ಬನಹಟ್ಟಿ : 15 ದಿನಗಳಲ್ಲಿ ಎರಡು ಕುಟುಂಬದ ನಾಲ್ವರ ಸಾವು ..!
Team Udayavani, Jun 18, 2021, 8:08 PM IST
ಬನಹಟ್ಟಿ : ಕೊರೊನಾ 2ನೇ ಅಲೆ ಎಂಬ ಮಹಾಮಾರಿಗೆ 14 ದಿನಗಳಲ್ಲಿ ಎರಡು ಕುಟುಂಬಗಳ ಸಂಬಂಧಿಗಳಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟರೆ ಮತ್ತಿಬ್ಬರು ಅಸ್ತಮಾದಿಂದ ಒಟ್ಟು ನಾಲ್ವರು ಬಲಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.
ಕೊರೊನಾ 2ನೇ ಅಲೆ ಬಹಳಷ್ಟು ಜನರಿಗೆ ಇನ್ನಿಲ್ಲದ ತೊಂದರೆ ಕೊಟ್ಟಿದೆ. ಮದುವೆ, ಮಕ್ಕಳೊಂದಿಗೆ ಸುಂದರ ಬದುಕು ನಡೆಸುತ್ತಿದ್ದವರ ಬಾಳಿಗೆ ಕೊಳ್ಳಿ ಇಡುತ್ತಿದೆ. ವಾರದ ಹಿಂದೆ ನೆಮ್ಮದಿಯ ಬದುಕು ನಡೆಸುತ್ತಿದ್ದವರ ಕುಟುಂಬಗಳೀಗ ಸಂಕಷ್ಟಕ್ಕೆ ಒಳಗಾಗುತ್ತಿದೆ. ಕುಟುಂಬಸ್ಥರನ್ನು ಕಳೆದುಕೊಂಡ ಮನೆಯಲ್ಲಿ ನೀರವ ಮೌನ ತಾಳಿದೆ.
ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 15290 ಸೋಂಕಿತರು ಗುಣಮುಖ; 5783 ಹೊಸ ಪ್ರಕರಣ ಪತ್ತೆ
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಶಿರಹಟ್ಟಿ ಹಾಗೂ ಪಡನಡಿ ಸಂಬಂಧಿಗಳಲ್ಲಿ ಬಾಳಪ್ಪ ಶಿರಹಟ್ಟಿ(89) ಹಾಗೂ ಸುಮಿತ್ರಾ ಭೂಪಾಲ ಶಿರಹಟ್ಟಿ(61) ಇಬ್ಬರೂ ಚಿಕಿತ್ಸೆ ಫಲಿಸದೆ ಕೊರೊನಾದಿಂದ ಮೃತಪಟ್ಟಿದ್ದರೆ ಕಾಶವ್ವ ಶ್ರೀಪಾಲ ಪಡನಡಿ(42) ಹಾಗೂ ಶೋಭಾ ಅಲ್ಲಪ್ಪ ಪಡನಡಿ(25) ಅಸ್ತಮಾ ರೋಗಕ್ಕೆ ಬಲಿಯಾಗಿದ್ದು, ಇವರೆಲ್ಲರ ಸಾವು 15 ದಿನಗಳಲ್ಲಾಗಿರುವದು ಉಭಯ ಕುಟುಂಬಗಳನ್ನು ತಲ್ಲಣಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ