲಿನಿಂದ ಬಿಡುಗಡೆ ಹೊಂದಿ ಊರಿಗೆ ಮರಳಿದಾಗ, ಅವರ ಮನೆಯನ್ನು ಧ್ವಂಸ ಮಾಡಲಾಗಿತ್ತು. ಮೇಲ್ಜಾತಿಯವರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಟಿ.ಕೆ ಮಾಧವನ್ ಅವರ ಸಹಾಯದಿಂದ ಅದೇ ದ್ವೀಪದಲ್ಲಿ ತೇವನ್ ಅವರಿಗೆ ಒಂದು ಎಕರೆ ಜಮೀನು ಸಿಕ್ಕಿತು.

ಕೊನೆಯವರೆಗೂ ಸಮಾಜಕ್ಕಾಗಿ, ದೇಶಕ್ಕಾಗಿ ಹೋರಾಡಿದ ಅಮಚಡಿ ತೇವನ್ ಅವರ ನೆನಪಿಗಾಗಿ ಅಮಚಡಿ ತುರುತ್‌ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb tiranga sale 4

ಹರ್ ಘರ್ ತಿರಂಗಾ- ಈ ವರ್ಷ 30 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ, 500 ಕೋಟಿ ಆದಾಯ: ಸಿಎಐಟಿ

ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.