ಬೀದರ್ ಕೋವಿಡ್ ಸೋಂಕಿಗೆ 3 ಬಲಿ! 74 ಮಂದಿಗೆ ಸೋಂಕು ದೃಢ


Team Udayavani, Jul 22, 2020, 8:38 PM IST

ಬೀದರ್ ಕೋವಿಡ್ ಸೋಂಕಿಗೆ 3 ಬಲಿ! 74 ಮಂದಿಗೆ ಸೋಂಕು ದೃಢ

ಬೀದರ್: ಗಡಿ ನಾಡು ಬೀದರ್ ನಲ್ಲಿ ಸತತ ಐದು ದಿನಗಳಿಂದ ಕೋವಿಡ್ ಸೋಂಕು ಸಾವಿನ ರಣಕೇಕೆ ಹಾಕುತ್ತಿದ್ದು, ಬುಧವಾರ ಮತ್ತೆ ವೈರಸ್‌ನಿಂದ ಮೂವರು ಬಲಿಯಾಗಿದ್ದಾರೆ. ಜತೆಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು 74 ಪಾಸಿಟಿವ್ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಮತ್ತಷ್ಟು ವೇಗ ಪಡೆದುಕೊಂಡು ಜನರನ್ನು ಬೆಚ್ಚಿ ಬಿಳಿಸುತ್ತಿದೆ.

ಸಾರಿ ಲಕ್ಷಣಗಳಿಂದ ಬಳಲುತ್ತಿದ್ದ ಬೀದರ ತಾಲೂಕಿನ 67, 58 ವರ್ಷದ ಪುರುಷರು ಹಾಗೂ 57 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ಮತ್ತು ಜ್ವರ ತೊಂದರೆ ಹಿನ್ನಲೆ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಈ ರೋಗಿಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಎಲ್ಲರಲ್ಲೂ ವೈರಾಣು ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಕೇವಲ 5 ದಿನಗಳಲ್ಲಿ 13 ಜನ ಸಾವಿನ ಕದ ತಟ್ಟಿದ್ದು, ಮೃತರ ಸಂಖ್ಯೆ 66ಕ್ಕೆ ಏರಿಕೆ ಕಂಡಿದೆ. ಇನ್ನೊಂದೆಡೆ ಬುಧವಾರ ಒಂದೇ ದಿನ 186 ಜನರು ಗುಣಮುಖರಾಗಿದ್ದು ಕೊಂಚ ನೆಮ್ಮದಿ ತಂದಂತಾಗಿದೆ.

ಒಟ್ಟು 74 ಪಾಸಿಟವ್ ಕೇಸ್‌ಗಳಲ್ಲಿ ಅತಿ ಹೆಚ್ಚು ಬೀದರ್ ತಾಲೂಕಿನಲ್ಲೇ 25 ಪ್ರಕರಣ ಸೇರಿವೆ. ಹುಮನಾಬಾದ 15, ಬಸವಕಲ್ಯಾಣ 13, ಭಾಲ್ಕಿ 9, ಕಮಲನಗರ 5, ಚಿಟಗುಪ್ಪ ಮತ್ತು ಔರಾದ ತಲಾ 3 ಮತ್ತು ಹುಲಸೂರು ತಾಲೂಕಿನಲ್ಲಿ 1 ಪ್ರಕರಣ ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 1542ಕ್ಕೆ ಏರಿಕೆಯಾಗಿದೆ. 63 ಮಂದಿ ಸಾವನ್ನಪ್ಪಿದ್ದರೆ, 1029 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 445 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 47,002 ಜನರ ವರದಿ ತಪಾಸಣೆ ಮಾಡಲಾಗಿದ್ದು, 44,883 ಮಂದಿಯದ್ದು ನೆಗೆಟಿವ್ ಬಂದಿದೆ. ಇನ್ನು 577 ಜನರ ವರದಿ ಬರುವುದು ಬಾಕಿ ಇದೆ.

ಬೀದರ ನಗರ-4, ಗೋಲೇಖಾನಾ, ಮುಲ್ತಾನಿ ಕಾಲೊನಿ, ಪ್ರತಾಪ ನಗರ ತಹಸೀಲ್ ಕಚೇರಿ, ಮಂಗಲಪೇಟ್, ಸಾಯಿ ಕಾಲೋನಿ, ಅಮಲಾಪುರ, ದೀನ್ ದಯಾಳ ನಗರ ಸಿಎಂಸಿ, ಶಕ್ತಿ ನಗರ ಚಿಟ್ಟಾ ಕ್ರಾಸ್ ಮುಸ್ತೈದಪುರ, ಏಡೇನ್ ಕಾಲೊನಿ, ಮುಲ್ತಾನಿ ಕಾಲೋನಿ, , ಮೈಲೂರ, ತಹಸೀಲ್ ಕಚೇರಿ, ಪ್ರಯಾವಿ ಆಸ್ಪತ್ರೆ, ಶಿವನಗರ ಮತ್ತು ಗುಂಪಾದಲ್ಲಿ ತಲಾ 1 ಕೇಸ್, ತಳವಾಡ 2, ಜನವಾಡಾ 3 ಕೇಸ್‌ಗಳು ಪತ್ತೆಯಾಗಿವೆ.

ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) 6, ತಾಳಮಡಗಿ, ಹುಣಸಗೇರಾ, ಕನಕಟ್ಟಾ, ನೂರ್‌ಖಾ ಅಖಾಡಾ, ಭವಾನಿ ಮಂದಿರ ಬಳಿ, ವಾಂಜರಿ ಮತ್ತು ಜಲಸಂಗಿಯಲ್ಲಿ ತಲಾ 1, ಬಸವಕಲ್ಯಾಣ ತಾಲೂಕಿನ ಬೆಟಬಾಲಕುಂದಾ 3, ಧನ್ನೂರಾ (ಎಸ್) 2, ಲಾಡವಂತಿ, ಶಾಪುರಗಲ್ಲಿ ತಲಾ 1, ಬಸವಕಲ್ಯಾಣ 2, ನಾರಾಯಣಪುರ, ತ್ರಿಪುರಾಂತ, ಕಾಂಬಳೇವಾಡಿ, ಗೋರ್ಟಾ ಗ್ರಾಮದಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.